ಆ್ಯಪ್ನಗರ

ಸತತ ಪ್ರಯತ್ನವಿದ್ದರೆ ವೃತ್ತಿಪರತೆ: ಯಲಿಗಾರ

ಶಿರಸಿ : ವೃತ್ತಿ ತರಬೇತಿ ಪಡೆದು ಸತತ ಪ್ರಯತ್ನಶೀಲರಾದರೆ ಮಾತ್ರ ಅದು ವೃತ್ತಿಪರರನ್ನಾಗಿಸುತ್ತದೆ ಎಂದು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ ಉಪನಿರ್ದೇಶಕ ಶಿವಾನಂದ ಯಲಿಗಾರ ಹೇಳಿದರು.

Vijaya Karnataka 30 Dec 2018, 5:00 am
ಶಿರಸಿ : ವೃತ್ತಿ ತರಬೇತಿ ಪಡೆದು ಸತತ ಪ್ರಯತ್ನಶೀಲರಾದರೆ ಮಾತ್ರ ಅದು ವೃತ್ತಿಪರರನ್ನಾಗಿಸುತ್ತದೆ ಎಂದು ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರದ ಉಪನಿರ್ದೇಶಕ ಶಿವಾನಂದ ಯಲಿಗಾರ ಹೇಳಿದರು.
Vijaya Karnataka Web if there is a continuous effort professionalism yeligar
ಸತತ ಪ್ರಯತ್ನವಿದ್ದರೆ ವೃತ್ತಿಪರತೆ: ಯಲಿಗಾರ


ಇಲ್ಲಿಯ ಅರುಣೋದಯ ಸಂಸ್ಥೆ ಹಾಗೂ ಇನ್ನರ್‌ ವ್ಹೀಲ್‌ ಕ್ಲಬ್‌ ಆಫ್‌ ಶಿರಸಿ ಹೆರಿಟೇಜ್‌ ಇವುಗಳ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಹೊಲಿಗೆ ಮತ್ತು ಬ್ಯೂಟಿಷಿಯನ್‌ ತರಬೇತಿ ಪಡೆದ ಯುವತಿಯರು ಹಾಗೂ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಸ್ವಾವಲಂಬಿಗಳಾಗಿ ಯಶಸ್ವಿ ಜೀವನ ನಡೆಸಲು ಇಂತಹ ತರಬೇತಿಯು ಅವಶ್ಯವಾಗಿದ್ದು, ತರಬೇತಿಯಲ್ಲಿ ಕಲಿತ ಉಪಯುಕ್ತ ಮಾಹಿತಿಗಳೊಂದಿಗೆ ಸತತ ಪ್ರಯತ್ನ ಬೇಕಾಗುತ್ತದೆ. ಹಲವಾರು ವರ್ಷಗಳಿಂದ ನಿರುದ್ಯೋಗಿ ಮಹಿಳೆಯರ ಸಬಲೀಕರಣದ ನಿಟ್ಟಿನಲ್ಲಿ ಕಾರ್ಯ ನಿರ್ವಹಿತ್ತಿರುವ ಅರುಣೋದಯ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು. ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ, ಸ್ವ ಉದ್ಯೋಗ ಪ್ರಾರಂಭಿಸುವವರಿಗೆ ಸರಕಾರದಿಂದ ಸಿಗುವ ಸಹಾಯಧನಗಳ ಬಗ್ಗೆ ಮಾಹಿತಿ ನೀಡಿದರು. ಅರುಣೋದಯ ಸಂಸ್ಥೆಯ ಮುಖ್ಯಸ್ಥ ಸತೀಶ ಪಿ. ನಾಯ್ಕ ಸ್ವ ಉದ್ಯೋಗಿಗಳಾಗಿ ಆತ್ಮವಿಶ್ವಾಸದಿಂದ ಉನ್ನತ ಜೀವನ ನಡೆಸುವಂತಾಗಬೇಕು ಎಂದರು.

ಇನ್ನರ್‌ ವ್ಹೀಲ್‌ ಕ್ಲಬ್‌ ಆಫ್‌ ಶಿರಸಿ ಹೆರಿಟೇಜ್‌ನ ಪ್ಲೆವಿಯಾ ಡಿಸೋಜಾ ಹಾಗೂ ಶ್ವೇತಾ ಪ್ರಭು, ಸಂಪನ್ಮೂಲ ವ್ಯಕ್ತಿಗಳಾದ ಫಾತಿಮಾ ರೋಡ್ರಿಗಸ್‌, ಸವಿತಾ ಮುಂಡೂರ, ಲಾವಣ್ಯ ತಡಿಯಾರ ಮುಂತಾದವರು ಉಪಸ್ಥಿತರಿದ್ದರು. ಭಾರತಿ ನಾಯ್ಕ ನಿರೂಪಿಸಿದರು. ಸವಿತಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ