ಆ್ಯಪ್ನಗರ

ಜು. 5ರಂದು ಸ್ವರ್ಣವಲ್ಲೀ ಶ್ರೀಗಳ

ಶಿರಸಿ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ 30ನೇ ಚಾತುರ್ಮಾಸ್ಯ ವ್ರತ ಸಂಕಲ್ಪ ಜುಲೈ 5ರಂದು ಸ್ವರ್ಣವಲ್ಲೀಯಲ್ಲಿನಡೆಯಲಿದೆ.

Vijaya Karnataka 29 Jun 2020, 5:00 am
ಶಿರಸಿ: ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ 30ನೇ ಚಾತುರ್ಮಾಸ್ಯ ವ್ರತ ಸಂಕಲ್ಪ ಜುಲೈ 5ರಂದು ಸ್ವರ್ಣವಲ್ಲೀಯಲ್ಲಿನಡೆಯಲಿದೆ.
Vijaya Karnataka Web ju on the 5th mr srilal
ಜು. 5ರಂದು ಸ್ವರ್ಣವಲ್ಲೀ ಶ್ರೀಗಳ


ಜು.5ರಿಂದ ಸೆ.2ರ ತನಕ ನಡೆಯಲಿರುವ ವ್ರತ ಸಂಕಲ್ಪ ಇದಾಗಿದ್ದು, ಕೊರೊನಾ ವೈರಸ್‌ ಕಾರಣದಿಂದ ಸರಳವಾಗಿ ಆಚರಿಸಲು ತೀರ್ಮಾನಿಸಲಾಗಿದೆ.

ಅಂದು ಬೆಳಗ್ಗೆ ವ್ಯಾಸ ಪೂಜೆ, ಚಾತುರ್ಮಾಸ್ಯ ವ್ರತ ಸಂಕಲ್ಪ, ಶಿಷ್ಯರ ಪರವಾಗಿ ಆಡಳಿತ ಮಂಡಳಿಯಿಂದ ಪಾದಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಚಾತುರ್ಮಾಸ್ಯದ ಅವಧಿಯಲ್ಲಿಪ್ರತಿ ದಿನ ಋುಗ್ವೇದ, ಕೃಷ್ಣಾಜುರ್ವೇದ, 18 ಪುರಾಣಗಳು, ಮಹಾಭಾರತ ಪಾರಾಯಣಗಳು ಹಾಗೂ ಮಹಾಭಾರತ ವಿಶೇಷ ಪ್ರವಚನ ಕೂಡ ಏರ್ಪಡಿಸಲಾಗಿದೆ.

ಚಾತುರ್ಮಾಸ್ಯ ವ್ರತ ಸಂಕಲ್ಪ ದಿನದಂದು ನಡೆಯುವ ವ್ಯಾಸ ವಂದನದಲ್ಲಿಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಸದಸ್ಯ ಸುಬ್ರಾಯ ಹೆಗಡೆ ಗೌರಿಬಣಗಿ ಪಾಲ್ಗೊಳ್ಳಲಿದ್ದಾರೆ.

ಚಾತುರ್ಮಾಸ್ಯದ ಅವಧಿಯಲ್ಲಿಕೊರೊನಾ ವೈರಸ್‌ ನಿಯಂತ್ರಣಕ್ಕಾಗಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ, ಮುಖ ಗವಸು ಧಾರಣೆ, ಥರ್ಮಲ್‌ ಸ್ಕ್ರೀನಿಂಗ್‌ ಒಳಪಡಬೇಕು. 10 ವರ್ಷಕ್ಕಿಂತ ಕಡಿಮೆಯವರು, 65ಕ್ಕಿಂತ ಮೇಲ್ಪಟ್ಟವರು ಸದ್ಯದ ಪರಿಸ್ಥಿತಿಯಲ್ಲಿಮಠಕ್ಕೆ ಆಗಮಿಸಬಾರದು ಎಂದು ಮಠದ ಅಧ್ಯಕ್ಷ ವಿN್ನೕಶ್ವರ ಹೆಗಡೆ ಬೊಮ್ಮನಳ್ಳಿ ತಿಳಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ