ಸಿದ್ದಾಪುರ : ದುಬೈ,ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳಿಂದ ತಾಲೂಕಿಗೆ ಜನರು ಬರುತ್ತಿದ್ದು ಅವರ ಬಗ್ಗೆ ಆರೋಗ್ಯ ಇಲಾಖೆಯವರಾಗಲಿ,ಸ್ಥಳೀಯ ಆಡಳಿತದವರಾಗಲಿ ನಿಗಾವಹಿಸುತ್ತಿಲ್ಲಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ತಾಲೂಕಿಗೆ ಬೇರೆ ದೇಶದಿಂದ ಎಷ್ಟು ಜನರು ಬಂದಿದ್ದಾರೆ. ಅವರ ಆರೋಗ್ಯ ಹೇಗಿದೆ ಎನ್ನುವ ಮಾಹಿತಿ ಆರೋಗ್ಯ ಇಲಾಖೆಯವರ ಬಳಿಯಲ್ಲಾಗಲಿ,ಸ್ಥಳೀಯ ಆಡಳಿತದವರ ಬಳಿ ಇಲ್ಲದಾಗಿದೆ.
ಕಳೆದ ಶನಿವಾರದಿಂದ ತಾಲೂಕಿನಾದ್ಯಂತ ಕೊರೊನಾ ವದಂತಿ ಹರಡುತ್ತಿದ್ದು ಪಟ್ಟಣದ ಹಾಳದಕಟ್ಟಾದಲ್ಲಿಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಬಂದಿದೆ. ಮೆಕ್ಕಾ ಹೋದ ಸಂಬಂಧಿಕರೊಬ್ಬರನ್ನು ಭೇಟಿ ಮಾಡಿ ಬಂದ ನಂತರ ಅವರಿಗೆ ಕೊರೊನಾ ಬಂದಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವದಂತಿ ಹರಡಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯವರ ಗಮನಕ್ಕೆ ಪತ್ರಿಕೆ ತಂದಾಗ ಪರಿಶೀಲಿಸಿ ಅಂತಹ ಯಾವುದೇ ಪ್ರರಣ ಇಲ್ಲಎಂದು ಹೇಳಿದ್ದರು.
ನಿರಾಳ
ಬೇರೆ ದೇಶದಿಂದ ಬಂದವರಿಗೆ ವಿಮಾನ ನಿಲ್ದಾಣದಲ್ಲೇ ಪರೀಕ್ಷಿಸಲಾಗುತ್ತದೆ ಹೀಗಾಗಿ ಯಾವುದೇ ಭಯವಿಲ್ಲಎಂದು ನಿರಾಳವಾಗಿರುವಂತೆ ಕಾಣುತ್ತಿದೆ. ಆದರೆ ಸೋಂಕು ತಗುಲಿದ ಹದಿನಾಲ್ಕು ದಿನದ ನಂತರ ರೋಗ ಲಕ್ಷಣಗಳು ಕಾಣಿಸುವುದರಿಂದ ಹದಿನಾಲ್ಕು ದಿನಗಳವರೆಗೆ ಅವರ ಮೇಲೆ ನಿಗಾ ಇರಿಸಬೇಕಾಗುತ್ತದೆ. ಇದರ ಬಗ್ಗೆ ಪತ್ರಿಕೆಗಳಲ್ಲಿ,ನ್ಯೂಸ್ ಚಾನಲ್ಗಳಲ್ಲಿಸಾಕಷ್ಟು ಬಾರಿ ಬಂದಿದ್ದರೂ ಸ್ಥಳೀಯ ಆರೋಗ್ಯ ಇಲಾಖೆಯವರಿಗೆ ಇದರ ಗಂಭಿರತೆ ಅರಿವಾಗಿಲ್ಲಎನ್ನುವುದು ಸಾರ್ವಜನಿಕರ ಆರೋಪ. ಬೇರೆ ದೇಶದಿಂದ ಬಂದವರನ್ನು ತೀವ್ರಾ ನಿಗಾದಲ್ಲಿರಸಬೇಕು. ಹದಿನಾಲ್ಕು ದಿನ ಕಳೆದ ನಂತರ ಅವರು ಬೇರೆಯವರೊಂದಿಗೆ ಬೆರೆಯಲು ಅವಕಾಶ ಮಾಡಿಕೊಡಬೇಕು .ಈಗಾಗಲೇ ಮಂಗನಕಾಯಿಲೆಯಿಂದ ತಾಲೂಕಿನಲ್ಲಿ ಭೀತಿ ವಾತಾವರಣವಿದ್ದು ಆರೋಗ್ಯ ಇಲಾಖೆæ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಳೆದ ಶನಿವಾರದಿಂದ ತಾಲೂಕಿನಾದ್ಯಂತ ಕೊರೊನಾ ವದಂತಿ ಹರಡುತ್ತಿದ್ದು ಪಟ್ಟಣದ ಹಾಳದಕಟ್ಟಾದಲ್ಲಿಮಹಿಳೆಯೊಬ್ಬರಿಗೆ ಕೊರೊನಾ ಸೋಂಕು ಬಂದಿದೆ. ಮೆಕ್ಕಾ ಹೋದ ಸಂಬಂಧಿಕರೊಬ್ಬರನ್ನು ಭೇಟಿ ಮಾಡಿ ಬಂದ ನಂತರ ಅವರಿಗೆ ಕೊರೊನಾ ಬಂದಿದ್ದು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ವದಂತಿ ಹರಡಿತ್ತು. ಈ ಬಗ್ಗೆ ಆರೋಗ್ಯ ಇಲಾಖೆಯವರ ಗಮನಕ್ಕೆ ಪತ್ರಿಕೆ ತಂದಾಗ ಪರಿಶೀಲಿಸಿ ಅಂತಹ ಯಾವುದೇ ಪ್ರರಣ ಇಲ್ಲಎಂದು ಹೇಳಿದ್ದರು.
ನಿರಾಳ
ಬೇರೆ ದೇಶದಿಂದ ಬಂದವರಿಗೆ ವಿಮಾನ ನಿಲ್ದಾಣದಲ್ಲೇ ಪರೀಕ್ಷಿಸಲಾಗುತ್ತದೆ ಹೀಗಾಗಿ ಯಾವುದೇ ಭಯವಿಲ್ಲಎಂದು ನಿರಾಳವಾಗಿರುವಂತೆ ಕಾಣುತ್ತಿದೆ. ಆದರೆ ಸೋಂಕು ತಗುಲಿದ ಹದಿನಾಲ್ಕು ದಿನದ ನಂತರ ರೋಗ ಲಕ್ಷಣಗಳು ಕಾಣಿಸುವುದರಿಂದ ಹದಿನಾಲ್ಕು ದಿನಗಳವರೆಗೆ ಅವರ ಮೇಲೆ ನಿಗಾ ಇರಿಸಬೇಕಾಗುತ್ತದೆ. ಇದರ ಬಗ್ಗೆ ಪತ್ರಿಕೆಗಳಲ್ಲಿ,ನ್ಯೂಸ್ ಚಾನಲ್ಗಳಲ್ಲಿಸಾಕಷ್ಟು ಬಾರಿ ಬಂದಿದ್ದರೂ ಸ್ಥಳೀಯ ಆರೋಗ್ಯ ಇಲಾಖೆಯವರಿಗೆ ಇದರ ಗಂಭಿರತೆ ಅರಿವಾಗಿಲ್ಲಎನ್ನುವುದು ಸಾರ್ವಜನಿಕರ ಆರೋಪ. ಬೇರೆ ದೇಶದಿಂದ ಬಂದವರನ್ನು ತೀವ್ರಾ ನಿಗಾದಲ್ಲಿರಸಬೇಕು. ಹದಿನಾಲ್ಕು ದಿನ ಕಳೆದ ನಂತರ ಅವರು ಬೇರೆಯವರೊಂದಿಗೆ ಬೆರೆಯಲು ಅವಕಾಶ ಮಾಡಿಕೊಡಬೇಕು .ಈಗಾಗಲೇ ಮಂಗನಕಾಯಿಲೆಯಿಂದ ತಾಲೂಕಿನಲ್ಲಿ ಭೀತಿ ವಾತಾವರಣವಿದ್ದು ಆರೋಗ್ಯ ಇಲಾಖೆæ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.