ಆ್ಯಪ್ನಗರ

ಜಿಲ್ಲೆವಿಂಗಡಿಸಿದರೆ ಯಲ್ಲಾಪುರ ಜಿಲ್ಲಾಕೇಂದ್ರವಾಗಲಿ

ಯಲ್ಲಾಪುರ : ಜಿಲ್ಲೆವಿಂಗಡಣೆಯಾದರೆ ಯಲ್ಲಾಪುರವನ್ನು ಜಿಲ್ಲಾಕೇಂದ್ರವನ್ನಾಗಿಸಬೇಕೆಂದು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಪಟ್ಟಣದ ಭಗತಸಿಂಗ್‌ ಆಟೋ ಮಾಲಕ ಮತ್ತು ಚಾಲಕ ಸಂಘ ಹಾಗೂ ವಿವಿಧ ಸಂಘದವರು ಶುಕ್ರವಾರ ಆಟೋಗಳ ಮೆರವಣಿಗೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.

Vijaya Karnataka 27 Oct 2019, 5:00 am
ಯಲ್ಲಾಪುರ : ಜಿಲ್ಲೆವಿಂಗಡಣೆಯಾದರೆ ಯಲ್ಲಾಪುರವನ್ನು ಜಿಲ್ಲಾಕೇಂದ್ರವನ್ನಾಗಿಸಬೇಕೆಂದು ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಪಟ್ಟಣದ ಭಗತಸಿಂಗ್‌ ಆಟೋ ಮಾಲಕ ಮತ್ತು ಚಾಲಕ ಸಂಘ ಹಾಗೂ ವಿವಿಧ ಸಂಘದವರು ಶುಕ್ರವಾರ ಆಟೋಗಳ ಮೆರವಣಿಗೆ ನಡೆಸಿ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
Vijaya Karnataka Web if the district is divided yallapur becomes the district headquarters
ಜಿಲ್ಲೆವಿಂಗಡಿಸಿದರೆ ಯಲ್ಲಾಪುರ ಜಿಲ್ಲಾಕೇಂದ್ರವಾಗಲಿ


ಈ ವೇಳೆ ಮಾತನಾಡಿದ ನಾಗರಿಕ ವೇದಿಕೆಯ ಅಧ್ಯಕ್ಷ ರಾಮು ನಾಯ್ಕ, ಸರಕಾರ ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲೆಯ ವಿಭಜನೆಗೆ ಮುಂದಾದರೆ, ಘಟ್ಟದ ಮೇಲಿನ ತಾಲೂಕುಗಳಿಗೆ ಮಧ್ಯವರ್ತಿ ಸ್ಥಳವಾಗಿರುವ ಯಲ್ಲಾಪುರ ಪಟ್ಟಣವನ್ನು ಜಿಲ್ಲಾಕೇಂದ್ರವನ್ನಾಗಿ ಮಾಡಬೇಕು. ಈ ಬೇಡಿಕೆಯು ಯಲ್ಲಾಪುರ ತಾಲೂಕು ಹಾಗೂ ಇನ್ನಿತರ ತಾಲೂಕುಗಳಿಗೆ ಪೂರಕವಾಗಿದೆ. ಯಲ್ಲಾಪುರ ಕೇಂದ್ರಕ್ಕೆ ಬೇರೆ ಬೇರೆ ತಾಲೂಕುಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ ಆದರೆ ಯಲ್ಲಾಪುರದ ಜನತೆ ಉತ್ತರ ಕನ್ನಡವನ್ನು ವಿಭಜಿಸುವಂತೆ ಕೇಳುವುದಿಲ್ಲಎಂದರು.

64 ಚದರ ಕಿ.ಮೀ. ವಿಸ್ತಾರವಾಗಿರುವ ಯಲ್ಲಾಪುರ ತಾಲೂಕು ಅಭಿವೃದ್ಧಿ ಪಡಿಸಲು ಎಲ್ಲಅವಕಾಶಗಳಿದ್ದು, ಸರಕಾರ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು. ಅಭಿವೃದ್ಧಿಗೆ ನಮ್ಮ ಧ್ವನಿ ಗಟ್ಟಿಗೊಳ್ಳದಿದ್ದರೆ ಯಲ್ಲಾಪುರಕ್ಕೆ ಸಿಗಲಿರುವ ಅವಕಾಶಗಳು ತಪ್ಪಿ ಹೋಗಲಿವೆ. ಯಲ್ಲಾಪುರದ ಅಭಿವೃದ್ಧಿ ಹಾಗೂ ಇನ್ನಿತರ ತಾಲೂಕುಗಳ ಬೆಳವಣಿಗೆಗೆ ಯಲ್ಲಾಪುರ ಪಟ್ಟಣ ಜಿಲ್ಲಾಕೇಂದ್ರವಾಗಬೇಕು ಎಂದು ಅವರು ಬೇಡಿಕೆ ಇಟ್ಟರು.

ತಾ.ಪಂ. ಅಧ್ಯಕ್ಷೆ ಭವ್ಯ ಶೆಟ್ಟಿ ಮಾತನಾಡಿ, ತಾವು ಸಂಪರ್ಕಿಸಿರುವ ಅನೇಕ ಹಳ್ಳಿಗಳಲ್ಲಿಮಹಿಳೆಯರು ಯಲ್ಲಾಪುರ ಜಿಲ್ಲಾಕೇಂದ್ರವಾಗಬೇಕು. ಈ ಹೋರಾಟದಲ್ಲಿನಾವು ಕೂಡ ಭಾಗಿಯಾಗುತ್ತೇವೆ ಎಂದು ನಮ್ಮ ಹೋರಾಟಕ್ಕೆ ಉತ್ತೇಜನ ನೀಡಿದ್ದಾರೆ. ಆಟೋ ಚಾಲಕರು ಹಳ್ಳಿಗಳಿಗೆ ಭೇಟಿ ನೀಡಿದಾಗ ಯಲ್ಲಾಪುರ ಜಿಲ್ಲಾಕೇಂದ್ರದ ಕುರಿತು ಮನವರಿಕೆ ಮಾಡಿಕೊಡಬೇಕು ಎಂದರು.

ಭಗತಸಿಂಗ್‌ ಆಟೋ ಮಾಲಕ ಮತ್ತು ಚಾಲಕ ಸಂಘದ ಅಧ್ಯಕ್ಷ ಸಂತೋಷ ನಾಯ್ಕ ಮಾತನಾಡಿ, ಘಟ್ಟದ ಮೇಲಿನ ತಾಲೂಕುಗಳಲ್ಲಿಯಲ್ಲಾಪುರ ತಾಲೂಕು ಜಿಲ್ಲಾಕೇಂದ್ರವಾಗಲು ಅತ್ಯಂತ ಸೂಕ್ತ ಸ್ಥಳವಾಗಿದೆ. ಇಲ್ಲಿಅಭಿವೃದ್ಧಿಗೆ ಬಹಳಷ್ಟು ಅವಕಾಶಗಳಿದ್ದರೂ, ಯಲ್ಲಾಪುರದಲ್ಲಿಯೇ ಉದ್ಯೋಗ ಸಿಗುವಂತಾಗಲು ಜಿಲ್ಲಾಕೇಂದ್ರ ಯಲ್ಲಾಪುರದಲ್ಲಿಆಗುವ ಅಗತ್ಯತೆಯಿದೆ. ಸುತ್ತಮುತ್ತಲಿನ ಎಲ್ಲತಾಲೂಕುಗಳ ಹಿತದೃಷ್ಟಿಯಿಂದ ಯಲ್ಲಾಪುರ ಜಿಲ್ಲಾಕೇಂದ್ರ ಆಗಬೇಕೆಂದು ಆಗ್ರಹಿಸಿದರು.

ತಹಸೀಲ್ದಾರ ವಿಶ್ವನಾಥ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು. ಪಟ್ಟಣ ಪಂಚಾಯಿತಿ ಸದಸ್ಯರಾದ ಸತೀಶ ನಾಯ್ಕ, ಸೋಮೇಶ್ವರ ನಾಯ್ಕ, ಪುಷ್ಪಾ ನಾಯ್ಕ, ಮಾಜಿ ಸದಸ್ಯ ವಿನೋದ ತಳೇಕರ, ಲಾರಿ ಮಾಲಕರ ಸಂಘದ ಅಧ್ಯಕ್ಷ ಮಹೇಶ ನಾಯ್ಕ, ದಲಿತ ಸಂಘದ ಅಶೋಕ ಕೊರವರ, ಪ್ರಮುಖರಾದ ರವಿ ದೇವಾಡಿಗ, ಮಾರುತಿ ಭೋವಿವಡ್ಡರ, ನರಸಿಂಹ ಭಟ್‌, ಶಿವಯೋಗಿ ಕಾಂಬ್ಳೆ, ಮಾಲತೇಶ ಕಮ್ಮಾರ ಮತ್ತು 200ಕ್ಕೂ ಹೆಚ್ಚು ಆಟೋ ಚಾಲಕ ಮಾಲಕರು ಇದ್ದರು.

ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿಆಟೋ ಹಾಗೂ ಗೂಡ್ಸ್‌ ರಿಕ್ಷಾಗಳ ಬೃಹತ್‌ ರಾರ‍ಯಲಿಯನ್ನು ಆಯೋಜಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ