ಆ್ಯಪ್ನಗರ

ಮಣಿಪಾಲ ಆರೋಗ್ಯ ಕಾರ್ಡ್‌ ವಿತರಣೆ

ಹೊನ್ನಾವರ : ಪಟ್ಟಣದ ಕೃಷಿ ಇಲಾಖೆ ಹತ್ತಿರ ನೂತನ ಮಿನಿ ವಿಧಾನಸೌಧ ಹಿಂಭಾಗದ ಆವರಣದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್‌ ವಿತರಣಾ ಕಾರ್ಯಕ್ರಮ ನಡೆಯಿತು.

Vijaya Karnataka 23 Jun 2019, 5:00 am
ಹೊನ್ನಾವರ : ಪಟ್ಟಣದ ಕೃಷಿ ಇಲಾಖೆ ಹತ್ತಿರ ನೂತನ ಮಿನಿ ವಿಧಾನಸೌಧ ಹಿಂಭಾಗದ ಆವರಣದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್‌ ವಿತರಣಾ ಕಾರ್ಯಕ್ರಮ ನಡೆಯಿತು.
Vijaya Karnataka Web issue of manipal health card
ಮಣಿಪಾಲ ಆರೋಗ್ಯ ಕಾರ್ಡ್‌ ವಿತರಣೆ


ವೈದ್ಯ ಡಾ.ಅರುಣ ಕಾರ್ಕಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಣಿಪಾಲ ಆರೊಗ್ಯ ಕಾರ್ಡಿನ ಸೌಲಭ್ಯವನ್ನು ಹೊನ್ನಾವರದ ಜನತೆ ಪಡೆದುಕೊಳ್ಳಬೇಕು. ಚಿಕಿತ್ಸೆಗೆ ಹೆಚ್ಚಿನ ವೆಚ್ಚ ತಗಲುವ ಇಂದಿನ ದಿನದಲ್ಲಿ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯಬಹುದು ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಣಿಪಾಲ ಹೆಲ್ತ ಕಾರ್ಡ್‌ನ ವಿಭಾಗಾಧಿಕಾರಿ ದರ್ಶನ ನಾಯಕ ಮಾತನಾಡಿ, ಮಣಿಪಾಲ ಕಾರ್ಡ್‌ನ ಮಹತ್ವ ಹಾಗೂ ಅದರ ಪ್ರಯೋಜನದ ಕುರಿತು ವಿವರಿಸಿದರು. ಮಣಿಪಾಲ ಕಾರ್ಡನ್ನು ಸಾಂಕೇತಿಕವಾಗಿ ಡಾ. ಪ್ರಮೋದ ಫಾಯ್ದೆಯವರಿಗೆ ವಿತರಿಸಲಾಯಿತು. ಕಾರ್ಡ್‌ ಸ್ವೀಕರಿಸಿದ ಡಾ. ಪ್ರಮೋದ ಫಾಯ್ದೆ ಮಾತನಾಡಿ, ಬಹು ಉಪಯೋಗಿ ಈ ಕಾರ್ಡ್‌ ಹೊನ್ನಾವರ ತಾಲೂಕಿನ ಜನತೆಗೆ ಬಹುಮುಖ್ಯವಾಗಿದೆ ಎಂದರು. ಜೀವವಿಮಾ ನಿಗಮದ ಪ್ರತಿನಿಧಿ ಜಿ.ಎಸ್‌.ರೇವಣಕರ್‌ ಮಾತನಾಡಿದರು. ನ್ಯಾಶನಲ್‌ ಇನ್ಯೂರೆನ್ಸಿನ ದಿನೇಶ ಕಾಮತ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸ್ಮೀತಾ ಕಾಮತ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ