ಆ್ಯಪ್ನಗರ

ಶ್ರೀಪಾದ ಭಟ್‌ಗೆ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ

ಕಲಬುರಗಿ : ಅಭಿವೃದ್ಧಿ ಎಂಬ ವಿಷಯ ಬಂದಾಗ ರಂಗಾಸಕ್ತರು, ಸಾಹಿತಿಗಳು, ಚಿಂತಕರು ಪ್ರತಿಭಟನೆ, ಚಳವಳಿಗೆ ಕೆಲವರನ್ನು ಹೊರತುಪಡಿಸಿ ಅನೇಕರು ಮುಂದೆ ಬರುವುದಿಲ್ಲ ಎಂದು ಬೆಂಗಳೂರಿನ ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಅಸಮಾಧಾನ ವ್ಯಕ್ತಪಡಿಸಿದರು.

Vijaya Karnataka 19 Jul 2019, 5:00 am
ಕಲಬುರಗಿ : ಅಭಿವೃದ್ಧಿ ಎಂಬ ವಿಷಯ ಬಂದಾಗ ರಂಗಾಸಕ್ತರು, ಸಾಹಿತಿಗಳು, ಚಿಂತಕರು ಪ್ರತಿಭಟನೆ, ಚಳವಳಿಗೆ ಕೆಲವರನ್ನು ಹೊರತುಪಡಿಸಿ ಅನೇಕರು ಮುಂದೆ ಬರುವುದಿಲ್ಲ ಎಂದು ಬೆಂಗಳೂರಿನ ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿ ಅಸಮಾಧಾನ ವ್ಯಕ್ತಪಡಿಸಿದರು.
Vijaya Karnataka Web jangamashetti theater award presented to sripada bhatt
ಶ್ರೀಪಾದ ಭಟ್‌ಗೆ ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ


ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಗುರುವಾರ ರಂಗ ಸಂಗಮ ಕಲಾ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೊನ್ನಾವರದ ಡಾ.ಶ್ರೀಪಾದ ಭಟ್‌ ಅವರಿಗೆ ಎಸ್‌.ಜಿ.ಜಂಗಮಶೆಟ್ಟಿ ರಂಗ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಒಂದು ವೇಳೆ ಮನುಸ್ತೃತಿಯನ್ನು ಸುಡುತ್ತೀವಿ ಎಂದರೆ ಬಹಳಷ್ಟು ಸಂಖ್ಯೆಯಲ್ಲಿ ಚಿಂತಕರು ಸೇರುತ್ತಾರೆ. ಆದರೆ, ಅಭಿವೃದ್ಧಿಗೂ ತಮ್ಮ ಹಕ್ಕೊತ್ತಾಯ ಅಗತ್ಯವಿದೆ ಎಂಬುದು ತಿಳಿದುಕೊಳ್ಳುವುದಿಲ್ಲ ಎಂದು ಹೇಳಿದರು.

ಅಭಿವೃದ್ಧಿ ಎಂಬ ಶಬ್ದದ ವ್ಯಾಖ್ಯಾನಗಳನ್ನು ಕೊಡುವ ಸಾಮರ್ಥ್ಯವನ್ನು ಚರ್ಚೆಗಳಲ್ಲಿ ಬೆಳೆಸಿಕೊಳ್ಳಬೇಕಿತ್ತೇನೋ ಆದರೆ, ಚಿಂತಕರು, ಸಾಹಿತಿಗಳಲ್ಲಿ ಅಭಿವೃದ್ಧಿ ಅರ್ಥಶಾಸ್ತ್ರದ ಬಗ್ಗೆ ಅಷ್ಟು ಪರಿಚಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹವ್ಯಾಸಿ ರಂಗಭೂಮಿಯ ಪ್ರತಿಭಾವಂತ ನಿರ್ದೇಶಕ ಡಾ.ಶ್ರೀಪಾದ ಭಟ್‌ ಧಾರೇಶ್ವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಒಬ್ಬ ಕಲಾವಿದನಿಗೆ ಸ್ನೇಹ, ಪ್ರೀತಿ ಇದ್ದರೆ ಸಾಕು. ಅದನ್ನು ನೀವು ಕೊಟ್ಟಿದ್ದೀರಿ. ಅದನ್ನು ಉಳಿಸಿಕೊಳ್ಳುವ ಪ್ರಯತ್ನಿಸುತ್ತೇನೆ. ಒಬ್ಬ ಕಲಾವಿದ ಯಾವಾಗಲೂ ಸನಾತನ, ನೂತನವಾಗಿರುತ್ತಾನೆ. ತಾನು ರಂಗಭೂಮಿಗೆ ಆಕಸ್ಮಿಕವಾಗಿ ಬಂದೆ. ಅದೇರೀತಿ ನಮ್ಮ ತಂದೆಯ ಆಶಯದಂತೆಯೇ ತಾನು ಆಕಸ್ಮಿಕವಾಗಿ ಶಿಕ್ಷಕನಾದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಮತ್ತು ರಂಗಭೂಮಿಯಲ್ಲಿ ಹಲವಾರು ವರ್ಷದವರೆಗೆ ಕಾರ್ಯನಿರ್ವಹಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಎಸ್‌.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿಯನ್ನು ಹವ್ಯಾಸಿ ರಂಗಭೂಮಿಯ ಪ್ರತಿಭಾವಂತ ನಿರ್ದೇಶಕ ಡಾ.ಶ್ರೀಪಾದ ಭಟ್‌ ಧಾರೇಶ್ವರ ಅವರಿಗೆ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಹಿರಿಯ ರಂಗಕರ್ಮಿ ಪ್ರಕಾಶ ಬೆಳವಾಡಿಯವರನ್ನು ಸನ್ಮಾನಿಸಲಾಯಿತು.

ಹಿರಿಯ ಸಾಹಿತಿ ಡಾ.ಸ್ವಾಮಿರಾವ್‌ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ನೃತ್ಯ ಮತ್ತು ಯಕ್ಷರಂಗ ತಜ್ಞರಾದ ವಿದ್ವಾನ್‌ ಸುಧೀರ್‌ ರಾವ್‌, ನಿವೃತ್ತ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರಾದ ಎಚ್‌.ಎಸ್‌. ಬಸವಪ್ರಭು, ರಂಗಸಂಗಮ ಕಲಾ ವೇದಿಕೆಯ ಸುಭದ್ರಾದೇವಿ ಜಂಗಂಶೆಟ್ಟಿ, ನಂದಾ ಕೊಲ್ಲೂರು ಸೇರಿದಂತೆ ಅನೇಕ ಸಾಹಿತಿಗಳು, ರಂಗ ಕಲಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಿದ್ಧಾರ್ಥ ಡಿ.ಚಿಮ್ಮಾ ಇದ್ಲಾಯಿ ಗೀತ ಗಾಯನ ಮಾಡಿದರು. ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ನಿರೂಪಿಸಿದರು. ರಂಗಸಂಗಮ ಕಲಾವೇದಿಕೆಯ ಕಾರ್ಯದರ್ಶಿ ಡಾ.ಸುಜಾತಾ ಜಂಗಮಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ