ಶಿರಸಿ : ಕಾವ್ಯ ಕವನಗಳೆಲ್ಲವೂ ಒಳಾಂತರಂಗದ ಬೆಳವಣಿಗೆ. ಮನುಷ್ಯನ ಒಳಾಂತರಂಗ ಬದಲಾವಣೆ ಇಲ್ಲದೇ ಬದುಕಿನ ಮಾನ ಅಳತೆ ಸಾಧ್ಯವಿಲ್ಲ ಎಂದು ಲೇಖಕಿ ವೀಣಾ ಬನ್ನಂಜೆ ಹೇಳಿದರು.
ನಗರದ ನಯನ ಸಭಾಂಗಣದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಹಾಗೂ ನಯನ ಫೌಂಡೇಶನ್ ಶನಿವಾರ ಸಂಜೆ ಸಂಘಟಿಸಿದ್ದ ವಿದ್ವಾಂಸ ಉಮಾಕಾಂತ ಭಟ್ಟ ಕೆರೆಕೈ ಅವರ ಜೀವ-ಮಾನ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.
ಮನುಷ್ಯನ ಭಾವನೆಯನ್ನು ತೊಳೆಯದ ಕವಿತೆ ಅವಿದ್ಯೆಯ ಉದಾಹರಣೆ ಎನ್ನಬಹುದು. ನಮ್ಮೊಳಗಿನ ಶೋಕ, ದುಃಖ, ಭಾವಗಳೆಲ್ಲವನ್ನೂ ಬದಿಗೊತ್ತಿ ಅಂತರಾಳದ ಮೌನದಲ್ಲಿನ ಸಾಂಗತ್ಯ ತೋರ್ಪಡಿಸುವ ಸಾಹಿತ್ಯ ಯೋಗಧಾರೆಯಾಗಿದೆ ಎಂದರು.
ಪ್ರತಿಯೊಬ್ಬನೂ ತಾನು ಯಾರೆಂಬ ಹುಡುಕಾಟದಲ್ಲಿ ತೊಡಗಿಕೊಳ್ಳಲು ಭೂಮಿಗೆ ಬಂದಿದ್ದಾರೆ. ಮನುಷ್ಯ ಜೀವನದ ಆಂತರ್ಯ ಅಭಿವೃದ್ಧಿಗೊಳ್ಳಬೇಕು. ಜೀವಕ್ಕೆ ಯಾರೂ ಇಲ್ಲದ ಅನಾಥ ಸ್ಥಿತಿ ಬಂದಾಗ ಮಾತ್ರ ದೇವರ ದರ್ಶನವಾಗುತ್ತದೆ. ಸಾಹಿತ್ಯ ಮತ್ತು ಬರವಣಿಗೆ ಮನುಷ್ಯನ ಅಂತರಾಳದ ಅಭಿವ್ಯಕ್ತಿಯಾಗಿದೆ. ಸಾಹಿತಿಯ ಮನದೊಳಗೆ ಭೋಗ ಭಾವನೆ ಇರುವವರೆಗೆ ಸಾಹಿತ್ಯವೂ ವರ್ಣನಾ ಭಾಗವಾಗಿರುತ್ತದೆ. ಆದ್ದರಿಂದಲೇ ಪ್ರಸ್ತುತ ಸಾಹಿತ್ಯ ಪರಂಪರೆ ಒಂದು ವಸ್ತುವಿನ ಬೆನ್ನು ಹಿಡಿದು ಸಾಗಿದೆ. ಕಥಾ ವಸ್ತುವೇ ಕಾವ್ಯದ ರೂಪ ತಾಳಿದ ಉದಾಹರಣೆಗಳೂ ಹೆಚ್ಚಿವೆ ಎಂದರು.
ರಂಗಕರ್ಮಿ ಕೆ.ವಿ.ಅಕ್ಷ ರ ಮಾತನಾಡಿ, ಬರಹಕ್ಕೆ ವ್ಯಕ್ತಿಯ ಹಂಗಿರಬಾರದು. ಬದಲಾಗಿ ಸಮುದಾಯದ ಹಂಗಿರಬೇಕು. ಕಾವ್ಯಕ್ಕೆ ಇಂದು ಬಡತನ ಬಂದಿದೆ. ಈಚೆಗಿನ ಕವಿಗಳ ಸಾಲುಗಳನ್ನು ಹೇಳಲೂ ಸಾಧ್ಯವಾಗುವುದಿಲ್ಲ ಎಂದರು.
ವಿದ್ವಾನ್ ಉಮಾಕಾಂತ ಭಟ್ಟ ಮಾತನಾಡಿ, ಕಾವ್ಯ ಎಂದರೆ ಕವಿಯ ಮಾತು. ಕವಿಯಾಗಿಸುವ ಮಾತು. ಅದು ಕಾವ್ಯ ಎಂದೆನಿಸಿಕೊಳ್ಳಲು ಅದು ಲೋಕಾರ್ಪಣೆಗೊಳ್ಳಬೇಕು. ನಾನು ಜೀವಮಾನದಲ್ಲಿ ಬರೆದ 65 ಕವನಗಳೇ ಇಂದು ಜೀವ-ಮಾನ ಕವನ ಸಂಕಲನವಾಗಿದೆ ಎಂದರು.
ಕವಯಿತ್ರಿ ಗಾಯತ್ರಿ ರಾಘವೇಂದ್ರ ಪ್ರಾರ್ಥಿಸಿದರು. ಡಾ.ಶಿವರಾಮ ಕೆವಿ ಸ್ವಾಗತಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ನಿರೂಪಿಸಿದರು.
ನಗರದ ನಯನ ಸಭಾಂಗಣದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಹಾಗೂ ನಯನ ಫೌಂಡೇಶನ್ ಶನಿವಾರ ಸಂಜೆ ಸಂಘಟಿಸಿದ್ದ ವಿದ್ವಾಂಸ ಉಮಾಕಾಂತ ಭಟ್ಟ ಕೆರೆಕೈ ಅವರ ಜೀವ-ಮಾನ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.
ಮನುಷ್ಯನ ಭಾವನೆಯನ್ನು ತೊಳೆಯದ ಕವಿತೆ ಅವಿದ್ಯೆಯ ಉದಾಹರಣೆ ಎನ್ನಬಹುದು. ನಮ್ಮೊಳಗಿನ ಶೋಕ, ದುಃಖ, ಭಾವಗಳೆಲ್ಲವನ್ನೂ ಬದಿಗೊತ್ತಿ ಅಂತರಾಳದ ಮೌನದಲ್ಲಿನ ಸಾಂಗತ್ಯ ತೋರ್ಪಡಿಸುವ ಸಾಹಿತ್ಯ ಯೋಗಧಾರೆಯಾಗಿದೆ ಎಂದರು.
ಪ್ರತಿಯೊಬ್ಬನೂ ತಾನು ಯಾರೆಂಬ ಹುಡುಕಾಟದಲ್ಲಿ ತೊಡಗಿಕೊಳ್ಳಲು ಭೂಮಿಗೆ ಬಂದಿದ್ದಾರೆ. ಮನುಷ್ಯ ಜೀವನದ ಆಂತರ್ಯ ಅಭಿವೃದ್ಧಿಗೊಳ್ಳಬೇಕು. ಜೀವಕ್ಕೆ ಯಾರೂ ಇಲ್ಲದ ಅನಾಥ ಸ್ಥಿತಿ ಬಂದಾಗ ಮಾತ್ರ ದೇವರ ದರ್ಶನವಾಗುತ್ತದೆ. ಸಾಹಿತ್ಯ ಮತ್ತು ಬರವಣಿಗೆ ಮನುಷ್ಯನ ಅಂತರಾಳದ ಅಭಿವ್ಯಕ್ತಿಯಾಗಿದೆ. ಸಾಹಿತಿಯ ಮನದೊಳಗೆ ಭೋಗ ಭಾವನೆ ಇರುವವರೆಗೆ ಸಾಹಿತ್ಯವೂ ವರ್ಣನಾ ಭಾಗವಾಗಿರುತ್ತದೆ. ಆದ್ದರಿಂದಲೇ ಪ್ರಸ್ತುತ ಸಾಹಿತ್ಯ ಪರಂಪರೆ ಒಂದು ವಸ್ತುವಿನ ಬೆನ್ನು ಹಿಡಿದು ಸಾಗಿದೆ. ಕಥಾ ವಸ್ತುವೇ ಕಾವ್ಯದ ರೂಪ ತಾಳಿದ ಉದಾಹರಣೆಗಳೂ ಹೆಚ್ಚಿವೆ ಎಂದರು.
ರಂಗಕರ್ಮಿ ಕೆ.ವಿ.ಅಕ್ಷ ರ ಮಾತನಾಡಿ, ಬರಹಕ್ಕೆ ವ್ಯಕ್ತಿಯ ಹಂಗಿರಬಾರದು. ಬದಲಾಗಿ ಸಮುದಾಯದ ಹಂಗಿರಬೇಕು. ಕಾವ್ಯಕ್ಕೆ ಇಂದು ಬಡತನ ಬಂದಿದೆ. ಈಚೆಗಿನ ಕವಿಗಳ ಸಾಲುಗಳನ್ನು ಹೇಳಲೂ ಸಾಧ್ಯವಾಗುವುದಿಲ್ಲ ಎಂದರು.
ವಿದ್ವಾನ್ ಉಮಾಕಾಂತ ಭಟ್ಟ ಮಾತನಾಡಿ, ಕಾವ್ಯ ಎಂದರೆ ಕವಿಯ ಮಾತು. ಕವಿಯಾಗಿಸುವ ಮಾತು. ಅದು ಕಾವ್ಯ ಎಂದೆನಿಸಿಕೊಳ್ಳಲು ಅದು ಲೋಕಾರ್ಪಣೆಗೊಳ್ಳಬೇಕು. ನಾನು ಜೀವಮಾನದಲ್ಲಿ ಬರೆದ 65 ಕವನಗಳೇ ಇಂದು ಜೀವ-ಮಾನ ಕವನ ಸಂಕಲನವಾಗಿದೆ ಎಂದರು.
ಕವಯಿತ್ರಿ ಗಾಯತ್ರಿ ರಾಘವೇಂದ್ರ ಪ್ರಾರ್ಥಿಸಿದರು. ಡಾ.ಶಿವರಾಮ ಕೆವಿ ಸ್ವಾಗತಿಸಿದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ನಿರೂಪಿಸಿದರು.