Please enable javascript.ಗುಂಜಗೋಡನಲ್ಲಿಯಕ್ಷಗಾನ ತಾಳಮದ್ದಲೆ - in the gunjagoda - Vijay Karnataka

ಗುಂಜಗೋಡನಲ್ಲಿಯಕ್ಷಗಾನ ತಾಳಮದ್ದಲೆ

Vijaya Karnataka 13 Nov 2019, 5:00 am
Subscribe

ಸಿದ್ದಾಪುರ : ಇಂದು ಎಲ್ಲೆಡೆ ಯಕ್ಷಗಾನ ಹಾಗೂ ತಾಳಮದ್ದಲೆ ಜನಪ್ರೀಯಗೊಳ್ಳುತ್ತಿದ್ದರೂ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ. ಅದರಲ್ಲಿಯೂ ತಾಳಮದ್ದಲೆಯಲ್ಲಿಜನರ ಆಸಕಿ ಕಡಿಮೆ ಆಗುತ್ತಿರುವುದು ವಿಷಾದನೀಯ ಎಂದು ಯಕ್ಷಗಾನ ಕಲಾವಿದ ಅಶೋಕ ಭಟ್ಟ ಸಿದ್ದಾಪುರ ಹೇಳಿದರು.

in the gunjagoda
ಗುಂಜಗೋಡನಲ್ಲಿಯಕ್ಷಗಾನ ತಾಳಮದ್ದಲೆ
ಸಿದ್ದಾಪುರ : ಇಂದು ಎಲ್ಲೆಡೆ ಯಕ್ಷಗಾನ ಹಾಗೂ ತಾಳಮದ್ದಲೆ ಜನಪ್ರೀಯಗೊಳ್ಳುತ್ತಿದ್ದರೂ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ. ಅದರಲ್ಲಿಯೂ ತಾಳಮದ್ದಲೆಯಲ್ಲಿಜನರ ಆಸಕಿ ಕಡಿಮೆ ಆಗುತ್ತಿರುವುದು ವಿಷಾದನೀಯ ಎಂದು ಯಕ್ಷಗಾನ ಕಲಾವಿದ ಅಶೋಕ ಭಟ್ಟ ಸಿದ್ದಾಪುರ ಹೇಳಿದರು.

ಇತ್ತೀಚೆಗೆ ತಾಲೂಕಿನ ಗುಂಜಗೋಡ ಗಣಪತಿ ಹೆಗಡೆ ಅವರ ಮನೆಯಲ್ಲಿಭುವನಗಿರಿ ಭುವನೇಶ್ವರಿ ತಾಳಮದ್ದಳೆ ಕೂಟದವರಿಂದ ಮೋಹಿನಿ ಏಕಾದಶಿ ಪ್ರಯುಕ್ತ ಹಾಗೂ ಹಿರಿಯ ಯಕ್ಷಗಾನ ಕಲಾವಿದ ದಿ.ಅಳಗೋಡ ತಿಮ್ಮಣ್ಣ ಹೆಗಡೆ ಅವರ ಸಂಸ್ಮರಣೆ ಅಂಗವಾಗಿ ಆಯೋಜಿಸಿದ್ದ ಯಕ್ಷಗಾನ ತಾಳಮದ್ದಳೆಯಲ್ಲಿಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ತಾಳಮದ್ದಲೆಯಲ್ಲಿಅರ್ಥಧಾರಿಗಳು ಕಥೆಯನ್ನು ಹೇಳುವುದಕ್ಕಿಂತ ಪದ್ಯಕ್ಕೆ ಸಂಬಂಧ ಪಟ್ಟ ಅರ್ಥ ಹೇಳಿದರೆ ಹಾಗೂ ಚಿಕ್ಕ ಮತ್ತು ಚೊಕ್ಕದಾಗಿ ಅರ್ಥಹೇಳಿದರೆ ಪ್ರೇಕ್ಷಕರನ್ನು ಹೆಚ್ಚು ಆಕರ್ಷಿಸಬಹುದಾಗಿದೆ. ಯಕ್ಷಗಾನ ರಂಗದಿಂದ ನಾನು ಬಹಳಷ್ಟು ಕಲಿತುಕೊಂಡಿದ್ದೇನೆ ಎಂದು ಹೇಳಿದರು.

ಟಿಎಸ್‌ಎಸ್‌ ನಿರ್ದೇಶಕ ಆರ್‌.ಟಿ. ಹೆಗಡೆ ಅಳಗೋಡ, ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಮಾತನಾಡಿದರು. ಭಾಗವತ ಕೇಶವ ಹೆಗಡೆ ಕೊಳಗಿ ಉಪಸ್ಥಿತರಿದ್ದರು. ಜಯರಾಮ ಭಟ್ಟ ಗುಂಜಗೋಡ, ಗಣಪತಿ ಹೆಗಡೆ ಗುಂಜಗೋಡ ಕಾರ್ಯಕ್ರಮ ನಿರ್ವಹಿಸಿದರು. ನಂತರ ಭುವನಗಿರಿ ಭುವನೇಶ್ವರಿ ತಾಳಮದ್ದಲೆ ಕೂಟದಿಂದ ಕಚ ದೇವಯಾನಿ ಯಕ್ಷಗಾನ ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿಭಾಗವತರಾಗಿ ಕೇಶವ ಹೆಗಡೆ ಕೊಳಗಿ, ಮಾಧವ ಭಟ್ಟ ಕೊಳಗಿ, ಮದ್ದಳೆಯಲ್ಲಿಶರತ್‌ ಹೆಗಡೆ ಜಾನಕೈ ಹಾಗೂ ಚಂಡೆಯಲ್ಲಿಭಾರ್ಗವ ಹೆಗ್ಗೋಡು ಸಹಕರಿಸಿದರು.

ಅರ್ಥಧಾರಿಗಳಾಗಿ ವಿ.ಚಂದ್ರಶೇಖರ ಭಟ್ಟ ಗಾಳಿಮನೆ(ಶುಕ್ರ), ಅಶೋಕ ಭಟ್ಟ ಸಿದ್ದಾಪುರ(ದೇವಯಾನಿ), ವಿ.ವಿನಾಯಕ ಭಟ್ಟ ಗಾಳಿಮನೆ(ಕಚ), ಜಯರಾಮ ಭಟ್ಟ ಗುಂಜಗೋಡ(ದೇವೇಂದ್ರ), ಟಿ.ಎಂ.ರಮೇಶ (ಬ್ರಹಸ್ಪತಿ), ಎಂ.ಕೆ.ನಾಯ್ಕ ಹೊಸಳ್ಳಿ(ವೃಷಪರ್ವ), ಎಂ.ಕೆ.ಹೆಗಡೆ ಹಳದೋಟ(ನಾರದ), ಶ್ರೀಧರ ಭಟ್ಟ ಮುತ್ತಿಗೆ( ಧೂಮಕೇತು), ವೆಂಕಟೇಶ ಬೊಗ್ರಿಮಕ್ಕಿ(ವಾಯು), ಕು.ವಿ.ನಿತ್‌ ಕಶ್ಯಪ್‌(ಅಗ್ನಿ) ಪಾತ್ರ ನಿರ್ವಹಿಸಿದರು.


ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ