ಆ್ಯಪ್ನಗರ

ನಿವೇಶನ ಇಲ್ಲದವರಿಗೂ ಮನೆ ಶೀಘ್ರ: ಹೆಬ್ಬಾರ್‌

ಮುಂಡಗೋಡ : ಸರಕಾರದಿಂದ ಬಡ ಜನರಿಗಾಗಿ ಕಟ್ಟಿ ಕೊಡುವ ಮನೆಗಳನ್ನು ಉತ್ತಮವಾಗಿ ನಿರ್ಮಿಸಿಕೊಡಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಶುಕ್ರವಾರ ಹೇಳಿದರು.

Vijaya Karnataka 8 Dec 2018, 5:00 am
ಮುಂಡಗೋಡ : ಸರಕಾರದಿಂದ ಬಡ ಜನರಿಗಾಗಿ ಕಟ್ಟಿ ಕೊಡುವ ಮನೆಗಳನ್ನು ಉತ್ತಮವಾಗಿ ನಿರ್ಮಿಸಿಕೊಡಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಶುಕ್ರವಾರ ಹೇಳಿದರು.
Vijaya Karnataka Web home for quick people hebbar
ನಿವೇಶನ ಇಲ್ಲದವರಿಗೂ ಮನೆ ಶೀಘ್ರ: ಹೆಬ್ಬಾರ್‌


ಪಟ್ಟಣದ ಕಂಬಾರಗಟ್ಟಿಯಲ್ಲಿ ಕೊಳಚೆ ಪ್ರದೇಶ ನಿವಾಸಿಗಳಿಗೆ ಸರಕಾರದಿಂದ ಮನೆ ನಿರ್ಮಿಸಿ ಕೊಡುವ ಯೋಜನೆಗೆ ಶಿಲಾನ್ಯಾಸ ನೇರವೆರಿಸಿ ಅವರು ಮಾತನಾಡಿದರು. ಸದ್ಯ ಕೊಳಚೆ ಪ್ರದೇಶದಲ್ಲಿ 208 ಮನೆಗಳು ನಿರ್ಮಿಸಲು ಮಂಜೂರಿಯಾಗಿದ್ದು, ಎಲ್ಲ ಬಡ ಜನರಿಗೆ ಈ ಮನೆಗಳನ್ನು ನೀಡಲಾಗುತ್ತಿದೆ. ವಿವಿಧ ಯೋಜನೆಯಡಿ ಸುಮಾರು ಐದುಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತಿದೆ. ಫಲಾನುಭವಿಗಳು ಮನೆ ನಿರ್ಮಾಣದ ಜಾಗೆ ತೋರಿಸಿದರೆ ಸಾಕು ಗುತ್ತಿಗೆದಾರರೆ ಮನೆ ನಿರ್ಮಿಸಿ ಕೊಡುತ್ತಾರೆ ಎಂದು ಹೇಳಿದರು.

ಈ ಹಿಂದೆ ಪಟ್ಟಣ ವ್ಯಾಪ್ತಿಯಲ್ಲಿ 650ಕ್ಕೂ ಅಧಿಕ ಮನೆಗಳನ್ನು ಮಂಜೂರಿ ಮಾಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಮನೆಗಳನ್ನು ನೀಡುವ ಮೂಲಕ ಎಲ್ಲ ಬಡವರಿಗೂ ಮನೆಗಳನ್ನು ವಿತರಿಸಲಾಗುವುದು. ನಿವೇಶನ ಹಾಗೂ ಮನೆ ಇಲ್ಲದ ಜನರಿಗೂ ಮುಂದಿನ ದಿನಗಳಲ್ಲಿ ಮನೆ ನೀಡಲಾಗುವುದು ಈ ಕುರಿತು ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಜಿಪಂ ಸದಸ್ಯ ರವಿಗೌಡ ಪಾಟೀಲ, ಮುಖಂಡರಾದ ಕೆ.ಆರ್‌.ಬಾಳೆಕಾಯಿ, ಪಿ.ಜಿ.ತಂಗಚ್ಚನ್‌, ಜ್ಞಾನದೇವ ಗುಡಿಯಾಳ. ಫಕ್ಕೀರಸ್ವಾಮಿ ಗುಲ್ಯಾನವರ, ಎನ್‌.ಎಂ.ದುಂಡಸಿ, ರಪೀಕ್‌ ಇನಾಂದಾರ್‌, ಪಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಪಟ್ಟಣ ಪಂಚಾಯಿತಿ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ