ಆ್ಯಪ್ನಗರ

ಕಲೆ ಆಸ್ವಾದಿಸುವ ಪ್ರಜ್ಞೆ ಹೆಚ್ಚಲಿ

ಯಲ್ಲಾಪುರ : ಕಲೆ ಮತ್ತು ಸಂಗೀತವನ್ನು ಆಸ್ವಾದಿಸುವ ಪ್ರಜ್ಞೆ ಎಲ್ಲಾ ವ್ಯಕ್ತಿಗಳಲ್ಲಿಯೂ ಇರಬೇಕು. ರಸ ಪ್ರಜ್ಞೆ ಇಲ್ಲದೇ ಇದ್ದರೆ ಅದು ಕಲಾ ಸಮಾಜಕ್ಕೆ ಅಪಾಯಕಾರಿಯಾಗಬಲ್ಲುದು. ಸಂಗೀತವನ್ನು ಮುಂದುವರಿಸಿಕೊಂಡು, ಕಾಪಾಡಿಕೊಂಡು ಹೋಗುವ ಹೊಣೆ ಮತ್ತು ಜವಾಬ್ದಾರಿ ಇಂದಿನ ಯುವ ಸಮುದಾಯದ ಮೇಲಿದೆ ಎಂದು ಮೂಡಬಿದಿರೆಯ ಆಳ್ವಾಸ್‌ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು.

Vijaya Karnataka 9 Apr 2019, 5:00 am
ಯಲ್ಲಾಪುರ : ಕಲೆ ಮತ್ತು ಸಂಗೀತವನ್ನು ಆಸ್ವಾದಿಸುವ ಪ್ರಜ್ಞೆ ಎಲ್ಲಾ ವ್ಯಕ್ತಿಗಳಲ್ಲಿಯೂ ಇರಬೇಕು. ರಸ ಪ್ರಜ್ಞೆ ಇಲ್ಲದೇ ಇದ್ದರೆ ಅದು ಕಲಾ ಸಮಾಜಕ್ಕೆ ಅಪಾಯಕಾರಿಯಾಗಬಲ್ಲುದು. ಸಂಗೀತವನ್ನು ಮುಂದುವರಿಸಿಕೊಂಡು, ಕಾಪಾಡಿಕೊಂಡು ಹೋಗುವ ಹೊಣೆ ಮತ್ತು ಜವಾಬ್ದಾರಿ ಇಂದಿನ ಯುವ ಸಮುದಾಯದ ಮೇಲಿದೆ ಎಂದು ಮೂಡಬಿದಿರೆಯ ಆಳ್ವಾಸ್‌ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿದರು.
Vijaya Karnataka Web KWR-8 YLP 2
ಯಲ್ಲಾಪುರ ತಾಲೂಕಿನ ಗಡಿ ಭಾಗವಾದ ವೈದ್ಯಹೆಗ್ಗಾರಿನಲ್ಲಿ ನಡೆದ ವಿಂಶತಿ ಸಂಧ್ಯಾನಾದ - ಮನೆಯಂಗಳದಲ್ಲಿ ಸಂಗೀತ ಕಾರ್ಯಕ್ರಮ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮೂಡಬಿದಿರೆಯ ಆಳ್ವಾಸ್‌ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ ಆಳ್ವ ಮಾತನಾಡಿದರು.


ತಾಲೂಕಿನ ಗಡಿಭಾಗವಾದ ವೈದ್ಯಹೆಗ್ಗಾರಿನ ಸಾಧನಾ ಸಾಂಸ್ಕೃತಿಕ ನಿಕ್ಷೇಪದ ಆಶ್ರಯದಲ್ಲಿ ನಡೆದ ವಿಂಶತಿ ಸಂಧ್ಯಾನಾದ - ಮನೆಯಂಗಳದಲ್ಲಿ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಗೆಳಲ್ಲಾ ಜಾಗತೀಕರಣದ ದಾಳಿಗೆ ಒಳಪಟ್ಟ ಇಂದಿನ ಸಮಯದಲ್ಲಿ, ಸಾತ್ವಿಕ ಸಂಗೀತವನ್ನು ಉಳಿಸುವುದು ಮನೆಯಂಗಳದಲ್ಲಿ ಹಮ್ಮಿಕೊಳ್ಳುವ ಸಂಗೀತ ಕಾರ್ಯಕ್ರಮಗಳಿಂದ ಸಾಧ್ಯವಿದೆ. ಮನೆಯಂಗಳದಲ್ಲಿ ಸಂಗೀತವನ್ನು ಸಲಹುವ ಪ್ರಜ್ಞೆ ಬೆಳೆದಾಗ ನಮ್ಮ ನಾಡಿನಲ್ಲಿ ಸಂಗೀತ ,ಕಲೆ ಉಳಿದು ಬೆಳೆಯಲು ಸಾಧ್ಯ ಎಂದರು. ನಾಡಿನ ಜನಪದ ಕಲೆಗಳೆಲ್ಲ ನಶಿಸುತ್ತಿವೆ. ಮನುಷ್ಯ ಬೇಸಾಯವನ್ನೇ ಬಿಡುತ್ತಿದ್ದಾನೆ, ಜನಪದಕ್ಕೆ ಮೂಲ ಆಶ್ರಯವೇ ಬೇಸಾಯವಾಗಿತ್ತು, ಜನಪದವನ್ನೂ ಸಹಾ ಅತ್ಯಂತ ಮುತುವರ್ಜಿಯಿಂದ ಕಾಪಾಡಿಕೊಳ್ಲಬೇಕಿದೆ, ಸಂಗೀತ- ಕಲೆ ನೂರ್ಕಾಲ ಮುಂದುವರೆಸಿಕೊಂಡು ಹೋಗಲು ಸಮಾನ ಮನಸ್ಕ ಜನಸಾಮಾನ್ಯರು, ಶಿಕ್ಷ ಣ ಸಂಸ್ಥೆಗಳ ಮುಖ್ಯಸ್ಥರು ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.

ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದ ನಿರ್ದೇಶಕ, ನಟ ಕೆ ಸುಚೇಂದ್ರ ಪ್ರಸಾದ ಮಾತನಾಡಿ, ಮನೆಯಂಗಳದಲ್ಲಿ ಬೆಳೆಯುವ ಸಂಗೀತ ಉತ್ಕೃಷ್ಠವಾದುದು, ಇನ್ನೂ ಹೆಚ್ಚಿಗೆ ಬೆಳೆಯಲಿ ಎಂದು ಆಶಿಸಿದರು. ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಉಪಸ್ಥಿತರಿದ್ದರು. ಅಧ್ಯಕ್ಷ ತೆ ವಹಿಸಿದ್ದ ಕಲಾವಿದ ಉಸ್ತಾದ ಫಯಾಜ್‌ ಖಾನ್‌ ಮಾತನಾಡಿ ಮನೆಯಂಗಳದಲ್ಲಿ ಸಂಗೀತ ಎಂಬ ಕಲ್ಪನೆಯೇ ಅತ್ಯಂತ ಶುದ್ಧವಾದುದು, ನಿಸರ್ಗದ ಮಧ್ಯೆ ಇಂಥ ಮನೆಯಂಗಳದಲ್ಲಿಯೇ ನಿಜವಾದ ಸಂಗೀತ. ಅಳಿಯದೇ ಉಳಿಯುವ ಸಂಗೀತ ಹುಟ್ಟಲು ಸಾಧ್ಯ ಎಂದರು.

1999 ರಿಂದ ಸಂಗೀತವನ್ನು ಈ ಭಾಗದಲ್ಲಿ ಪಸರಿಸುತ್ತಿರುವ ಸಾಸಾನಿ( ಸಾಧನಾ ಸಾಂಸ್ಕೃತಿಕ ನಿಕ್ಷೇಪ) ಹೆಗ್ಗಾರ ಈ ಸಂಸ್ಥೆಯು ನಾದಯುಗಾದಿ ಹಾಗೂ ವಿಂಶತಿ ಸಂಧ್ಯಾನಾದ ಕಾರ್ಯಕ್ರಮವನ್ನು ವೈದ್ಯಹೆಗ್ಗಾರ ಕೃಷ್ಣಗಿರಿಯಲ್ಲಿ ಹಮ್ಮಿಕೊಂಡಿತ್ತು.

ರೂಪಾಲಿ ಹಾಗೂ ಸಂಗಡಿಗರು ಸ್ವಾಗತ ಗೀತೆಯನ್ನು ಪ್ರಸ್ತುತಪಡಿಸಿದರು. ಸಾಸಾನಿ ಯ ಸಂಸ್ಥಾಪಕ ಪ್ರಸನ್ನ ವೈದ್ಯ ಪ್ರಾಸ್ತಾವಿಕ ಮಾತನ್ನಾಡಿದರು. ' ಸರಿಗಮಪಧನಿಸ' ಎಂಬ ಏಳು ಸ್ವರಗಳ ಹೆಸರುಗಳ ಅಡಕೆ ಗಿಡಗಳಿಗೆ ನೀರೆರೆಯುವ ಮೂಲಕ ಮನೆಯಂಗಳದಲ್ಲಿ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಡಾ. ಡಿ ಕೆ ಗಾಂವ್ಕರ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಖ್ಯಾತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ