ಆ್ಯಪ್ನಗರ

ಏ. 5ಕ್ಕೆ ಶಿರಸಿಗೆ ಜಿಗ್ನೇಶ್‌ ಮೇವಾನಿ

ಅಂಬೇಡ್ಕರರ ಸಂವಿಧಾನ ವಿರೋಧಿಸುವವರಿಗೆ ದೇಶವನ್ನಾಳುವ ಹಕ್ಕಿಲ್ಲ ಮತ್ತು ಗಾಂಧಿ, ಗೌರಿಯನ್ನು ಕೊಂದವರಿಗೆ ನಮ್ಮ ಓಟು ಇಲ್ಲ

Vijaya Karnataka 2 Apr 2018, 9:31 am
ಶಿರಸಿ (ಉತ್ತರ ಕನ್ನಡ): ಅಂಬೇಡ್ಕರರ ಸಂವಿಧಾನ ವಿರೋಧಿಸುವವರಿಗೆ ದೇಶವನ್ನಾಳುವ ಹಕ್ಕಿಲ್ಲ ಮತ್ತು ಗಾಂಧಿ, ಗೌರಿಯನ್ನು ಕೊಂದವರಿಗೆ ನಮ್ಮ ಓಟು ಇಲ್ಲ ಎಂಬ ಘೋಷವಾಕ್ಯದೊಂದಿಗೆ 'ಸಂವಿಧಾನ ಉಳಿವಿಗಾಗಿ ಕರ್ನಾಟಕ' ಆಂದೋಲನ ನಗರದಲ್ಲಿ ಏ. 5 ರಂದು ಆರಂಭವಾಗಲಿದೆ.
Vijaya Karnataka Web jignesh mevani sirasi visit
ಏ. 5ಕ್ಕೆ ಶಿರಸಿಗೆ ಜಿಗ್ನೇಶ್‌ ಮೇವಾನಿ


''ಗುಜರಾತ ಶಾಸಕ ಜಿಗ್ನೇಶ್‌ ಮೇವಾನಿ ಉದ್ಘಾಟಿಸುವರು. ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್‌.ಆರ್‌.ಹಿರೇಮಠ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ ಮುಂತಾದ ಪ್ರಮುಖರು ಪಾಲ್ಗೊಳ್ಳುವರು'' ಎಂದು ಕರ್ನಾಟಕ ಕೋಮುಸೌಹಾರ್ದ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್‌.ಅಶೋಕ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

''ಕೆನರಾ ಸಂಸದರು ಸಂವಿಧಾನ ಬದಲಿಸಬೇಕು, ಜಾತ್ಯತೀತರಿಗೆ ಅಪ್ಪ, ಅಮ್ಮ ಇಲ್ಲ ಎಂಬ ಹೇಳಿಕೆ ನೀಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನ ರಾಜಕಾರಣದ ಹೊಸ ಪ್ರಯೋಗವಾಗಿ 'ಸಂವಿಧಾನ ಉಳಿವಿಗಾಗಿ ಕರ್ನಾಟಕ' ಆಂದೋಲನ ಸಂಘಟಿಸಲಾಗಿದೆ. ಸಂವಿಧಾನ ಬದಲಿಸಬೇಕು ಎಂಬ ಹೇಳಿಕೆ ನೀಡಿದ ಅನಂತಕುಮಾರ ಹೆಗಡೆ ಇದೇ ಕ್ಷೇತ್ರದವರಾಗಿದ್ದರಿಂದ ಶಿರಸಿಯಿಂದಲೇ ಆಂದೋಲನ ಪ್ರಾರಂಭಿಸುತ್ತಿದ್ದೇವೆ'' ಎಂದರು.

ಶಿವಮೊಗ್ಗ ಜಿಲ್ಲಾ ಡಿಎಸ್‌ಎಸ್‌ ಸಂಚಾಲಕ ಪರಮೇಶ್ವರ ದುಗೂರು, ಆಂದೋಲನದ ಸಂಘಟಕ ಕೆ.ರಮೇಶ, ಕನ್ನೇಶ ಕೋಲಸಿರ್ಸಿ, ಕಾರ್ಮಿಕ ಮುಖಂಡ ನಾಗಪ್ಪ ನಾಯ್ಕ, ಪ್ರಮುಖರಾದ ಆರ್‌.ಜಿ.ನಾಯ್ಕ, ಎಂ.ಎನ್‌.ನಾಯ್ಕ, ಮಹಾದೇವ ಚಲವಾದಿ, ಭಾಸ್ಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ