ಆ್ಯಪ್ನಗರ

ಸೋದೆ ಮಠದಲ್ಲಿ ಪೇಜಾವರ ಶ್ರೀಗೆ ಗೌರವ

ಶಿರಸಿ : ಶ್ರೀ ಕ್ಷೇತ್ರ ಸೋದೆ ವಾದಿರಾಜ ಮಠದಲ್ಲಿ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರ ಆರಾಧನಾ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು 80 ಸಂವತ್ಸರ ಸನ್ಯಾಸ ಜೀವನ ನಡೆಸಿದ ಪ್ರಯುಕ್ತ ಗೌರವ ಸಮರ್ಪಣೆ ಮಾಡಲಾಯಿತು.

Vijaya Karnataka 27 Mar 2019, 5:00 am
ಶಿರಸಿ : ಶ್ರೀ ಕ್ಷೇತ್ರ ಸೋದೆ ವಾದಿರಾಜ ಮಠದಲ್ಲಿ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರ ಆರಾಧನಾ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು 80 ಸಂವತ್ಸರ ಸನ್ಯಾಸ ಜೀವನ ನಡೆಸಿದ ಪ್ರಯುಕ್ತ ಗೌರವ ಸಮರ್ಪಣೆ ಮಾಡಲಾಯಿತು.
Vijaya Karnataka Web SRS-26SRS3


ಫಾಲ್ಗುಣ ಮಾಸದ ತದಿಗೆಯಂದು ಭಕ್ತಿಭಾವದಿಂದ ನಡೆದ ಗುರುಸಾರ್ವಭೌಮರ ಆರಾಧನೆಯ ಸಂದರ್ಭದಲ್ಲಿ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.

ವಾದಿರಾಜ ಮಠದಲ್ಲಿ ಸಪ್ತರಾತ್ರೋತ್ಸವ, ನಂತರ ಶ್ರೀ ಭೂತರಾಜರ ವಿಶೇಷ ಪೂಜೆಯಾದ ದಂಡೆಬಲಿ, ರಮಾತ್ರಿವಿಕ್ರಮ ದೇವರ ಬ್ರಹ್ಮರಥೋತ್ಸವ, ಕಲ್ಯಾಣೋತ್ಸವ, ಅವಭೃತಸ್ನಾನ, ಕೊನೆಯಲ್ಲಿ ಶ್ರೀ ವಾದಿರಾಜ ಆರಾಧನೆ ನೆರವೇರಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ