ಆ್ಯಪ್ನಗರ

ಗೋಕರ್ಣ ಮೂಲದ ವಿಜ್ಞಾನಿಗೆ ಅಂತಾರಾಷ್ಟ್ರೀಯ ಗೌರವ

ಮೂಲತಃ ಗೋಕರ್ಣದ ಹಾಲಿ ಅಮೆರಿಕದಲ್ಲಿ ನೆಲೆಸಿರುವ, 'ಬೋರಾನ್‌ ಕೆಮಿಸ್ಟ್ರಿ' ಸಂಸ್ಥಾಪಕ ಡಾ. ನಾರಾಯಣ ಹೊಸ್ಮನೆಯವರ 70ನೇ ಜನ್ಮ ದಿನದ ಪ್ರಯುಕ್ತ 'ಜರ್ನಲ್‌ ಆಫ್‌ ಆರ್ಗೊನೊ ಕೆಮಿಸ್ಟ್ರಿ ' ವಿಶೇಷ ಸಂಚಿಕೆಯನ್ನು ಹೊರ ತಂದು ಗೌರವ ಸಲ್ಲಿಸಿದೆ. ಜೂನ್‌ 30 ಅವರ ಜನ್ಮ ದಿನವಾಗಿದ್ದು, ಅಮೆರಿಕ, ರಷ್ಯಾ, ಕೊಲಂಬಿಯಾ, ಯುರೋಪ್‌ಗಳಲ್ಲಿ ಪ್ರಕಟವಾಗುವ ಕೆಮಿಸ್ಟ್ರಿ ಕುರಿತ ಜರ್ನಲ್‌ನ ಜೂನ್‌ ತಿಂಗಳ ಸಂಚಿಕೆಯನ್ನು ಡಾ.ಹೊಸ್ಮನೆಯವರಿಗೆ ಸಮರ್ಪಿಸಲಾಗಿದೆ.

Vijaya Karnataka 29 Jun 2018, 8:01 am
ಗೋಕರ್ಣ: ಮೂಲತಃ ಗೋಕರ್ಣದ ಹಾಲಿ ಅಮೆರಿಕದಲ್ಲಿ ನೆಲೆಸಿರುವ, 'ಬೋರಾನ್‌ ಕೆಮಿಸ್ಟ್ರಿ' ಸಂಸ್ಥಾಪಕ ಡಾ. ನಾರಾಯಣ ಹೊಸ್ಮನೆಯವರ 70ನೇ ಜನ್ಮ ದಿನದ ಪ್ರಯುಕ್ತ 'ಜರ್ನಲ್‌ ಆಫ್‌ ಆರ್ಗೊನೊ ಕೆಮಿಸ್ಟ್ರಿ ' ವಿಶೇಷ ಸಂಚಿಕೆಯನ್ನು ಹೊರ ತಂದು ಗೌರವ ಸಲ್ಲಿಸಿದೆ. ಜೂನ್‌ 30 ಅವರ ಜನ್ಮ ದಿನವಾಗಿದ್ದು, ಅಮೆರಿಕ, ರಷ್ಯಾ, ಕೊಲಂಬಿಯಾ, ಯುರೋಪ್‌ಗಳಲ್ಲಿ ಪ್ರಕಟವಾಗುವ ಕೆಮಿಸ್ಟ್ರಿ ಕುರಿತ ಜರ್ನಲ್‌ನ ಜೂನ್‌ ತಿಂಗಳ ಸಂಚಿಕೆಯನ್ನು ಡಾ.ಹೊಸ್ಮನೆಯವರಿಗೆ ಸಮರ್ಪಿಸಲಾಗಿದೆ.
Vijaya Karnataka Web narayan s hosamane


ಈ ಕುರಿತು ಸಂಪಾದಕ ರಿಚರ್ಡ್‌ ಎಡಮ್ಸ್‌ ಮತ್ತು ವ್ಲಾಡಿಮಿರ್‌ ಬ್ರೆಗಾಜೆ ಅವರು ಬರೆದಿದ್ದಾರೆ. ಕ್ಯಾನ್ಸರ್‌ ಔಷಧ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಬೋರಾನ್‌ ಕೆಮಿಸ್ಟ್ರಿ ಅಥವಾ ಅಲೋಹ ರಸಾಯನ ಶಾಸ್ತ್ರವನ್ನು ಅಮೆರಿಕದಲ್ಲಿ ಸಂಸ್ಥಾಪಿಸಿದ ಕೀರ್ತಿ ಡಾ.ನಾರಾಯಣ ಹೊಸ್ಮನೆ ಅವರದಾಗಿದೆ. ''70ರ ದಶಕದಲ್ಲಿ ಅಮೆರಿಕಕ್ಕೆ ಬಂದು ಮೊದಲ ಬಾರಿಗೆ ಅಲ್ಲಿ ಪ್ರಾರಂಭಿಸಿದ ಬೋರನ್‌ ವಿಜ್ಞಾನ ಸಂಶೋಧನೆ ಕಳೆದ ನಾಲ್ಕು ದಶಕಗಳಲ್ಲಿ ವಿಶ್ವದ ಗರಿಷ್ಠ ಗೌರವಕ್ಕೆ ಪಾತ್ರವಾಗಿರುವುದಕ್ಕೆ ಡಾ.ಹೊಸ್ಮನೆ ಕಾರಣರಾಗಿದ್ದಾರೆ. ಇಂತಹ ವಿಶ್ವದ ಅಪರೂಪದ ವಿಜ್ಞಾನಿಗೆ ಈ ಸಂಚಿಕೆಯನ್ನು ಅರ್ಪಿಸುವ ಮೂಲಕ ಅವರಿಗೆ ಜಾಗತಿಕ ಗೌರವವನ್ನು ಸಮರ್ಪಿಸಲಾಗುತ್ತಿದೆ'' ಎಂದು ತಮ್ಮ ಅಗ್ರ ಲೇಖನದಲ್ಲಿ ಅವರು ವಿವರಿಸಿದ್ದಾರೆ.

ಹಿನ್ನೆಲೆ :

ಡಾ.ನಾರಾಯಣ ಸದಾಶಿವ ಹೊಸ್ಮನೆ ಮೂಲತಃ ಗೋಕರ್ಣದವರು. ಇಲ್ಲಿನ ವೈದಿಕ ಮನೆತನದಲ್ಲಿ ಜನಿಸಿ, ಭದ್ರಕಾಳಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ಅವರು ಮುಂದಿನ ವಿದ್ಯಾಭ್ಯಾಸವನ್ನು ಧಾರವಾಡದಲ್ಲಿ ಮಾಡಿದರು. ಕರ್ನಾಟಕ ವಿ.ವಿ.ಯಿಂದ ಚಿನ್ನದ ಪದಕ ಸಹಿತ ಎಂಎಸ್ಸಿ ಪಡೆದ ಅವರು 1974ರಲ್ಲಿ ಸ್ಕಾಟ್‌ಲೆಂಡ್‌ನಲ್ಲಿ ವಿಶೇಷ ವಿದ್ಯಾರ್ಥಿ ವೇತನದ ಮೂಲಕ ಡಾಕ್ಟರೇಟ್‌ ಪೂರೈಸಿದ್ದಾರೆ. ಎಡಿನ್‌ಬರೊ ವಿಶ್ವ ವಿದ್ಯಾಲಯದಿಂದ ವಿದ್ಯಾರ್ಥಿ ವೇತನ ಪಡೆದ ಏಕಮೇವ ವಿದೇಶಿ ವಿದ್ಯಾರ್ಥಿ ಇವರಾಗಿದ್ದಾರೆ. ಸ್ಕಾಟ್‌ಲೆಂಡ್‌ ದೇಶಕ್ಕೆ ಸೇರಿರದ ವಿದ್ಯಾರ್ಥಿಗಳಿಗೆ ಅಲ್ಲಿ ವಿದ್ಯಾರ್ಥಿ ವೇತನ ನೀಡಲಾಗುವುದಿಲ್ಲ. ಆದರೆ ಇವರ ಬುದ್ಧಿಮತ್ತೆಗೆ ತಲೆದೂಗಿದ ವಿಶ್ವ ವಿದ್ಯಾಲಯ ಸಮಿತಿ ಮೊದಲ ಮತ್ತು ಕೊನೆಯ ಬಾರಿಗೆ ತನ್ನ ನಿಯಮವನ್ನು ಸಡಿಲಿಸಿ ದಾಖಲೆ ನಿರ್ಮಿಸಿತು. ಅಲ್ಲಿಂದ 1976ರಲ್ಲಿ ಅಮೆರಿಕಾಕ್ಕೆ ಬಂದು ಕಾರ್ಯಾರಂಭ ಮಾಡಿದ ಡಾ.ಹೊಸ್ಮನೆ ಉತ್ತರ ಇಲಿನಾಯ್‌ ಯುನಿವರ್ಸಿಟಿಯಲ್ಲಿ ವಿಶೇಷ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೋರಾನ್‌ ರಸಾಯನ ಶಾಸ್ತ್ರದ ಬಗ್ಗೆ 350 ಸಂಶೋಧನಾ ಪ್ರಬಂಧಗಳನ್ನು ಅವರು ಪ್ರಕಟಿಸಿದ್ದಾರೆ. ಈ ಅಲೋಹ ರಸಾಯನ ಶಾಸ್ತ್ರದ ಕುರಿತಾಗಿ ಅವರು ಬರೆದಿರುವ 5 ಪುಸ್ತಕಗಳು ಜಾಗತಿಕ ಗೌರವಕ್ಕೆ ಪಾತ್ರವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ