ಭಟ್ಕಳ : ತಾಲೂಕು ಮಟ್ಟದ 55 ಕೆಜಿ ವಿಭಾಗದ ಕಬಡ್ಡಿ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಕಂಠೀರವ ಫ್ರೆಂಡ್ಸ್ ತಂಡ ಗೆದ್ದುಕೊಂಡಿತು.
ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ತಲಾಂದನ ಕಟ್ಟೇವೀರ ಮಹಾಸತಿ ಮೈದಾನದಲ್ಲಿ ಕಂಠೀರವ ಫ್ರೆಂಡ್ಸ್ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟವನ್ನು ಶಾಸಕ ಸುನೀÇ ನಾಯ್ಕ ಉದ್ಘಾಟಿಸಿದ್ದರು. 55ಕೆ.ಜಿ ವಿಭಾಗದ ಕಬಡ್ಡಿ ಪಂದ್ಯವಳಿಯಲ್ಲಿ ತಾಲೂಕಿನ 26 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಕಂಠೀರವ ಫ್ರೆಂಡ್ಸ್ ತಂಡ ವಿಜಯಿಯಾಗಿದ್ದು 8000 ಸಾವಿರ ನಗದು ಮತ್ತು ಟ್ರೋಫಿ ತನ್ನಾದಾಗಿಸಿಕೊಂಡಿದೆ. ದ್ವಿತೀಯ ಬಹುಮಾನವನ್ನು ಮಹಾಸತಿ ಮಣ್ಣೊಂಡ ತಂಡ ಪಡೆದುಕೊಂಡರೆ, ತೃತೀಯ ಬಹುಮಾನವನ್ನು ಅಲ್ ಬ್ರದರ್ ತಂಡ ತನ್ನದಾಗಿಸಿಕೊಂಡಿದೆ.
ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಸುಜಯ, ಬೆಸ್ಟ್ ಡಿಫೆಂಡರ್ ನೀತಿನ ನಾಯಕ, ಬೆಸ್ಟ್ ಆಲ್ ರೌಂಡರ ಪ್ರಶಸ್ತಿಯನ್ನು ಸಂಜಯ ನಾಯ್ಕ ಪಡೆದಿದ್ದಾರೆ. ಕಟ್ಟೇವೀರ ತಂಡದ ಯೋಗೇಶ, ಪರಶುರಾಮ ತಂಡದ ಮಂಜು ನಾಯ್ಕ, ಸರ್ಪನಕಟ್ಟೆ ತಂಡದ ಉಮೇಶ ನಾಯ್ಕ ತೀರ್ಪುಗಾರರಾಗಿ ಆಗಮಿಸಿದ್ದರು. ಸುರೇಶ ನಾಯ್ಕ, ಗಣಪತಿ ರಾಮಚಂದ್ರ ನಾಯ್ಕ, ಸತೀಶ ಮಂಜಪ್ಪ ನಾಯ್ಕ, ಮಾದೇವ ನಾಯ್ಕ, ಮಂಜುನಾಥ ನಾಯ್ಕ ಇತರರು ಇದ್ದರು.
ತಾಲೂಕಿನ ಮುಟ್ಟಳ್ಳಿ ಗ್ರಾಪಂ ವ್ಯಾಪ್ತಿಯ ತಲಾಂದನ ಕಟ್ಟೇವೀರ ಮಹಾಸತಿ ಮೈದಾನದಲ್ಲಿ ಕಂಠೀರವ ಫ್ರೆಂಡ್ಸ್ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟವನ್ನು ಶಾಸಕ ಸುನೀÇ ನಾಯ್ಕ ಉದ್ಘಾಟಿಸಿದ್ದರು. 55ಕೆ.ಜಿ ವಿಭಾಗದ ಕಬಡ್ಡಿ ಪಂದ್ಯವಳಿಯಲ್ಲಿ ತಾಲೂಕಿನ 26 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಕಂಠೀರವ ಫ್ರೆಂಡ್ಸ್ ತಂಡ ವಿಜಯಿಯಾಗಿದ್ದು 8000 ಸಾವಿರ ನಗದು ಮತ್ತು ಟ್ರೋಫಿ ತನ್ನಾದಾಗಿಸಿಕೊಂಡಿದೆ. ದ್ವಿತೀಯ ಬಹುಮಾನವನ್ನು ಮಹಾಸತಿ ಮಣ್ಣೊಂಡ ತಂಡ ಪಡೆದುಕೊಂಡರೆ, ತೃತೀಯ ಬಹುಮಾನವನ್ನು ಅಲ್ ಬ್ರದರ್ ತಂಡ ತನ್ನದಾಗಿಸಿಕೊಂಡಿದೆ.
ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಸುಜಯ, ಬೆಸ್ಟ್ ಡಿಫೆಂಡರ್ ನೀತಿನ ನಾಯಕ, ಬೆಸ್ಟ್ ಆಲ್ ರೌಂಡರ ಪ್ರಶಸ್ತಿಯನ್ನು ಸಂಜಯ ನಾಯ್ಕ ಪಡೆದಿದ್ದಾರೆ. ಕಟ್ಟೇವೀರ ತಂಡದ ಯೋಗೇಶ, ಪರಶುರಾಮ ತಂಡದ ಮಂಜು ನಾಯ್ಕ, ಸರ್ಪನಕಟ್ಟೆ ತಂಡದ ಉಮೇಶ ನಾಯ್ಕ ತೀರ್ಪುಗಾರರಾಗಿ ಆಗಮಿಸಿದ್ದರು. ಸುರೇಶ ನಾಯ್ಕ, ಗಣಪತಿ ರಾಮಚಂದ್ರ ನಾಯ್ಕ, ಸತೀಶ ಮಂಜಪ್ಪ ನಾಯ್ಕ, ಮಾದೇವ ನಾಯ್ಕ, ಮಂಜುನಾಥ ನಾಯ್ಕ ಇತರರು ಇದ್ದರು.