ಆ್ಯಪ್ನಗರ

ಹೊರಟ್ಟಿ ನಾಟಕಕ್ಕೆ ಬ್ರೇಕ್‌ ಹಾಕ್ತಿವಿ: ಟಿ.ಈಶ್ವರ

ಶಿರಸಿ : ಕಳೆದ 36 ವರ್ಷಗಳಿಂದ ಶಿಕ್ಷ ಕರ ಪ್ರತಿನಿಧಿಯಾಗಿರುವ ಬಸವರಾಜ ಹೊರಟ್ಟಿ ಅವರ ನಾಟಕ ಶಿಕ್ಷ ಕರಿಗೆ ಸಾಕಾಗಿದೆ. ತಾನಾಗಿಯೇ ಮನೆಗೆ ಹೋಗ್ತೆನೆ ಎಂದಿದ್ದ ಅವರು ಇದೀಗ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಮುಂದಾಗಿದ್ದಾರೆ. ನಿಶ್ಚಿತವಾಗಿಯೂ ಈ ಬಾರಿ ಅವರನ್ನು ಶಿಕ್ಷ ಕರು ಮನೆಗೆ ಕಳುಹಿಸಲಿದ್ದಾರೆ. ಅವರ ನಾಟಕಕ್ಕೆ ಬ್ರೇಕ್‌ ಬೀಳಲಿದೆ ಎಂದು ಪಶ್ಚಿಮ ಶಿಕ್ಷ ಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಟಿ.ಈಶ್ವರ ಹೇಳಿದರು.

ವಿಕ ಸುದ್ದಿಲೋಕ 8 May 2016, 4:00 am

ಶಿರಸಿ : ಕಳೆದ 36 ವರ್ಷಗಳಿಂದ ಶಿಕ್ಷ ಕರ ಪ್ರತಿನಿಧಿಯಾಗಿರುವ ಬಸವರಾಜ ಹೊರಟ್ಟಿ ಅವರ ನಾಟಕ ಶಿಕ್ಷ ಕರಿಗೆ ಸಾಕಾಗಿದೆ. ತಾನಾಗಿಯೇ ಮನೆಗೆ ಹೋಗ್ತೆನೆ ಎಂದಿದ್ದ ಅವರು ಇದೀಗ ಮತ್ತೆ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಮುಂದಾಗಿದ್ದಾರೆ. ನಿಶ್ಚಿತವಾಗಿಯೂ ಈ ಬಾರಿ ಅವರನ್ನು ಶಿಕ್ಷ ಕರು ಮನೆಗೆ ಕಳುಹಿಸಲಿದ್ದಾರೆ. ಅವರ ನಾಟಕಕ್ಕೆ ಬ್ರೇಕ್‌ ಬೀಳಲಿದೆ ಎಂದು ಪಶ್ಚಿಮ ಶಿಕ್ಷ ಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಟಿ.ಈಶ್ವರ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರತಿ ಬಾರಿ ಹಿಂಬಡ್ತಿ, ವರ್ಗಾವಣೆ ಮುಂತಾದ ವರದಿಗಳನ್ನು ಕಳುಹಿಸುವುದು, ಸರಕಾರಕ್ಕೆ ಪತ್ರ ಬರೆಯುವುದು ಮುಂತಾದ ನಾಟಕಗಳ ಮೂಲಕ ಹೊರಟ್ಟಿ ಮುಗ್ಧ ಶಿಕ್ಷ ಕರನ್ನು ಮೋಸಗೊಳಿಸುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.

ಈ ಬಾರಿ ಪಕ್ಷ , ಮುಖಂಡರು ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹಿಂದೆ ಗಂಭೀರವಾಗಿ ತೆಗೆದುಕೊಳ್ಳದೇ ಇರುವುದನ್ನೇ ಹೊರಟ್ಟಿ ಲಾಭವಾಗಿಸಿಕೊಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅದು ಸಾಧ್ಯವಿಲ್ಲ ಎಂದರು.

ಹೆಸರು ಅಳಿಸ್ತಿವಿ

ಕಳೆದ ಆರು ವರ್ಷಗಳಿಂದ ಶಿಕ್ಷ ಕರ ನಿರಂತರ ಸಂಪರ್ಕದಲ್ಲಿದ್ದೇನೆ. ಕೈಗಾರಿಕಾ ನಿಗಮದ ಅಧ್ಯಕ್ಷ ನಾಗಿ ಶಾಲೆಗಳಲ್ಲಿ ವನ ನಿರ್ಮಿಸುವ ಕಾರ್ಯ ಮಾಡಿದ್ದೇನೆ. ಪ್ರತಿಯೊಂದು ಶಾಲೆ, ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷ ಕರೊಂದಿಗೆ ಸಮಯ ಕಳೆಯುವ, ಅವರ ಸಮಸ್ಯೆ, ನೋವು ಅರಿಯುವುದಕ್ಕೆ ಅವಕಾಶವಾಗಿದೆ. ಅವರಿಗೂ ನನ್ನಲ್ಲಿ ಶೈಕ್ಷ ಣಿಕ ಗುಣಮಟ್ಟ ತರುವ, ನೆಮ್ಮದಿಯ ವಾತಾವರಣ ಸೃಷ್ಟಿಸುವ ಸಾಮರ್ಥ್ಯ‌ವಿದೆ ಎಂದು ಅರಿತಿದ್ದಾರೆ. ರಾಜ್ಯ ಬೋಧಕ-ಬೋಧಕೇತರ ಮಹಾಸಭಾ ರಚಿಸಿದ್ದಾರೆ. ಚುನಾವಣೆಯಲ್ಲಿ ತನ್ನನ್ನು ಬೆಂಬಲಿಸಲಿದ್ದಾರೆ. ಕಳೆದ 6 ಬಾರಿ ಆಯ್ಕೆಯಾಗಿ ಶಿಕ್ಷ ಕರ ಋುಣದಲ್ಲಿರುವ ಹೊರಟ್ಟಿ ಅವರ ಹೆಸರನ್ನು ಈ ಚುನಾವಣೆಯಲ್ಲಿ ಅಳಿಸಿ ಹಾಕ್ತೆವೆ ಎಂದರು.

ಅವಘಡ ನಡೆದು ಹೋಗಿತ್ತು

ಕಳೆದ ಆರು ವರ್ಷಗಳಿಂದ ಶಿಕ್ಷ ಕರೊಂದಿಗಿನ ಒಡನಾಡವಿದ್ದರೂ ಪಕ್ಷ ದ ಟಿಕೆಟ್‌ ಏಕಾಏಕಿ ಕೈ ತಪ್ಪುವಂತಾಗಿದ್ದು ಅದೊಂದು ಅವಘಡ. ಆದರೆ ಪಕ್ಷ ದ ಸಚಿವರು, ಶಾಸಕರು, ಮುಖಂಡರು, ಅದೇ ರೀತಿ ತನ್ನ ಶಿಕ್ಷ ಕರು ಹಕ್ಕೊತ್ತಾಯ ಮಾಡಿದ್ದರಿಂದ ಪುನ ಟಿಕೆಟ್‌ ದೊರಕುವಂತಾಯಿತು. ಆಪತ್ಕಾಲದಲ್ಲಿ ಇವರೆಲ್ಲ ತನ್ನ ಕೈ ಹಿಡಿದಿದ್ದಾರೆ. ತಮ್ಮ ಶಿಕ್ಷ ಕರ ನಡುವಿನ ಸಂಬಂಧವನ್ನು ಅರಿತು ಮೊದಲು ಟಿಕೆಟ್‌ ಪಡೆದಿದ್ದ ಬಸವರಾಜ ಗುರಿಕಾರ ಅವರು ಹಿಂದಕ್ಕೆ ಸರಿದಿದ್ದಾರೆ. ಅವರು ತನ್ನನ್ನು ಬೆಂಬಲಿಸಲಿದ್ದಾರೆ ಎಂದು ಈಶ್ವರ ತಿಳಿಸಿದರು.

-

ಕಾಗೇರಿ ವಿರುದ್ಧ ಆರೋಪ

ರಾಜ್ಯ ಸರಕಾರದ ಹುದ್ದೆಯನ್ನು ಚುನಾವಣೆ ಸಲುವಾಗಿ ಟಿ.ಈಶ್ವರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಶಾಸಕ ಕಾಗೇರಿ ಆರೋಪಿಸಿದ್ದಾರೆ. ಹಾಗಾದರೆ ಕರ್ನಾಟಕ ಅರಣ್ಯ ಮತ್ತು ಕೈಗಾರಿಕಾ ನಿಗಮದ ಅಧ್ಯಕ್ಷ ನಾಗಿ ಶಾಲೆಗಳಲ್ಲಿ ಗಿಡಗಳನ್ನು ನೆಟ್ಟಿದ್ದೇ ತಪ್ಪೆ. ಶಾಲಾ ವನ ನಿರ್ಮಿಸಿದ್ದು ತಪ್ಪು ಎಂದಾದರೆ ಶಾಸಕ ಕಾಗೇರಿ ಮಲೆನಾಡಲ್ಲಿ ಹುಟ್ಟಿದ್ದೇ ತಪ್ಪು ಎಂದು ಈಶ್ವರ ವ್ಯಂಗ್ಯವಾಡಿದರು. ಶಿಕ್ಷ ಣ ಸಚಿವರಾಗಿ ಕೆಲಸ ಮಾಡಿದಂತಹವರು ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದರು.

-

ನನಗ ಟಿಕೆಟ್‌ ಕೊಡಬಾರದಂತೆ

ಹುಬ್ಬಳ್ಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಾಗ ಸಿಎಂ ಅವರನ್ನು ಹೊರಟ್ಟಿ ಭೇಟಿಯಾಗಿದ್ದು ನಿಜ. ಬಾಗಿಲು ಹಾಕಿಕೊಂಡು ಮಾತುಕತೆ ನಡೆಸಿದ್ದು ಸತ್ಯ. ಆದರೆ ಅವರನ್ನು ಪಕ್ಷ ಕ್ಕೆ ಕರೆದುಕೊಳ್ತಿರಾ ಎಂದು ನಾವು ಸಿಎಂ ಹತ್ತಿರ ಕೇಳಿದ್ದೀವಿ. ಇಲ್ಲಪ್ಪ, ಅವನು ಯಾವುದೇ ಕಾರಣಕ್ಕೂ ಟಿ.ಈಶ್ವರಗೆ ಟಿಕೆಟ್‌ ಕೊಡಬ್ಯಾಡ್ರಿ ಎಂದಿದ್ದಾನೆ. ಅದು ಸಾಧ್ಯವಿಲ್ಲ ಎಂದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು ಎಂದು ಪ್ರಶ್ನೆಯೊಂದಕ್ಕೆ ಟಿ.ಈಶ್ವರ ಪ್ರತಿಕ್ರಿಯಿಸಿದರು. ಮುಖ್ಯಮಂತ್ರಿ ಭೇಟಿಯಾದ ಪೋಟೋವನ್ನೇ ಹಿಡಿದು ಅವರು ತಂತ್ರಗಾರಿಕೆ ಮಾಡ್ತಾರೆ. ಇಂಥ ಕುತಂತ್ರದಿಂದಲೇ ಅವರು ಇಷ್ಟು ವರ್ಷಗಳ ಕಾಲ ರಾಜಕಾರಣ ಮಾಡ್ತಾ ಬಂದಿದ್ದಾರೆ ಎಂದು ಹೊರಟ್ಟಿ ವಿರುದ್ಧ ಈಶ್ವರ ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ