ಕಾರವಾರ : ಕಾರ್ಗಿಲ್ ಯದ್ಧದಲ್ಲಿ ತಲೆಗೆ ಗುಂಡು ಹೊಕ್ಕಿಯೂ ಸಾವು ಗೆದ್ದು ಬಂದ ವೀರ ಯೋಧ ತಾಲೂಕಿನ ಖಾರ್ಗಾದ ರಮಾಕಾಂತ್ ಸಾವಂತ ಅವರನ್ನು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಗಿರಿಜಾಬಾಯಿ ಸೈಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಶುಕ್ರವಾರ ಸನ್ಮಾನಿಸಿದರು.
ಭೂ ಸೆನೆಯ ಮರಾಠಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ರಮಾಕಾಂತ ಸಾವಂತರವರು 1999 ರಲ್ಲಿ ನಡೆದ ಕಾರ್ಗಿಲ್ಯುದ್ಧದಲ್ಲಿ ಭಾಗಿಯಾಗಿದ್ದರು. ಗುಂಡಿನ ದಾಳಿಯಲ್ಲಿ ತಲೆಗೆ ಗುಂಡು ತಾಗಿದ್ದರೂ ಶತ್ರು ಪಾಳಯದ ಮೂವರನ್ನು ವಧಿಸಿದ್ದರು.
18 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರು ಕಾರ್ಗಿಲ್ ಯುದ್ಧ ನಡೆದ ಒಂದು ವರ್ಷದ ನಂತರ ನಿವೃತ್ತಿ ಹೊಂದಿದರು. ಯುದ್ಧದಲ್ಲಿ ಗಂಭೀರ ಗಾಯಗೊಂಡಿರುವುದರ ಪರಿಣಾಮ ಒಂದು ವರ್ಷ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ನಿವೃತ್ತಿಯಾದರು.
ಸನ್ಮಾನದ ವೇಳೆ ಕಾರ್ಗಿಲ್ ಯುದ್ಧದ ಅನುಭವಗಳನ್ನು ವರು ಹಂಚಿಕೊಂಡ ಸಾವಂತ ಜತೆಗಿದ್ದ 13 ಯೋಧರಲ್ಲಿ ಯುದ್ಧದಲ್ಲಿ ಕೆಲವರು ಗಾಯಗೊಂಡರೆ ಇನ್ನು ಕೆಲವರು ಅಮರರಾದರು. ಹುಲ್ಲಿನ ಬವಣೆಯಲ್ಲಿ ಅಡಗಿದ್ದ ಶತ್ರುಗಳು ತನ್ನ ಮೇಲೆ ಗುಂಡಿನ ದಾಳಿ ನಡೆಸಿದರು. ಬುಲೆಟ್ ಪ್ರುಪ್ ಜಾಕೆಟ್ ಧರಿಸಿದ್ದರಿಂದ ಮೈಗೆ ಗುಂಡುಗಳು ತಾಗಲಿಲ್ಲ. ದುರಾದೃಷ್ಟವಶಾತ್ ಧರಿಸಿದ್ದ ಹೆಲ್ಮೆಟ್ ಬಿದ್ದು ಹೋಯಿತು. ಈ ಸಂದರ್ಭದಲ್ಲಿ ಎರಡು ಗುಂಡುಗಳು ತಲೆ ಸವರಿ ಹೋದವು. ಒಂದು ಗುಂಡು ತಲೆಯೊಳಗೆ ಹೊಕ್ಕಿತು. ಅದನ್ನು ಹೊರತೆಗೆಯಲು ಪ್ರಯತ್ನ ಮಾಡಿದರೂ ರಕ್ತ ಸ್ರಾವದಿಂದ ಪ್ರಜ್ಞೆ ತಪ್ಪಿತು. ಈ ಸಂದರ್ಭದಲ್ಲಿ ಇಬ್ಬರು ಶತ್ರುಗಳು ಪರಾರಿಯಾದರು ಎಂದು ಸಾವಂತ ವಿವರಿಸಿದರು.
ವಿದ್ಯಾರ್ಥಿಗಳಾದ ಅಭಿಷೇಕ ರಾಣೆ, ಶುಭಂ ಪೆಡ್ನೇಕರ್, ಸಾಗರ್ ನಾಯ್ಕ , ಗೌರವ್ ರಾಣೆ ಇತರರು ಉಪಸ್ಥಿತರಿದ್ದರು.
ಭೂ ಸೆನೆಯ ಮರಾಠಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ರಮಾಕಾಂತ ಸಾವಂತರವರು 1999 ರಲ್ಲಿ ನಡೆದ ಕಾರ್ಗಿಲ್ಯುದ್ಧದಲ್ಲಿ ಭಾಗಿಯಾಗಿದ್ದರು. ಗುಂಡಿನ ದಾಳಿಯಲ್ಲಿ ತಲೆಗೆ ಗುಂಡು ತಾಗಿದ್ದರೂ ಶತ್ರು ಪಾಳಯದ ಮೂವರನ್ನು ವಧಿಸಿದ್ದರು.
18 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಅವರು ಕಾರ್ಗಿಲ್ ಯುದ್ಧ ನಡೆದ ಒಂದು ವರ್ಷದ ನಂತರ ನಿವೃತ್ತಿ ಹೊಂದಿದರು. ಯುದ್ಧದಲ್ಲಿ ಗಂಭೀರ ಗಾಯಗೊಂಡಿರುವುದರ ಪರಿಣಾಮ ಒಂದು ವರ್ಷ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ನಿವೃತ್ತಿಯಾದರು.
ಸನ್ಮಾನದ ವೇಳೆ ಕಾರ್ಗಿಲ್ ಯುದ್ಧದ ಅನುಭವಗಳನ್ನು ವರು ಹಂಚಿಕೊಂಡ ಸಾವಂತ ಜತೆಗಿದ್ದ 13 ಯೋಧರಲ್ಲಿ ಯುದ್ಧದಲ್ಲಿ ಕೆಲವರು ಗಾಯಗೊಂಡರೆ ಇನ್ನು ಕೆಲವರು ಅಮರರಾದರು. ಹುಲ್ಲಿನ ಬವಣೆಯಲ್ಲಿ ಅಡಗಿದ್ದ ಶತ್ರುಗಳು ತನ್ನ ಮೇಲೆ ಗುಂಡಿನ ದಾಳಿ ನಡೆಸಿದರು. ಬುಲೆಟ್ ಪ್ರುಪ್ ಜಾಕೆಟ್ ಧರಿಸಿದ್ದರಿಂದ ಮೈಗೆ ಗುಂಡುಗಳು ತಾಗಲಿಲ್ಲ. ದುರಾದೃಷ್ಟವಶಾತ್ ಧರಿಸಿದ್ದ ಹೆಲ್ಮೆಟ್ ಬಿದ್ದು ಹೋಯಿತು. ಈ ಸಂದರ್ಭದಲ್ಲಿ ಎರಡು ಗುಂಡುಗಳು ತಲೆ ಸವರಿ ಹೋದವು. ಒಂದು ಗುಂಡು ತಲೆಯೊಳಗೆ ಹೊಕ್ಕಿತು. ಅದನ್ನು ಹೊರತೆಗೆಯಲು ಪ್ರಯತ್ನ ಮಾಡಿದರೂ ರಕ್ತ ಸ್ರಾವದಿಂದ ಪ್ರಜ್ಞೆ ತಪ್ಪಿತು. ಈ ಸಂದರ್ಭದಲ್ಲಿ ಇಬ್ಬರು ಶತ್ರುಗಳು ಪರಾರಿಯಾದರು ಎಂದು ಸಾವಂತ ವಿವರಿಸಿದರು.
ವಿದ್ಯಾರ್ಥಿಗಳಾದ ಅಭಿಷೇಕ ರಾಣೆ, ಶುಭಂ ಪೆಡ್ನೇಕರ್, ಸಾಗರ್ ನಾಯ್ಕ , ಗೌರವ್ ರಾಣೆ ಇತರರು ಉಪಸ್ಥಿತರಿದ್ದರು.