ಆ್ಯಪ್ನಗರ

ಕದ್ರಾ ಜಲಾಶಯ : 10 ಗೇಟ್‌ಗಳಿಂದ ನೀರು ಹೊರಕ್ಕೆ

ಕಾರವಾರ: ತಾಲೂಕಿನ ಕದ್ರಾ ಜಲಾಶಯದ 10 ಗೇಟ್‌ ತೆರೆದು ನೀರು ಹೊರ ಬೀಡಲಾಗಿದ್ದು, ಜಲಾಶಯ ಸಮೀಪದ ಏಳು ಕುಟುಂಬಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

Vijaya Karnataka 6 Aug 2019, 5:00 am
ಕಾರವಾರ: ತಾಲೂಕಿನ ಕದ್ರಾ ಜಲಾಶಯದ 10 ಗೇಟ್‌ ತೆರೆದು ನೀರು ಹೊರ ಬೀಡಲಾಗಿದ್ದು, ಜಲಾಶಯ ಸಮೀಪದ ಏಳು ಕುಟುಂಬಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
Vijaya Karnataka Web KWR-5SUNEEL7


ಸತತ ಮಳೆಯಿಂದ ಜಲಾಶಯಗಳ ಒಳ ಹರಿವು ಅಧಿಕವಾಗಿದೆ. ರವಿವಾರ ಸಂಜೆಯಿಂದ ಸೋಮವಾರ ಬೆಳಗಿನಜಾವದವರೆಗೆ 5 ಗೇಟ್‌ಗಳನ್ನು ತೆರೆದು 0.83 ಟಿಎಂಸಿ ನೀರನ್ನು ಹೊರ ಬಿಡಲಾಗಿತ್ತು. ಸೋಮವಾರ ಸಂಜೆವರೆಗೂ ಮಳೆ ನಿರಂತರವಾಗಿರುವುದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಇನ್ನಷ್ಟು ಏರಿಕೆಯಾಗಿದೆ. ಇದರಿಂದಾಗಿ 10 ಗೇಟ್‌ಗಳನ್ನು ತೆರೆದು 43100 ಕ್ಯುಸೆಕ್‌ ನೀರು ಹೊರ ಬಿಡಲಾಗಿದೆ. ಸುರಕ್ಷ ತೆಯ ಹಿತದೃಷ್ಟಿಯಿಂದ ಕದ್ರಾದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಗಂಜಿಕೇಂದ್ರ ಮಾಡಲಾಗಿದ್ದು, ಅಲ್ಲಿ 7ಕುಟುಂಬಗಳ 23ಜನರನ್ನು ಸ್ಥಳಾಂತರಿಸಲಾಗಿದೆ.

ಗ್ರಾಮ ಪಂಚಾಯತ ಅಧಿಕಾರಿ, ಕಂದಾಯ ನಿರೀಕ್ಷ ಕರು, ಗ್ರಾಮಲೆಕ್ಕಾಧಿಕಾರಿ ಸ್ಥಳದಲ್ಲಿ ಉಪಸ್ಥಿತರಿದ್ದು ಮುಂಜಾಗೃತಾ ಕ್ರಮ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ