ಆ್ಯಪ್ನಗರ

ಆಯುರ್ವೇದ ಅನುಸರಿಸಿ ಆರೋಗ್ಯ ಹೆಚ್ಚಿಸಿಕೊಳ್ಳಿ

ಹೊನ್ನಾವರ : ಜಿಲ್ಲಾಆಡಳಿತ, ಜಿಲ್ಲಾಪಂಚಾಯತ, ಜಿಲ್ಲಾಆಯುಷ್‌ ಕಛೇರಿ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿರಸಿಯ ನಿಸರ್ಗ ಟ್ರಸ್ಟ್‌, ಆಯುಷ್‌ ಫೆಡರೇಶನ್‌ ಆಫ್‌ ಇಂಡಿಯಾ ಹೊನ್ನಾವರ ಶಾಖೆ ಮತ್ತು ರೋಟರಿ ಕ್ಲಬ್‌ ಸಹಯೋಗದಲ್ಲಿತಾಲೂಕು ಮಟ್ಟದ ಆಯುಷ್‌ ಸಮ್ಮೇಳನ ಪಟ್ಟಣದ ರೋಟರಿ ಉದ್ಯಾನವನದಲ್ಲಿನಡೆಯಿತು.

Vijaya Karnataka 9 Feb 2020, 5:00 am
ಹೊನ್ನಾವರ : ಜಿಲ್ಲಾಆಡಳಿತ, ಜಿಲ್ಲಾಪಂಚಾಯತ, ಜಿಲ್ಲಾಆಯುಷ್‌ ಕಛೇರಿ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿರಸಿಯ ನಿಸರ್ಗ ಟ್ರಸ್ಟ್‌, ಆಯುಷ್‌ ಫೆಡರೇಶನ್‌ ಆಫ್‌ ಇಂಡಿಯಾ ಹೊನ್ನಾವರ ಶಾಖೆ ಮತ್ತು ರೋಟರಿ ಕ್ಲಬ್‌ ಸಹಯೋಗದಲ್ಲಿತಾಲೂಕು ಮಟ್ಟದ ಆಯುಷ್‌ ಸಮ್ಮೇಳನ ಪಟ್ಟಣದ ರೋಟರಿ ಉದ್ಯಾನವನದಲ್ಲಿನಡೆಯಿತು.
Vijaya Karnataka Web 8 HNR 1_24
ಹೊನ್ನಾವರದಲ್ಲಿನಡೆದ ತಾಲೂಕಾ ಮಟ್ಟದ ಆಯುಷ್‌ ಸಮ್ಮೇಳನವನ್ನು ಜಿ.ಪಂ. ಸದಸ್ಯೆ ಶ್ರೀಕಲಾ ಶಾಸ್ತ್ರಿ ಉದ್ಘಾಟಿಸಿದರು.


ಜಿಲ್ಲಾಪಂಚಾಯತ ಸದಸ್ಯೆ ಶ್ರೀಕಲಾ ಶಾಸ್ತ್ರಿ ಉದ್ಘಾಟಿಸಿ ಮಾತನಾಡಿ ಆಯುರ್ವೇದವನ್ನು ಸರಿಯಾಗಿ ಅಥೈರ್‍ಸಿಕೊಂಡು ಕ್ರಮಬದ್ಧವಾಗಿ ಅನುಸರಿಸಿದರೆ ಆಯುಷ್ಯವಿರುವವರೆಗೂ ಆರೋಗ್ಯವಂತರಾಗಿರಬಹುದು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ತಾಲೂಕು ಆರೋಗ್ಯಾಧಿಕಾರಿ ಡಾ. ಉಷಾ ಹಾಸ್ಯಗಾರ ಮಾತನಾಡಿ ಉತ್ತಮ ಪೌಷ್ಟಿಕ ಆಹಾರವನ್ನು ಸ್ವತಃ ಮನೆಯಲ್ಲಿಮಾಡಿ, ಸೇವಿಸಿ ಆರೋಗ್ಯಪೂರ್ಣ ಜೀವನ ಸಾಗಿಸೋಣ ಎಂದು ಕರೆ ನೀಡಿದರು.

ತಾಲೂಕಾ ಎಎಫ್‌ಐ ಅಧ್ಯಕ್ಷ ಡಾ. ರಂಗನಾಥ ಪೂಜಾರಿ ಮಾತನಾಡಿ ಸ್ವಾಸ್ಥತ್ರ್ಯ ಸಂರಕ್ಷಣೆಯ ಮೂಲ ಉದ್ದೇಶ ರೋಗ ಬರದಂತೆ ಮಾಡುವದು. ರೋಗ ಪರಿಹಾರಕ್ಕೆ ದೇಶ, ಕಾಲ, ವ್ಯಕ್ತಿಗನುಗುಣವಾಗಿ ಆಹಾರ-ವಿಹಾರಗಳಿಂದ ಸ್ವಾಸ್ಥತ್ರ್ಯ ಸಂರಕ್ಷಣೆ ಪಡೆಯಬಹುದು ಎಂದರು.

ರೋಗ ಬರದಂತೆ ಎಚ್ಚರವಹಿಸಿ : ಅಧ್ಯಕ್ಷತೆ ವಹಿಸಿದ ತಾಲೂಕ ಪಂಚಾಯಿತಿ ಅಧ್ಯಕ್ಷ ಉಲ್ಲಾಸ ನಾಯ್ಕ ಮಾತನಾಡಿ ಎಲ್ಲಾಪಂಚಾಯಿತಿ ವ್ಯಾಪ್ತಿಯಲ್ಲಿಯೂ ಇಂತಹ ಸಮ್ಮೇಳನ ನಡೆಸಿದಲ್ಲಿಪ್ರತಿ ವ್ಯಕ್ತಿಗೂ ಆಯುಷ್‌ ಪದ್ಧತಿಯ ಪರಿಚಯ ಸಿಗಲಿದೆ ಎಂದರು.ರೋಗ ನಿವಾರಣೆ ಅನಿವಾರ್ಯ ಆದರೂ ರೋಗ ಬರದಂತೆ ನೋಡಿಕೊಳ್ಳುವುದು ಅತಿ ಹೆಚ್ಚು ಪ್ರಾಮುಖ್ಯ ಎಂದು ಹೇಳಿದರು.

ಡಾ. ವಾಹಿನಿ ನಾಯ್ಕ, ಡಾ. ವಿನಾಯಕ ಹೆಬ್ಬಾರ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಡಾ. ವಿನಾಯಕ ಹೆಬ್ಬಾರ ಆಹಾರ ಕ್ರಮಗಳ ಕುರಿತು ತಿಳಿಸಿದರು.

ಭೈರುಂಬೆ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಡಾ. ಪೂರ್ಣಿಮಾ ಎಸ್‌.ಬಿ. ವಿರುದ್ಧ ಆಹಾರಕ್ರಮಗಳ ಕುರಿತು ಮಾಹಿತಿ ನೀಡಿದರು.

ಡಾ. ವಾಹಿನಿ ನಾಯ್ಕ ಅಷ್ಟಾಂಗ ಯೋಗ ಹಾಗೂ ಮುದ್ರೆಗಳ ಮಹತ್ವ, ಮಾಡುವ ವಿಧಾನ, ಉಪಯೋಗಗಳ ಕುರಿತು ಮಾಹಿತಿ ನೀಡಿದರು

ಡಾ. ಪ್ರಸನ್ನ ಎಸ್‌. ಪೌಷ್ಟಿಕ ಆಹಾರಗಳ ಕುರಿತು ಮಾತನಾಡಿ ನಾವೇ ಬೆಳೆದು ಮಾಡಿದ ತರಕಾರಿ ಊಟ ಹಾಗೂ ಪದಾರ್ಥಗಳಿಂದ ಶ್ರೇಷ್ಠ ಆರೋಗ್ಯ ಗಳಿಕೆ ಸಾಧ್ಯ ಎಂದರು.

ಡಾ. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಡಾ. ಪ್ರವೀಣ ಜಿ .ಎನ್‌ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕುಮಾರ ಮೊಗೇರ ವಂದಿಸಿದರು. ಪ್ರಕಾಶ ಆರ್‌ ಭಟ್ಟ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ