ಆ್ಯಪ್ನಗರ

ಇದೇ ಮೊದಲ ಬಾರಿ ಗೋವಾದಲ್ಲಿ ಕನ್ನಡ ಮಾಧ್ಯಮ ಪರೀಕ್ಷೆ

ಗೋವಾದಲ್ಲಿ ಕಲಿಯುತ್ತಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಕಾರವಾರಕ್ಕೆ ಬರುವ ಗೋಳು ತಪ್ಪಿದ್ದು ಕನ್ನಡಿಗರ ದಶಕಗಳ ಬೇಡಿಕೆ ಕೊರೊನಾ ಕಾರಣದಿಂದ ಈಡೇರಿದಂತಾಗಿದೆ.

Vijaya Karnataka 27 May 2020, 11:08 pm
ಕಾರವಾರ : ಇದೇ ಮೊದಲ ಬಾರಿಗೆ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಎಸ್ಸೆಸ್ಸೆಲ್ಸಿ ಪರೀಕ್ಷೆ ಗೋವಾದಲ್ಲೂ ನಡೆಯಲಿದೆ. ಗೋವಾದಲ್ಲಿ ಕಲಿಯುತ್ತಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಪರೀಕ್ಷೆಗಾಗಿ ಕಾರವಾರಕ್ಕೆ ಬರುವ ಗೋಳು ತಪ್ಪಿದ್ದು ಕನ್ನಡಿಗರ ದಶಕಗಳ ಬೇಡಿಕೆ ಕೊರೊನಾ ಕಾರಣದಿಂದ ಈಡೇರಿದಂತಾಗಿದೆ.
Vijaya Karnataka Web ಪರೀಕ್ಷೆ
ಪರೀಕ್ಷೆ


ಗೋವಾದಲ್ಲಿಎರಡು ಕನ್ನಡ ಮಾಧ್ಯಮ ಪ್ರೌಢಶಾಲೆಗಳಿವೆ, ಎರಡೂ ಶಾಲೆಗಳಿಂದ ಪ್ರತಿ ವರ್ಷ ಸರಾಸರಿ 50 ವಿದ್ಯಾರ್ಥಿಗಳು ಇರುತ್ತಾರೆ. ಆದರೆ ಅಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಪರೀಕ್ಷೆಗೆ ಅವಕಾಶವಿಲ್ಲದ ಕಾರಣ ವಿದ್ಯಾರ್ಥಿಗಳು ಕಾರವಾರ ತಾಲೂಕಿನ ಉಳಗಾದ ಶಾಲೆಗೆ ಬಂದು ಪರೀಕ್ಷೆ ಬರೆದು ಹೋಗುತ್ತಿದ್ದರು. ಇದರಿಂದ ವಿದ್ಯಾರ್ಥಿಗಳಿಗೆ ಅನಗತ್ಯ ಸಮಯ, ಸಂಚಾರ ಶ್ರಮ, ಹಣ ವೆಚ್ಚವಾಗುತ್ತಿದ್ದು ತೊಂದರೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಅಲ್ಲಿಯೇ ಪರೀಕ್ಷೆಗೆ ಅವಕಾಶ ಕಲ್ಪಿಸುವಂತೆ ಕನ್ನಡಿಗರು ಗೋವಾ ಸರಕಾರವನ್ನು ನಿರಂತರವಾಗಿ ಆಗ್ರಹಿಸುತ್ತ ಬಂದಿದ್ದರು.

ಈ ವರ್ಷ ಗೋವಾದ ಎರಡೂ ಕನ್ನಡ ಮಾಧ್ಯಮ ಹೈಸ್ಕೂಲುಗಳಿಂದ ಒಟ್ಟು 47 ವಿದ್ಯಾರ್ಥಿಗಳಿದ್ದಾರೆ. ಈ ಬಾರಿ ಕೊರೊನಾ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಅಲ್ಲಿಯೇ ಪರೀಕ್ಷೆ ಬರೆಯಲು ಗೋವಾ ಸರಕಾರ ಅನುಮತಿಸಿದೆ. ಕೊರೊನಾ ಮಹಾಮಾರಿ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಯ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಕೊರೊನಾದಿಂದಾಗಿ ವಿವಿಧ ರಾಜ್ಯಗಳು ಹೇರಿರುವ ನಿಬಂರ್‍ಧಗಳು ಮತ್ತು ಮಾರ್ಗಸೂಚಿಗಳಿಂದಾಗಿ ಈ ವಿದ್ಯಾರ್ಥಿಗಳಿಗೆ ಆಯಾ ರಾಜ್ಯಗಳಿಂದ ಕರ್ನಾಟಕಕ್ಕೆ ಪರೀಕ್ಷೆಗೆ ಬರುವುದು ಕಷ್ಟವಾಗಿತ್ತು. ರಾಜ್ಯ ಸರಕಾರದ ಈ ನಿರ್ಣಯದಿಂದ ಈ ವಿದ್ಯಾರ್ಥಿಗಳ ಆತಂಕ ದೂರವಾಗಿದೆ.

ಕಾಣಕೋಣದಲ್ಲಿ ಪರೀಕ್ಷೆ : ಗೋವಾದ ವಾಸ್ಕೊ ಮತ್ತು ಪಣಜಿಯಲ್ಲಿ ಕನ್ನಡ ಮಾಧ್ಯಮ ಶಾಲೆಗಳಿವೆ, ಇಲ್ಲಿನ ವಿದ್ಯಾರ್ಥಿಗಳಿಗೆ ಗೋವಾ ಕಾಣಕೋಣದ ಸರಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷಾ ಕೇಂದ್ರ ತೆರೆಯಲಾಗಿದೆ ಎಂದು ಕಾರವಾರದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೇಳಿದರು.

ಗೋವಾದವರ ಪರೀಕ್ಷೆ ಕಾರವಾರದಲ್ಲಿ : ಕನ್ನಡ ಮಾಧ್ಯಮ ಹೈಸ್ಕೂಲಿನ ಪರೀಕ್ಷೆ ಗೋವಾದಲ್ಲಿ ನಡೆಲಿರುವ ಮುನ್ನವೇ ಇತ್ತ ಗೋವಾ ಎಸ್‌ಎಸ್‌ಎಲ್‌ಸಿ ಬೋರ್ಡಿನ ಪರೀಕ್ಷೆಯೂ ಇದೇ ಪ್ರಥಮ ಬಾರಿಗೆ ಕಾರವಾರ ತಾಲೂಕಿನಲ್ಲಿನಡೆದಿದೆ. ತಾಲೂಕಿನ 22 ವಿದ್ಯಾರ್ಥಿಗಳು ಗೋವಾದ ಹೈಸ್ಕೂಲುಗಳಲ್ಲಿ ಓದುತ್ತಿದ್ದಾರೆ. ಗೋವಾ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಈಗಾಗಲೇ ಪ್ರಾರಂಭಗೊಂಡಿದೆ. ಈ 22 ವಿದ್ಯಾರ್ಥಿಗಳು ಪ್ರಸ್ತುತ ತಾಲೂಕಿನ ಮಾಜಾಳಿಯ ಪ್ರೌಢಶಾಲೆಯಲ್ಲಿ ತೆರೆಯಲಾದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಹಾಜರಾಗುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ