ಆ್ಯಪ್ನಗರ

ಸಂರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ

ಅಂಕೋಲಾ : ಸಿಂದಗಿಯ ನ್ಯಾಯವಾದಿ ದತ್ತು ಬಂಡಿವಡ್ಡರ ಅವರ ಅಮಾನುಷ ಹತ್ಯೆ ಪ್ರಕರಣವನ್ನು ಖಂಡಿಸಿ ಮತ್ತು ವಕೀಲರ ಸಂರಕ್ಷ ಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಅಂಕೋಲಾ ನ್ಯಾಯವಾದಿಗಳು ಶುಕ್ರವಾರ ಕೋರ್ಟ ಕಲಾಪ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.

Vijaya Karnataka 3 Nov 2018, 5:00 am
ಅಂಕೋಲಾ : ಸಿಂದಗಿಯ ನ್ಯಾಯವಾದಿ ದತ್ತು ಬಂಡಿವಡ್ಡರ ಅವರ ಅಮಾನುಷ ಹತ್ಯೆ ಪ್ರಕರಣವನ್ನು ಖಂಡಿಸಿ ಮತ್ತು ವಕೀಲರ ಸಂರಕ್ಷ ಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಅಂಕೋಲಾ ನ್ಯಾಯವಾದಿಗಳು ಶುಕ್ರವಾರ ಕೋರ್ಟ ಕಲಾಪ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದರು.
Vijaya Karnataka Web insist on implementation of conservation act
ಸಂರಕ್ಷಣಾ ಕಾಯ್ದೆ ಜಾರಿಗೆ ಒತ್ತಾಯ


ವಕೀಲರ ಸಂಘದ ಅಧ್ಯಕ್ಷ ಗುರು ವಿ. ನಾಯ್ಕ ಮಾತನಾಡಿ, ನ್ಯಾಯವಾದಿಗಳ ಅಮಾನುಷ ಹತ್ಯೆ ಪ್ರಕರಣಗಳು ಬಹಳಷ್ಟು ವರದಿಯಾಗುತ್ತಿರುವದು ಖೇಧದ ಸಂಗತಿ. ಈ ಬಗ್ಗೆ ರಾಜ್ಯ ಸರಕಾರಕ್ಕೆ ವಕೀಲರ ರಕ್ಷ ಣೆಯ ದ್ಯೋತಕವಾಗಿ ವಕೀಲರ ಸಂರಕ್ಷ ಣಾ ಕಾಯ್ದೆ ಜಾರಿಗೊಳಿಸುವಮತೆ ಒತ್ತಾಯಿಸಿ ಅನೇಕ ಭಾರಿ ಒತ್ತಾಯಿಸಿದರೂ ಸಹ ಲಕ್ಷ ವಹಿಸಿದಿರುವುದು ಖಂಡನೀಯ. ವಕೀಲರ ಸಂರಕ್ಷ ಣಾ ಕಾಯ್ದೆಯನ್ನು ಕೂಡಲೆ ಜಾರಿಗೊಳಿಸುವಂತಾಗಬೇಕು ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾದಿತು ಎಂದು ಅವರು ಎಚ್ಚರಿಸಿದರು.

ವಿನೋದ ಶಾನಭಾಗ, ನ್ಯಾಯವಾದಿಗಳಾದ ಉಮೇಶ ನಾಯ್ಕ, ಅನಂತ ತಲಗೇರಿ, ನಾಗಾನಮದ ಬಂಟ, ವಿ.ಎಸ್‌.ನಾಯಕ, ಎಸ್‌.ಜಿ.ನಾಯಕ, ಪಾಂಡು ನಾಯ್ಕ, ಜಿ.ಎಮ್‌. ನಾಯ್ಕ, ಸಂಪದಾ ಗುನಗಾ, ಮಮತಾ ಕೆರೆಮನೆ, ಸುರೇಶ ಬಾನಾವಳಿಕರ, ಎಸ್‌.ಓ. ನಾಯ್ಕ, ನಿತ್ಯಾನಂದ ಕವರಿ, ಲಕ್ಷ್ಮಿದಾಸ ನಾಯ್ಕ, ಬಿ.ಟಿ. ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ