ಯಲ್ಲಾಪುರ : ಪಟ್ಟಣದ ಜೋಡುಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿಯಿಂದ ತಾಲೂಕು ಆರೋಗ್ಯ ಕೇಂದ್ರಕ್ಕೆ ಹೋಗುವ ಮಾರ್ಗದಲ್ಲಿ ನಾಮಫಲಕವಿಲ್ಲದೇ ಸಾರ್ವಜನಿಕರು ಆಸ್ಪತ್ರೆಗೆ ತೆರಳಲು ಪರದಾಡುವಂತಾಗಿತ್ತು. ಆದರೆ ಈಗ ಈ ಸಮಸ್ಯೆ ಪರಿಹಾರವಾಗಿದ್ದು, ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳುವ ಕೂಡುರಸ್ತೆಯ ಅಂಚಿನಲ್ಲಿ ಆಸ್ಪತ್ರೆಗೆ ತೆರಳುವ ದಾರಿ ಇದು ಎಂದು ಸೂಚಿಸಿ ನಾಮಫಲಕ ಅಳವಡಿಸಲಾಗಿದೆ.
ಇದು ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳುವ ಹೊರ ಊರಿನ ಜನರಿಗೆ ಅನುಕೂಲವಾಗಿ ಪರಿಣಮಿಸಿದೆ. ನೆರೆಯ ತಾಲೂಕುಗಳಾದ ಮುಂಡಗೋಡ, ಕಲಘಟಗಿ ಹಾಗೂ ಹಳಿಯಾಳ ತಾಲೂಕಿನಿಂದಲೂ ಹಲವು ಜನರು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಹೀಗೆ ಹೊರ ಊರಿನಿಂದ ಆಗಮಿಸುವ ರೋಗಿಗಳಿಗೆ, ವೃದ್ಧರಿಗೆ, ಆಶಕ್ತರಿಗೆ ಸಮುದಾಯ ಕೇಂದ್ರಕ್ಕೆ ಹೋಗುವ ದಾರಿ ಯಾವುದೆಂದು ತಕ್ಷ ಣ ಗೊತ್ತಾಗದೇ ಗೊಂದಲ ಉಂಟಾಗುತ್ತಿತ್ತು. ಯಾರಾದರೂ ದಾರಿಹೋಕರನ್ನು ಕೇಳಿ ಅಥವಾ ಸುತ್ತು ಬಳಸಿ ಬಂದು ಆಸ್ಪತ್ರೆಗೆ ತೆರಳುವಂತಾಗಿತ್ತು. ಆದರೆ ಈಗ ಹೆದ್ದಾರಿಯಿಂದ ಕವಲೊಡೆದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ನಾಮಫಲಕ ಅಳವಡಿಸಲಾಗಿದ್ದು ಜನರಿಗೆ ಅನುಕೂಲವಾಗಿದೆ. ನಾಮಫಲಕವಿಲ್ಲದೆ ಆಸ್ಪತ್ರೆಗೆ ತೆರಳುವ ಜನರಿಗೆ ಗೊಂದಲ ಉಂಟಾಗುತ್ತಿದೆ ಎಂಬ ಕುರಿತು ಈ ಹಿಂದೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು.
ಇದು ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳುವ ಹೊರ ಊರಿನ ಜನರಿಗೆ ಅನುಕೂಲವಾಗಿ ಪರಿಣಮಿಸಿದೆ. ನೆರೆಯ ತಾಲೂಕುಗಳಾದ ಮುಂಡಗೋಡ, ಕಲಘಟಗಿ ಹಾಗೂ ಹಳಿಯಾಳ ತಾಲೂಕಿನಿಂದಲೂ ಹಲವು ಜನರು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಹೀಗೆ ಹೊರ ಊರಿನಿಂದ ಆಗಮಿಸುವ ರೋಗಿಗಳಿಗೆ, ವೃದ್ಧರಿಗೆ, ಆಶಕ್ತರಿಗೆ ಸಮುದಾಯ ಕೇಂದ್ರಕ್ಕೆ ಹೋಗುವ ದಾರಿ ಯಾವುದೆಂದು ತಕ್ಷ ಣ ಗೊತ್ತಾಗದೇ ಗೊಂದಲ ಉಂಟಾಗುತ್ತಿತ್ತು. ಯಾರಾದರೂ ದಾರಿಹೋಕರನ್ನು ಕೇಳಿ ಅಥವಾ ಸುತ್ತು ಬಳಸಿ ಬಂದು ಆಸ್ಪತ್ರೆಗೆ ತೆರಳುವಂತಾಗಿತ್ತು. ಆದರೆ ಈಗ ಹೆದ್ದಾರಿಯಿಂದ ಕವಲೊಡೆದು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುವ ದಾರಿಯಲ್ಲಿ ನಾಮಫಲಕ ಅಳವಡಿಸಲಾಗಿದ್ದು ಜನರಿಗೆ ಅನುಕೂಲವಾಗಿದೆ. ನಾಮಫಲಕವಿಲ್ಲದೆ ಆಸ್ಪತ್ರೆಗೆ ತೆರಳುವ ಜನರಿಗೆ ಗೊಂದಲ ಉಂಟಾಗುತ್ತಿದೆ ಎಂಬ ಕುರಿತು ಈ ಹಿಂದೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು.