ಆ್ಯಪ್ನಗರ

ಹೊನ್ನಾವರ: ಗೋ ಸಾಗಾಟ, 19 ಗೂಳಿ ವಶ, ಆರೋಪಿಗಳ ಬಂಧನ

ಗೂಡ್ಸ್‌ ಕಂಟೇನರ್‌ನಲ್ಲಿ ಗೋ ಸಾಗಾಟ ಮಾಡುತ್ತಿದ್ದ ತಂಡವನ್ನು ಬಂಧಿಸಿ, ಗೋವುಗಳನ್ನು ರಕ್ಷಿಸಲಾಗಿದೆ. ಹೊನ್ನಾವರ ಪೋಲಿಸ್ ತಂಡದವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

Vijaya Karnataka Web 14 Jul 2019, 8:28 pm
ಹೊನ್ನಾವರ : ಗೂಡ್ಸ್‌ ಕಂಟೇನರ್‌ನಲ್ಲಿ ಹಿಂಸಾತ್ಮಕವಾಗಿ 19 ಗೂಳಿಗಳನ್ನು ಸಾಗಿಸುತ್ತಿದ್ದಾಗ ಗೇರುಸೊಪ್ಪಾ ಟೋಲಗೇಟ್ ಬಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Vijaya Karnataka Web ಗೋ ಸಾಗಾಟ
ಗೋ ಸಾಗಾಟ


ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಗೋಸಾಗಣಿಕೆ ಜಾಲ ದಿನದಿಂದ ದಿನಕ್ಕೆ ಹೊಸ ತಂತ್ರ, ಹೊಸ ವರಸೆಯೊಂದಿಗೆ ನಡೆಯುತ್ತಿದ್ದು, ಇದರ ಇನ್ನೊಂದು ಭಾಗವಾಗಿ ಯಾರಿಗೂ ಶಂಕೆ ಬಾರದಂತೆ ಗೂಡ್ಸ್ ಕಂಟೇನರ್‌ನಲ್ಲಿ19 ಗೂಳಿಗಳನ್ನು ಹಿಂಸಾತ್ಮಕವಾಗಿ ಹಾಗೂ ಕಾನೂನು ಬಾಹಿರವಾಗಿ ಸಾಗಣಿಗೆ ಮಾಡುತ್ತಿರುವದನ್ನು ಹೊನ್ನಾವರ ಪೋಲಿಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.

ಈ ಕುರಿತು ಸುಳಿವು ದೊರೆತ ತಕ್ಷಣ ಕಾರ್ಯಪ್ರವೃತ್ತರಾದ ಹೊನ್ನಾವರ ಪಿಎಸ್‍ಐ ಸಂತೋಷ ಕಾಯ್ಕಿಣ ತಮ್ಮ ತಂಡದೊಂದಿಗೆ ಶನಿವಾರ ರಾತ್ರಿ 11 ಗಂಟೆ ವೇಳೆ ಗೇರಸೊಪ್ಪಾ ಪೋಲಿಸ್ ಚೆಕ್‍ಪೋಸ್ಟ್ ಬಳಿ ಕಂಟೇನರ್ ತಡೆದು ತಪಾಸಣೆ ನಡೆಸಿದರು. ಕಂಟೇನರ್ ಒಳಗೆ ಬಲಿತ 19 ಗೂಳಿಗಳು ಪತ್ತೆಯಾಗಿವೆ.

ಮಹಾರಾಷ್ಟ್ರದ ಜಲಗಾಂವ ಜಿಲ್ಲೆಯ ಶೇಖ್ ಹಫೀಜ್ ಯಾಕೂಬ್ ಶೇಖ್, ಚಾಲಕ, ಹಾಗೂ ತೆಲಂಗಾಣದ ಮಹಮ್ಮದಲ್ ನವಾಜ್ ಮಹಮ್ಮದ್ ಇಸ್ಮಾಯಿಲ್ ಬಕ್ಕರ್ ಖುರೇಷಿ, ಜಹೀರಾಬಾದ್‍ನ ಮೆಹಬೂಬ್ ಅಲಿ ಮಹಮ್ಮದ್ ಖಾಜಾ ಮಿಯಾ, ಹುಬ್ಬಳ್ಳಿಯ ಕೇಶ್ವಾಪುರದ ರಫೀಕ್ ರಾಜಾಸಾಬ್ ಬೇಪಾರಿ ಹಾಗೂ ಭಟ್ಕಳದ ಅದ್ವಾನ್ ಈ ಪ್ರಕರಣದ ಆರೋಪಿತರಾಗಿದ್ದಾರೆ.

ಒಂದೊಂದು ಗೂಳಿಯು ಅಂದಾಜು 25 ಸಾವಿರ ಮೌಲ್ಯದ್ದಾಗಿದ್ದು ಪೋಲಿಸರು ವಶಪಡಿಸಿಕೊಂಡ 19 ಗೂಳಿಗಳ ಒಟ್ಟೂ ಮೊತ್ತ ಸುಮಾರು 4 ಲಕ್ಷ 75 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಆರೋಪಿತರು ತೆಲಂಗಾಣ ರಾಜ್ಯದ ವಿವಿಧ ಭಾಗಗಳಿಂದ ಗೂಳಿಗಳನ್ನು ಕಳುವು ಮಾಡಿ ಭಟ್ಕಳ ಮತ್ತು ಕೇರಳಕ್ಕೆ ಮಾಂಸದ ಉದ್ದೇಶದಿಂದ ಮಾರಾಟ ಮಾಡಲು ಮುಂದಾಗಿದ್ದರು. ಟಿ.ಎಸ್ 12 ಯುಸಿ 1952 ಗೂಡ್ಸ್‌ ಕಂಟೇನರ್‌ನಲ್ಲಿ 19 ಗೂಳಿಗಳನ್ನು ತುಂಬಿಕೊಂಡು ಹೋಗಲಾಗುತ್ತಿತ್ತು. ಆಗ ಪೊಲೀಸರು ಕಾರ್ಯಾಚರಣೆ ನಡೆಸಿ ಗೋವುಗಳನ್ನು ರಕ್ಷಿಸಿದರು, ಆರೋಪಿಗಳನ್ನು ಬಂಧಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ