ಆ್ಯಪ್ನಗರ

ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ

ಅಂಕೋಲಾ: ಸಾಮಾಜಿಕ ಕಾರ್ಯದ ಮೂಲಕ ಲಯನ್ಸ್‌ ಕ್ಲಬ್‌ ಹೆಸರಾಗಿದೆ. ಇಲ್ಲಿ ಪ್ರತಿಯೊಬ್ಬರಿಗೂ ಸೇವೆ ಮಾಡಬೇಕೆನ್ನುವ ತುಡಿತವಿದೆ. ಲಾಯನ್ಸ್‌ ಸದಸ್ಯರೆಲ್ಲರೂ ಸೇರಿ ಉತ್ತಮ ಕಾರ್ಯಗಳ ಮೂಲಕ ತೊಂದರೆಯಲ್ಲಿರುವವರಿಗೆ ಸಹಾಯ ಮಾಡಬೇಕಿದೆ ಎಂದು ಲಾಯನ್ಸ್‌ ಪದಗ್ರಹಣಾಧಿಕಾರಿ ಶ್ರೀಕಾಂತ ಮೋರೆ ಹೇಳಿದರು. ತಾಲೂಕಿನ ನಾಡವರ ಸಭಾಭವನದಲ್ಲಿ ಹಮ್ಮಿಕೊಂಡ ಲಯನ್ಸ್‌ ಕ್ಲಬ್‌ ಅಂಕೋಲಾ ಕರಾವಳಿಯ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

Vijaya Karnataka 9 Jul 2019, 5:00 am
ಅಂಕೋಲಾ: ಸಾಮಾಜಿಕ ಕಾರ್ಯದ ಮೂಲಕ ಲಯನ್ಸ್‌ ಕ್ಲಬ್‌ ಹೆಸರಾಗಿದೆ. ಇಲ್ಲಿ ಪ್ರತಿಯೊಬ್ಬರಿಗೂ ಸೇವೆ ಮಾಡಬೇಕೆನ್ನುವ ತುಡಿತವಿದೆ. ಲಾಯನ್ಸ್‌ ಸದಸ್ಯರೆಲ್ಲರೂ ಸೇರಿ ಉತ್ತಮ ಕಾರ್ಯಗಳ ಮೂಲಕ ತೊಂದರೆಯಲ್ಲಿರುವವರಿಗೆ ಸಹಾಯ ಮಾಡಬೇಕಿದೆ ಎಂದು ಲಾಯನ್ಸ್‌ ಪದಗ್ರಹಣಾಧಿಕಾರಿ ಶ್ರೀಕಾಂತ ಮೋರೆ ಹೇಳಿದರು. ತಾಲೂಕಿನ ನಾಡವರ ಸಭಾಭವನದಲ್ಲಿ ಹಮ್ಮಿಕೊಂಡ ಲಯನ್ಸ್‌ ಕ್ಲಬ್‌ ಅಂಕೋಲಾ ಕರಾವಳಿಯ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
Vijaya Karnataka Web KWR-7ANK4


ಜಾರ್ಜ್‌ ಫರ್ನಾಂಡಿಸ್‌ ಮಾತನಾಡಿ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಅನೇಕ ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಮುಂದಿನ ಸಮುದಾಯದವರಿಗೆ ಅತಿ ಅವಶ್ಯವಾಗಿ ಬೇಕಾಗಿರುವ ನೀರಿನ ಮೂಲವನ್ನು ಉಳಿಸಿಕೊಳ್ಳಲು ಎಲ್ಲರಿಗೂ ಮಾಹಿತಿ ನೀಡುವ ಅವಶ್ಯಕತೆ ಇದೆ. ಪರಿಸರ ಜಾಗೃತಿ, ಸ್ವಚ್ಛತೆಯತ್ತ ಗಮನ ನೀಡಿ ಮುಂದಿನ ಜನಾಂಗಕ್ಕೆ ಕೊಡುಗೆ ಕೊಡುವ ಅವಶ್ಯಕತೆ ಇದೆ ಎಂದರು.

ಲಯನ್ಸ್‌ ನೂತನ ಅಧ್ಯಕ್ಷ ಮಹಂತೇಶ ರೇವಡಿ. ಅಧಿಕಾರ ಸ್ವೀಕರಿಸಿ ಮಾತನಾಡಿದರು. ನಿಕಟಪೂರ್ವ ಅಧ್ಯಕ್ಷ ಗಣಪತಿ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿನೋದ ನಾಯ್ಕ, ಸುರೇಶ ನಾಯ್ಕ, ಡಾ. ಆರ್‌.ಜಿ.ಗುಂದಿ ಅಭಿನಂದನಾ ಪರ ಮಾತನಾಡಿದರು.

ಪ್ರೊ. ಕೆ.ವಿ.ಶೆಟ್ಟಿ, ಪ್ರೊ. ಕೆ.ವಿ.ನಾಯ್ಕ, ವಿನೋದ ನಾಯ್ಕ ಇದ್ದರು. ಶೀತಲ ಆಗೇರ ಪ್ರಾರ್ಥಿಸಿದರು. ಗಣಪತಿ ನಾಯಕ ಸ್ವಾಗತಿಸಿದರು. ಸುಭಾಷ ಕಾರೇಬೈಲ್‌ ನಿರೂಪಿದರು. ಡಾ. ಕರುಣಾಕರ ಎಮ್‌.ಎನ್‌. ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ