ಆ್ಯಪ್ನಗರ

ಸಾಗರ ಮಾಲಾ ಯೋಜನೆ ವಿರುದ್ಧ ಮೀನುಗಾರರ ಪ್ರತಿಭಟನೆ: ದಿಢೀರ್ ಬಂದ್‌ಗೆ ಕಾರವಾರ ಅಯೋಮಯ..!

ಕಾರವಾರ (ಉತ್ತರ ಕನ್ನಡ): ಕಾರವಾರದಲ್ಲಿ ನಡೆದ ದಿಢೀರ್ ಬಂದ್ ಇಡೀ ನಗರವನ್ನು ಅಯೋಮಯಗೊಳಿಸಿತು. ಸಾಗರ ಮಾಲಾ ಯೋಜನೆ ಅಡಿ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ನೂರಾರು ಜನರನ್ನು ಬಂಧಿಸಿದರು. ಬಳಿಕ ಪೊಲೀಸರು ಬಿಡುಗಡೆಗೊಳಿಸಿದವರ ಪೈಕಿ ಮೂವರು ಅಸ್ವಸ್ಥರಾದರು. ಹೀಗಾಗಿ ಏಕಾಏಕಿ ಕಾರವಾರ ಬಂದ್‌ಗೆ ಕರೆ ನೀಡಲಾಯ್ತು. ವಿವಿಧ ಸಂಘಟನೆಯವರು ನೀಡಿದ ಬಂದ್ ಕರೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆವರೆಗೂ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟವು.

Vijaya Karnataka Web 13 Jan 2020, 5:54 pm
ಕಾರವಾರ (ಉತ್ತರ ಕನ್ನಡ): ಕಾರವಾರದಲ್ಲಿ ನಡೆದ ದಿಢೀರ್ ಬಂದ್ ಇಡೀ ನಗರವನ್ನು ಅಯೋಮಯಗೊಳಿಸಿತು. ಸಾಗರ ಮಾಲಾ ಯೋಜನೆ ಅಡಿ ವಾಣಿಜ್ಯ ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ನೂರಾರು ಜನರನ್ನು ಬಂಧಿಸಿದರು. ಬಳಿಕ ಪೊಲೀಸರು ಬಿಡುಗಡೆಗೊಳಿಸಿದವರ ಪೈಕಿ ಮೂವರು ಅಸ್ವಸ್ಥರಾದರು. ಹೀಗಾಗಿ ಏಕಾಏಕಿ ಕಾರವಾರ ಬಂದ್‌ಗೆ ಕರೆ ನೀಡಲಾಯ್ತು. ವಿವಿಧ ಸಂಘಟನೆಯವರು ನೀಡಿದ ಬಂದ್ ಕರೆ ಹಿನ್ನೆಲೆಯಲ್ಲಿ ಸೋಮವಾರ ಸಂಜೆವರೆಗೂ ನಗರದಲ್ಲಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟವು.
Vijaya Karnataka Web karawara bundh following fishermen protest against sagara mala project
ಸಾಗರ ಮಾಲಾ ಯೋಜನೆ ವಿರುದ್ಧ ಮೀನುಗಾರರ ಪ್ರತಿಭಟನೆ: ದಿಢೀರ್ ಬಂದ್‌ಗೆ ಕಾರವಾರ ಅಯೋಮಯ..!



​ಶಾಸಕಿ ರೂಪಾಲಿ ವಿರುದ್ಧ ಆಕ್ರೋಶ

ಶಾಸಕಿ ರೂಪಾಲಿ ನಾಯ್ಕ ಸ್ಥಳಕ್ಕೆ ಬಾರದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮೀನುಗಾರರು ಶಾಸಕಿ ವಿರುದ್ದ ಘೋಷಣೆ ಕೂಗಿದರು. ನಂತರ ಕೆಲವರು ಮಾಜಿ ಶಾಸಕ ಸತೀಶ್ ಸೈಲ್ ರನ್ನು ಕರೆತಂದರು. ಪೊಲೀಸರ ವಶದಲ್ಲಿದ್ದ ಮೀನುಗಾರರನ್ನು ಬಿಡುಗಡೆಗೊಳಿಸುಂತೆ ಆಗ್ರಹಿಸಿದರು.

​ರೊಚ್ಚಿಗೆದ್ದರು ಮೀನು ಮಾರುವ ಮಹಿಳೆಯರು..!

ಪ್ರತಿಭಟನಾಕಾರರು ಸಂಸದ ಅನಂತಕುಮಾರ ಹೆಗಡೆ ಹಾಗೂ ಶಾಸಕಿ ರೂಪಾಲಿ ನಾಯ್ಕ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇಬ್ಬರಿಗೂ ಧಿಕ್ಕಾರ ಕೂಗಿದರು. ಮೀನುಗಾರರು ಹಾಗೂ ಪೊಲೀಸರ ಮಧ್ಯೆ ಹಲವು ಬಾರಿ ವಾಗ್ವಾದಗಳು ನಡೆದವು. ಮೀನು ಮಾರಾಟ ಮಾಡುವ ಮಹಿಳೆಯರು ತಮ್ಮ ವ್ಯಾಪಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಒಮ್ಮೆ ಎರಡು ಬಸ್‌ಗಳಲ್ಲಿ ಮೀನುಗಾರರನ್ನು ಬಂಧಿಸಿ ಕರೆದೊಯ್ಯಲಾಗಿದ್ದು, ಇನ್ನೊಮ್ಮೆ ಬಂಧನಕ್ಕೆ ತಯಾರಿ ನಡೆಸಲಾಗಿತ್ತು. ಕಾಮಗಾರಿ ಮುಂದುವರೆಸಲು ಯತ್ನಿಸುತ್ತಿದ್ದ ಜೆಸಿಬಿ ಚಾಲಕನಿಗೆ ಕೆಲವರು ಕಲ್ಲು ತೋರಿಸಿ ಕಾಮಗಾರಿ ಸ್ಥಗಿತ ಮಾಡುವಂತೆ ಸೂಚನೆ ನೀಡಿದರು. ಈ ವೇಳೆ, ಸ್ಥಳದಲ್ಲಿ ಬೀಡು ಬಿಟ್ಟಿದ್ದ ಪೊಲೀಸ್ ವರಿಷ್ಠ ಶಿವಪ್ರಕಾಶ ದೇವರಾಜು, ಪ್ರತಿಭಟನಾಕಾರರ ಮೇಲೆ ಕಾನೂನು ಕ್ರಮ ಕೈಗೊಳ್ಳುವದಾಗಿ ಎಚ್ಚರಿಸಿದರು.

​ಬಂದ್‌ನಿಂದಾಗಿ ಕಾರವಾರ ಅಯೋಮಯ..!

ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಮೀನುಗಾರರಿಂದ ಬಂದರು ವಿಸ್ತರಣೆಗೆ ವಿರೋಧ ಹಾಗೂ ಪ್ರತಿಭಟನೆಗಳು ನಡೆಯುತ್ತಿದ್ದವು. ಬಂಧನಕ್ಕೊಳಗಾಗಿದ್ದ ಮಹಿಳೆಯೊಬ್ಬರು ತೀವ್ರವಾಗಿ ಅಸ್ವಸ್ಥಗೊಂಡರು. ಅವರನ್ನು ಪೊಲೀಸರೇ ಆಸ್ಪತ್ರೆಗೆ ರವಾನಿಸಿದರು. ಪ್ರತಿಭಟನಾ ಸ್ಥಳದಲ್ಲಿಯೂ ಮದ್ಯಾಹ್ನದ ವೇಳೆ ಇಬ್ಬರು ಅಸ್ವಸ್ಥಗೊಂಡರು. ಇನ್ನು ಬೆಳಗ್ಗೆ 9 ಗಂಟೆಯ ವೇಳೆಗೆ ವಿವಿಧ ಸಂಘಟನೆಯವರು ಕಾರವಾರ ಬಂದ್ ಕರೆ ನೀಡಿದರು. ಹೀಗಾಗಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆಯಲಿಲ್ಲ. ಅನೇಕರು ಭಯದಲ್ಲಿ ಅಂಗಡಿ ತೆರೆಯದಿದ್ದರೆ, ಹಲವಡೆ ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲಾಯಿತು. ರಿಕ್ಷಾ ಹಾಗೂ ಟೆಂಪೋಗಳು ಕೂಡ ಸಾರ್ವಜನಿಕ ಸೇವೆಗೆ ಲಭ್ಯವಿರಲಿಲ್ಲ. ವಶಕ್ಕೆ ಪಡೆದ ಮೀನುಗಾರರನ್ನು ಪೊಲೀಸ್ ವಸತಿಗೃಹದಲ್ಲಿ ಇರಿಸಲಾಗಿದ್ದು, ಅಲ್ಲಿಂದ ಉಪಾಯವಾಗಿ ತಪ್ಪಿಸಿಕೊಂಡು ಬಂದ ಕೆಲವರು ಮತ್ತೆ ಪ್ರತಿಭಟನೆಯಲ್ಲಿ ಕಾಣಿಸಿಕೊಂಡರು.

​ಮೀನುಗಾರರ ಪ್ರತಿಭಟನೆಗೆ ಬೆಚ್ಚಿದ ಜಿಲ್ಲಾಡಳಿತ..!

ಸೋಮವಾರ ಬೆಳಗ್ಗೆ ಬಂದರು ವಿಸ್ತರಣೆ ಕಾಮಗಾರಿ ಆರಂಭಿಸಲು ಯಂತ್ರಗಳನ್ನು ತರಲಾಗಿತ್ತು. ಇದನ್ನು ವಿರೋಧಿಸಿದ ಪ್ರತಿಭಟನಾ ನಿರತರು ಬ್ಯಾರಿಕೇಡ್ ಹಾಕಿದ್ದರೂ ಅದನ್ನು ತಳ್ಳಿ ಕಾಮಗಾರಿ ಸ್ಥಗಿತಗೊಳಿಸಲು ಯತ್ನಿಸಿದರು. ಈ ಸಂದರ್ಭದಲ್ಲಿ ನೂರಾರು ಮೀನುಗಾರರನ್ನು ಪೊಲೀಸರು ಬಂಧಿಸಿದರು. 11 ಗಂಟೆಯ ವೇಳೆಗೆ ಇನ್ನೊಮ್ಮೆ ಕಡಲತೀರದ ದಾರಿಯಿಂದ ಕಾಮಗಾರಿ ನಡೆಯುವ ಸ್ಥಳಕ್ಕೆ ಬಂದ ನೂರಾರು ಮೀನುಗಾರ ಮಹಿಳೆಯರು ಕೆಲಸ ಸ್ಥಗಿತಗೊಳಿಸುವಂತೆ ಪಟ್ಟು ಹಿಡಿದರು. ಪೊಲೀಸ್ ಹಾಗೂ ಮೀನುಗಾರ ಮಹಿಳೆಯರ ನಡುವೆ ಸಾಕಷ್ಟು ಸಂಘರ್ಷ ನಡೆದಿದ್ದು, ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಭದ್ರತೆಗಿದ್ದ ಪೊಲೀಸರು ಇನ್ನೊಂದು ಮಾರ್ಗದತ್ತ ಧಾವಿಸಿದರು. ಆಗ ಎರಡು ಮಾರ್ಗಗಳು ತೆರೆದಿದ್ದು, ಸಾರ್ವಜನಿಕರು ಎರಡೂ ಕಡೆಯಿಂದ ದೌಡಾಯಿಸಿ ಬಂದು ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಕೆಲ ಕಾಲ ಸ್ಥಳದಲ್ಲಿ ಗೊಂದಲ ಹಾಗೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ ಜನರನ್ನು ಸಾಕಷ್ಟು ಪ್ರಯತ್ನದ ನಂತರ ಪೊಲೀಸರು ಹೊರ ದಬ್ಬಿದರು. ಆಗ ರಾಷ್ಟಿಯ ಹೆದ್ದಾರಿ ಬಳಿ ಜನ ಜಮಾಯಿಸಿದ್ದು, ಹೆದ್ದಾರಿ ಪಕ್ಕದಲ್ಲಿ ಗೊಂದಲದ ವಾತಾವರಣ ಕಂಡು ಬಂದಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ