ಆ್ಯಪ್ನಗರ

ಉಜ್ವಲಾ ದಿಂದ ಜನರ ಜೀವನ ಕ್ರಮ ಬದಲು

ಭಟ್ಕಳ : ಪ್ರತಿ ಮನೆಗೂ ಅಡುಗೆ ಅನಿಲ ಒದಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಉಜ್ವಲಾ ಯೋಜನೆ ಗ್ರಾಮೀಣ ಭಾಗದ ಪ್ರತಿ ಮನೆಯನ್ನೂ ತಲುಪಿದೆ ಎಂದು ಶಾಸಕ ಸುನಿಲ್‌ ನಾಯ್ಕ ಹೇಳಿದರು.

Vijaya Karnataka 23 Sep 2019, 5:00 am
ಭಟ್ಕಳ : ಪ್ರತಿ ಮನೆಗೂ ಅಡುಗೆ ಅನಿಲ ಒದಗಿಸುವ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಉಜ್ವಲಾ ಯೋಜನೆ ಗ್ರಾಮೀಣ ಭಾಗದ ಪ್ರತಿ ಮನೆಯನ್ನೂ ತಲುಪಿದೆ ಎಂದು ಶಾಸಕ ಸುನಿಲ್‌ ನಾಯ್ಕ ಹೇಳಿದರು.
Vijaya Karnataka Web instead of the life style of the people from ujjwala
ಉಜ್ವಲಾ ದಿಂದ ಜನರ ಜೀವನ ಕ್ರಮ ಬದಲು


ಅವರು ತಾಲೂಕಿನ ಅರ್ಬನ್‌ ಬ್ಯಾಂಕ್‌ ಸಭಾಭವನದಲ್ಲಿಇಂಡಿಯನ್‌ ಆಯಿಲ್‌ ಕಾರ್ಪೋರೇಶನ್‌, ರಂಜನ್‌ ಇಂಡೇನ್‌ ಎಜೆನ್ಸಿ, ರಫಾತ್‌ ಎಜೆನ್ಸಿ, ಭಟ್ಕಳ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರಧಾನ ಮಂತ್ರಿ ಎಲ್‌ಪಿಜಿ ಪಂಚಾಯತ್‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಉಜ್ವಲಾ ಯೋಜನೆ ಕಾಡು ನಾಶವನ್ನು ತಡೆಗಟ್ಟಿದೆ. ಹೊಗೆಯಿಂದ ಉಂಟಾಗುವ ಹೃದಯ ಸಂಬಂಧಿ ಕಾಯಿಲೆಗೆ ಕಡಿವಾಣ ಬಿದ್ದಿದೆ. ಅಡುಗೆ ಅನಿಲ ಪಡೆಯಲು ವಿತರಣಾ ಮಳಿಗೆಯ ಮುಂದೆ ಸರದಿಯಲ್ಲಿನಿಲ್ಲಬೇಕಾದ ಸ್ಥಿತಿ ಈಗ ಇಲ್ಲ. ಪ್ರತಿ ಮನೆ ಬಾಗಿಲಿಗೆ ಅಡುಗೆ ಅನಿಲವನ್ನು ಪೂರೈಸಲಾಗುತ್ತಿದೆ ಎಂದು ವಿವರಿಸಿದರು.

ಸಹಾಯಕ ಆಯುಕ್ತ ಸಾಜೀದ್‌ ಮುಲ್ಲಾಮಾತನಾಡಿ, ಉಜ್ವಲಾ ಯೋಜನೆಯಿಂದ ಜನರ ಜೀವನ ಕ್ರಮವು ಬದಲಾಗಿದ್ದು, ಕತ್ತಲಿನಲ್ಲಿದ್ದ ಅಡುಗೆ ಮನೆಗೆ ಬೆಳಕು ಹರಿದಿದೆ, ತನ್ಮೂಲಕ ದೇಶದಲ್ಲಿಕ್ರಾಂತಿಯಾಗಿದೆ ಎಂದರು. ಎಎಸ್‌ಪಿ ನಿಖಿಲ್‌ ಬಿ. ಮಾತನಾಡಿ, ಅಡುಗೆ ಅನಿಲ ಬಳಕೆಯ ಸಂದರ್ಭದಲ್ಲಿಸುರಕ್ಷತೆಗೆ ಆದ್ಯತೆ ನೀಡಬೇಕು. ಹೆದ್ದಾರಿಯಲ್ಲಿಡಿಸೇಲ್‌, ಪೆಟ್ರೋಲ್‌, ಅನಿಲ ಟ್ಯಾಂಕರುಗಳು ಹೆಚ್ಚು ಓಡಾಡುವ ಕಾರಣ ಅಕ್ಕಪಕ್ಕದ ನಿವಾಸಿಗಳು ಎಚ್ಚರಿಕೆ ವಹಿಸಬೇಕು ಎಂದು ವಿವರಿಸಿದರು.

ರಾಮಚಂದ್ರ ಕಿಣಿ, ಉಜ್ವಲ ಯೋಜನೆಗೆ ದೇಶಾದ್ಯಂತ ಉತ್ತಮ ಸ್ಪಂದನೆ ದೊರಕಿದೆ ಎಂದು ತಿಳಿಸಿದರು. ಇಂಡಿಯನ್‌ ಆಯಿಲ್‌ ಕಾಪೋರ್‍ರೇಶನ್ನಿನ ಕ್ಷೇತ್ರ ವ್ಯವಸ್ಥಾಪಕ ರಮೇಶ ಬಾಬು, ಪಿ.ವಿ.ಭಾರ್ಗವ್‌, ಭಟ್ಕಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸುಶೀಲಾ ಮೊಗೇರ ಮಾತನಾಡಿದರು. ಶಿವಾನಿ ಶಾಂತಾರಾಮ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ರಮೀಜ್‌ ಉಪಸ್ಥಿತರಿದ್ದರು. ಇದಕ್ಕೂ ಪೂರ್ವದಲ್ಲಿಅಡುಗೆ ಅನಿಲ ಸಿಲಿಂಡರ್‌ ಬಳಕೆ, ಅನಾಹುತ ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರಾತ್ಯಕ್ಷಿಕೆ ನೀಡಿದರು. ಉಜ್ವಲಾ ಯೋಜನೆಯಡಿ ಫಲಾನುಭವಿಗಳಿಗೆ ಸಿಲೆಂಡರ್‌ಗಳನ್ನು ವಿತರಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ