ಆ್ಯಪ್ನಗರ

ನಮ್ಮ ಹಕ್ಕು ಪ್ರತಿಷ್ಠಾಪನೆ ನಮ್ಮ ಕರ್ತವ್ಯ

ಭಟ್ಕಳ: ಸೈದ್ಧಾಂತಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಏಳಿಗೆಯಿಂದಷ್ಟೇ ನಾವು ಅಭಿವೃದ್ಧಿಯ ಶಿಖರವನ್ನು ಏರಬಹುದು. ಸಮಾಜದ ಬದಲಾವಣೆಯ ದೃಷ್ಟಿಯಿಂದ ದುರ್ಬಲ ವರ್ಗದ ಜನರ ಬಗ್ಗೆ ಕಾಳಜಿ ವಹಿಸಿ ಮೇಲಕ್ಕೆತ್ತುವುದು ಅತ್ಯಗತ್ಯವಾಗಿದೆ ಎಂದು ಮಂಗಳೂರಿನ ಎನ್ನೋಪೋಯ ವಿಶ್ವವಿದ್ಯಾಲಯದ ಉಪನ್ಯಾಸಕ, ಲೇಖಕ ಡಾ.ಜಾವೇದ್‌ ಜಮೀಲ್‌ ಹೇಳಿದರು.

Vijaya Karnataka 19 Aug 2019, 5:00 am
ಭಟ್ಕಳ: ಸೈದ್ಧಾಂತಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಏಳಿಗೆಯಿಂದಷ್ಟೇ ನಾವು ಅಭಿವೃದ್ಧಿಯ ಶಿಖರವನ್ನು ಏರಬಹುದು. ಸಮಾಜದ ಬದಲಾವಣೆಯ ದೃಷ್ಟಿಯಿಂದ ದುರ್ಬಲ ವರ್ಗದ ಜನರ ಬಗ್ಗೆ ಕಾಳಜಿ ವಹಿಸಿ ಮೇಲಕ್ಕೆತ್ತುವುದು ಅತ್ಯಗತ್ಯವಾಗಿದೆ ಎಂದು ಮಂಗಳೂರಿನ ಎನ್ನೋಪೋಯ ವಿಶ್ವವಿದ್ಯಾಲಯದ ಉಪನ್ಯಾಸಕ, ಲೇಖಕ ಡಾ.ಜಾವೇದ್‌ ಜಮೀಲ್‌ ಹೇಳಿದರು.
Vijaya Karnataka Web KWR-18BKL1


ಅವರು ಶನಿವಾರ ಅಂಜುಮನ್‌ ಹಾಮಿ ಇ ಮುಸ್ಲಮೀನ್‌ ಶಿಕ್ಷ ಣ ಸಂಸ್ಥೆಯ ಸುವರ್ಣ ಮಹೋತ್ಸವದ ಪ್ರಯುಕ್ತ ತಾಲೂಕಿನ ಅಂಜುಮನ್‌ ಎಂಜಿನೀಯರಿಂಗ್‌ ಕಾಲೇಜು ಸಭಾಭವನದಲ್ಲಿ ಆಯೋಜಿಸಿದ 'ಅಲ್ಪಸಂಖ್ಯಾತ ಮುಸ್ಲೀಂ ಶಿಕ್ಷ ಣ ಸಂಸ್ಥೆಗಳು ಮತ್ತು ಎದುರಿಸುತ್ತಿರುವ ಸಮಸ್ಯೆ, ಸವಾಲುಗಳು ಮತ್ತು ಪರಿಹಾರ' ದ ಕುರಿತಂತೆ ಆಯೋಜಿಸಿದ 2 ದಿನಗಳ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪ್ರಸಕ್ತವಾಗಿ ನಾವೆಲ್ಲರೂ ಕಾಪೋರ್‍ರೇಟ್‌ ಜಗತ್ತಿನ ವಸ್ತುಗಳಾಗುತ್ತಿದ್ದೇವೆ. ಕಾಪೋರ್‍ರೇಟ್‌ ಯೋಚನೆ ಮತ್ತು ಕೋಮು ಚಿಂತನೆಗಳು ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ನಮ್ಮ ಹಕ್ಕುಗಳನ್ನು ಪ್ರತಿಷ್ಠಾಪಿಸುವುದು ನಮ್ಮೆಲ್ಲರ ಅನಿವಾರ್ಯವಾಗಿದೆ. ಜಗತ್ತಿನ ಮುಂದೆ ಸಮಾಜವನ್ನು ಕಾಡುವ ದೌರ್ಬಲ್ಯವನ್ನು ಅನಾವರಣ ಮಾಡಬೇಕು. ಈ ನಿಟ್ಟಿನಲ್ಲಿ ಶಿಕ್ಷ ಣ ಕ್ಷೇತ್ರದ ವೈವಿಧ್ಯತೆಗಳನ್ನು ಮನಗಾಣಬೇಕಾಗಿದೆ. ಶಿಕ್ಷ ಣ ಕ್ಷೇತ್ರದ ಸಮಸ್ಯೆಗಳನ್ನು ಮೊದಲೇ ಅರಿಯದೇ ಇದ್ದರೆ ಭವಿಷ್ಯ ಬರಡಾಗಲಿದೆ ಎಂದು ವಿವರಿಸಿದರು.

ಮಂಗಳೂರು ಬ್ಯಾರಿ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಸೈಯದ್‌ ಮಹ್ಮದ್‌ ಬ್ಯಾರಿ ಮಾತನಾಡಿ, ಮುಸ್ಲೀಮ್‌ ಶಿಕ್ಷ ಣ ಸಂಸ್ಥೆಗಳು ಗುಣಮಟ್ಟದ ಶಿಕ್ಷ ಣಕ್ಕೆ ಆದ್ಯತೆಯನ್ನು ನೀಡಬೇಕು. ಮನುಷ್ಯತ್ವದ ಕಡೆ ಎಲ್ಲರ ಗಮನ ಹರಿಯಬೇಕು. ತ್ಯಾಗ, ವೈಯಕ್ತಿಕ ಶ್ರದ್ಧೆ, ನಡತೆ, ಸಾಮೂಹಿಕ ನಾಯಕತ್ವದಿಂದ ಯಶಸ್ಸು ಸಾಧ್ಯ ಎಂದರು. ಭಟ್ಕಳ ಸಹಾಯಕ ಆಯುಕ್ತ ಸಾಜೀದ್‌ ಮುಲ್ಲಾ ಮಾತನಾಡಿ, ಹಿರಿಯರ ಅರ್ಹತೆ, ಅನುಭವಗಳನ್ನು ಯುವಕರು ಪಡೆದುಕೊಂಡು ಒಟ್ಟಿಗೆ ಸಾಗಿದರೆ ಭಟ್ಕಳಕ್ಕೆ ಪ್ರಯೋಜನ ಇದೆ ಎಂದರು.

ಭಟ್ಕಳ ಅಂಜುಮನ್‌ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಅಬ್ದುರ್ರಹೀಮ್‌ ಜುಕಾಕೋ ಅಧ್ಯಕ್ಷ ತೆ ವಹಿಸಿದ್ದರು. ಅಬ್ದುರ್ರಕೀಬ್‌ ಎಂ.ಜೆ. ಪ್ರಾಸ್ತಾವಿಕ ಮಾತನಾಡಿದರು. ಅಂಜುಮನ್‌ ಶಿಕ್ಷ ಣ ಸಂಸ್ಥೆಯ ಕಾರ್ಯದರ್ಶಿ ಸಿದ್ದಿಕ್‌ ಇಸ್ಮೈಲ್‌ ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು. ಇಶಾಕ್‌ ಶಾಬಂದ್ರಿ ಅತಿಥಿಗಳನ್ನು ಪರಿಚಯಿಸಿದರು. ಆಫ್ತಾಬ್‌ ಕಮರಿ ವಂದಿಸಿದರು. ಅಬ್ದುಲ್‌ ಮುಕೀದ್‌ ಕುರಾನ್‌ ಪಠಿಸಿದರು. ಶಮ್ಸುದ್ದೀನ್‌ ಶಮ್ಸೂಸ್‌ ಝುಹಾ ನಿರೂಪಿಸಿದರು.

ಮುಂದಿನ ವರ್ಷ ಕಾನೂನು ವಿದ್ಯಾಲಯ: ಮುಂದಿನ ಶೈಕ್ಷ ಣಿಕ ವರ್ಷದಿಂದ ಭಟ್ಕಳ ಅಂಜುಮನ್‌ ಶಿಕ್ಷ ಣ ಸಂಸ್ಥೆಯ ಅಡಿಯಲ್ಲಿ ಕಾನೂನು ಮಹಾವಿದ್ಯಾಲಯವನ್ನು ಪ್ರಾರಂಭಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಭಟ್ಕಳ ಅಂಜುಮನ್‌ ಶಿಕ್ಷ ಣ ಸಂಸ್ಥೆಯ ಅಧ್ಯಕ್ಷ ಅಬ್ದುರ್ರಹೀಮ್‌ ಜುಕಾಕೋ ಹಾಗೂ ಚಿನ್ನೈನ ಬಿಎಸ್‌ಎಆರ್‌ ಕ್ರಿಸೆಂಟ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ( ಡೀಮ್ಡ್‌ ವಿಶ್ವವಿದ್ಯಾಲಯ) ಇದರ ಮುಖ್ಯಸ್ಥ ಡಾ. ರಾಜಾ ಹುಸೇನ್‌ ಪರಸ್ಪರ ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಿದರು. ಅಂಜುಮನ್‌ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ