ಆ್ಯಪ್ನಗರ

ಕಾನೂನು ಸಾಕ್ಷರತಾ ರಥ ಅಭಿಯಾನ ಉದ್ಘಾಟನೆ

ಅಂಕೋಲಾ : ಯಾವುದೇ ಕ್ಷೇತ್ರದಲ್ಲಿವ್ಯಕ್ತಿ ಉನ್ನತ ಹುದ್ದೆ ಅಲಂಕರಿಸಿದರು ಕಾನೂನಿನ ಜ್ಞಾನವಿಲ್ಲದಿದ್ದರೆ ತೊಂದರೆ ಸಂಭವಿಸುವುದು ಖಚಿತ. ಕಾನೂನಿನ ಅರಿವಿಲ್ಲದೆ ಸಮಾಜದಲ್ಲಿಬದುಕಲು ಸಾಧ್ಯವಿಲ್ಲಎಂದು ಹಿರಿಯ ನ್ಯಾಯಾಧೀಶ ಸುಹೇಲ್‌ ಅಹಮ್ಮದ ಕುನ್ನಿಭಾವಿ ಹೇಳಿದರು.

Vijaya Karnataka 26 Feb 2020, 5:00 am
ಅಂಕೋಲಾ : ಯಾವುದೇ ಕ್ಷೇತ್ರದಲ್ಲಿವ್ಯಕ್ತಿ ಉನ್ನತ ಹುದ್ದೆ ಅಲಂಕರಿಸಿದರು ಕಾನೂನಿನ ಜ್ಞಾನವಿಲ್ಲದಿದ್ದರೆ ತೊಂದರೆ ಸಂಭವಿಸುವುದು ಖಚಿತ. ಕಾನೂನಿನ ಅರಿವಿಲ್ಲದೆ ಸಮಾಜದಲ್ಲಿಬದುಕಲು ಸಾಧ್ಯವಿಲ್ಲಎಂದು ಹಿರಿಯ ನ್ಯಾಯಾಧೀಶ ಸುಹೇಲ್‌ ಅಹಮ್ಮದ ಕುನ್ನಿಭಾವಿ ಹೇಳಿದರು.
Vijaya Karnataka Web inauguration of legal literacy chariot campaign
ಕಾನೂನು ಸಾಕ್ಷರತಾ ರಥ ಅಭಿಯಾನ ಉದ್ಘಾಟನೆ


ಅವರು ಜಿ.ಸಿ.ಕಾಲೇಜಿನ ಸಭಾಭವನದಲ್ಲಿತಾಲೂಕು, ಜಿಲ್ಲಾ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ವಿವಿಧ ಇಲಾಖೆಗಳು ಹಾಗೂ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿಸಂಚಾರಿ ಜನತಾ ನ್ಯಾಯಾಲಯ ಮತ್ತು ಕಾನೂನು ಸಾಕ್ಷರತಾ ರಥ ಅಭಿಯಾನವನ್ನು ಉದ್ಘಾಟಿಸಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ತುಳಸಿ ಗೌಡರವರನ್ನು ಸನ್ಮಾನಿಸಿ ಮಾತನಾಡಿದರು.

1987 ರಲ್ಲಿಉಚಿತ ಕಾನೂನು ಸಮಿತಿ ಜಾರಿಗೆ ಬಂತು. ಅನುಭವಿ ನ್ಯಾಯವಾದಿಗಳಿಂದ 50 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವವರಿಗೆ ಉಚಿತವಾಗಿ ಕಾನೂನಿನ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಈ ಕಾನೂನನ್ನು ಜಾರಿಗೆ ತಂದಿದ್ದು, ಇದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕಿದೆ ಎಂದರು.

ಪರಿಸರ ಕಾಳಜಿ ಮೆಚ್ಚುಗೆ : ಹೆಚ್ಚುವರಿ ನ್ಯಾಯಾಧೀಶ ರಾಜು ಶೇಡಬಾಳ್ಕರ ಮಾತನಾಡಿ, ಪರಿಸರ ಜಾಗೃತಿ ಮೂಡಿಸಿ ರಾಷ್ಟ್ರಕ್ಕೆ ಮಾದರಿಯಾದ ತುಳಸಿ ಗೌಡರೊಂದಿಗೆ ವೇದಿಕೆ ಹಂಚಿಕೊಳ್ಳುವುದೇ ಒಂದು ಭಾಗ್ಯ. ಅನಕ್ಷರಸ್ಥೆಯಾದರೂ ಲಕ್ಷಗಟ್ಟಲೆ ಗಿಡಗಳನ್ನು ಆರೈಕೆ ಮಾಡಿ ಇಂದಿನ ಪ್ರತಿಯೊಬ್ಬರು ಕನಿಷ್ಠ ಒಂದೊಂದು ಗಿಡಗಳನ್ನಾದರೂ ನೆಟ್ಟು ಪರಿಸರ ಜಾಗೃತಿ ಮಾಡೋಣ.

ಕರಾವಳಿ ಕಾವಲು ಪೊಲೀಸ ಠಾಣೆಯ ಪೊಲೀಸ ನಿರೀಕ್ಷಕ ಶ್ರೀಧರ ಎಸ್‌.ಆರ್‌, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎನ್‌.ಎಸ್‌.ಪ್ರಸಾದ, ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಲ್ಲಾದ, ಪೊಲೀಸ ನಿರೀಕ್ಷಕ ಕೃಷ್ಣಾನಂದ ನಾಯಕ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅರುಣ ನಾಯ್ಕ, ಪ್ರಭಾರಿ ತಹಸೀಲ್ದಾರ ಎನ್‌.ಬಿ.ಗುನಗಾ, ಅಬಕಾರಿ ಇಲಾಖೆಯ ಇಎಸೈ ಶಾಂತ ತೇರದಾಳ ಮಾತನಾಡಿದರು.

ಜಿ.ಸಿ.ಕಾಲೇಜಿನ ಪ್ರಾಚಾರ್ಯ ಡಾ. ವೆಂಕಟರಾಯ ಶೆಟ್ಟಿಗಾರ ಅಧ್ಯಕ್ಷತೆವಹಿಸಿದ್ದರು.

ಹಿರಿಯ ವಕೀಲ ಆರ್‌.ಎಸ್‌.ಹೆಗಡೆಗಾಳಿ ಉಪನ್ಯಾಸ ನೀಡಿದರು. ನ್ಯಾಯವಾದಿ ನಾಗಾನಂದ ಬಂಟ ಸ್ವಾಗತಿಸಿದರು. ನ್ಯಾಯವಾದಿ ಉಮೇಶ ನಾಯ್ಕ ನಿರೂಪಿಸಿದರು. ನ್ಯಾಯವಾದಿ ವಿನೋದ ಶಾನಭಾಗ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ