ಆ್ಯಪ್ನಗರ

ಹೆಚ್ಚೆ ಹಾಕಿದ್ರೆ ಹುಷಾರ್‌

ಕಾರವಾರ: ಜಾತ್ರೆ ಮತ್ತು ಉತ್ಸವಗಳಲ್ಲಿ ಸಂಸ್ಕರಿಸದ ಸೂಜಿಯಿಂದ ಒಬ್ಬರಾದಂತೆ ಮತ್ತೊಬ್ಬರಿಗೆ ಒಂದೇ ಸೂಜಿಯಲ್ಲಿ ಹಚ್ಚೆ ಹಾಕುವುದು ಸೋಂಕಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಾತ್ರೆ ಉತ್ಸವಗಳಲ್ಲಿ ಹಚ್ಚೆ ಹಾಕುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ್‌ ಕೆ. ಆದೇಶಿಸಿದ್ದಾರೆ.

Vijaya Karnataka 21 May 2019, 5:00 am
ಕಾರವಾರ: ಜಾತ್ರೆ ಮತ್ತು ಉತ್ಸವಗಳಲ್ಲಿ ಸಂಸ್ಕರಿಸದ ಸೂಜಿಯಿಂದ ಒಬ್ಬರಾದಂತೆ ಮತ್ತೊಬ್ಬರಿಗೆ ಒಂದೇ ಸೂಜಿಯಲ್ಲಿ ಹಚ್ಚೆ ಹಾಕುವುದು ಸೋಂಕಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜಾತ್ರೆ ಉತ್ಸವಗಳಲ್ಲಿ ಹಚ್ಚೆ ಹಾಕುವುದನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಹರೀಶ್‌ಕುಮಾರ್‌ ಕೆ. ಆದೇಶಿಸಿದ್ದಾರೆ.
Vijaya Karnataka Web hushar is the most
ಹೆಚ್ಚೆ ಹಾಕಿದ್ರೆ ಹುಷಾರ್‌


ಯುವಜನರಲ್ಲಿ ಇತ್ತೀಚೆಗೆ ಹಚ್ಚೆ ಹಾಕಿಸಿಕೊಳ್ಳುವ ಆಸಕ್ತಿ ಹೆಚ್ಚಾಗುತ್ತಿದೆ. ಆದರೆ ಸಂಸ್ಕರಿಸದ ಸೂಜಿಯಲ್ಲಿ ಹಚ್ಚೆ ಹಾಕುವುದು ಎಚ್‌ಐವಿಯಂತಹ ಸೋಂಕಿಗೂ ಇದು ಕಾರಣವಾಗುವ ಅಪಾಯವಿದೆ. ಆದ್ದರಿಂದ ಎಚ್‌ಐವಿ ಸೋಂಕು ನಿವಾರಣ ಪ್ರಾಧಿಕಾರದ ಮುಖ್ಯಸ್ಥರು ಹಚ್ಚೆ ಹಾಕುವುದನ್ನು ನಿಷೇಧಿಸಲು ಸೂಚಿಸಿರುವ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಎಲ್ಲ ಜಾತ್ರೆ, ಉತ್ಸವ ಅಥವಾ ಇನ್ನಾವುದೇ ಕಡೆಗಳಲ್ಲಿ ಹಚ್ಚೆ ಹಾಕುವುದನ್ನು ನಿರ್ಬಂಧಿಸಲಾಗಿದೆ.

ಕಾನೂನು ಬಾಹಿರವಾಗಿ ಹಚ್ಚೆ ಹಾಕುವುದು ಕಂಡುಬಂದಲ್ಲಿ ಅವರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ವಹಿಸುವಂತೆ ಸಂಬಂಧಿಸಿದ ಇಲಾಖೆಗೆ ಸೂಚಿಸಿರುವುದಾಗಿ ಹಾಗೂ ಜಾತ್ರೆ ಮತ್ತು ಉತ್ಸವ ಸಮಿತಿಯವರು ಈ ಬಗ್ಗೆ ಎಚ್ಚರ ವಹಿಸುವಂತೆ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ