ಆ್ಯಪ್ನಗರ

ಕಾರವಾರ: ಉಸಿರಾಡಲು ಹರಸಾಹಸ ಪಡುತ್ತಿದ್ದ ಮೀನಿನ ಬಾಯಿಗೆ ಬೀಡಿ ಇರಿಸಿ ವಿಕೃತಿ ಮೆರೆದ ಕಾರ್ಮಿಕರು!

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮೀನಿನ ಬಾಯಿಗೆ ಬೀಡಿ ಇಟ್ಟು ಕೆಲ ಮಿಕೃತಿ ಮನಸ್ಸಿನ ಕಾರ್ಮಿಕರು ಕ್ರೂರತ್ವ ಮೆರೆದಿದ್ದಾರೆ. ಉಸಿರಾಡಲು ಮೀನು ಬಾಯಿ ತೆರೆದರೆ ಕಾರ್ಮಿಕರು ಬೀಡಿ ಇಟ್ಟು ಸೇದುವಂತೆ ಮಾಡಿ ಮಜಾ ತೆಗೆದುಕೊಂಡಿದ್ದಾರೆ. ವಿಡಿಯೋದಲ್ಲಿ ಹಿಂದಿ ಮಾತನಾಡುವುದು ಗಮನಿಸಬಹುದು.

Vijaya Karnataka Web 30 Nov 2020, 8:53 am
ಕಾರವಾರ: ಆಗಷ್ಟೇ ಸಮುದ್ರದಿಂದ ತಂದ ಮೀನು ಸಾವು-ಬುದಕಿನ ನಡುವೆ ಹೋರಾಡುತ್ತಿದ್ದ ವೇಳೆ ವಿಕೃತ ಮನಸ್ಸಿನ ಕೆಲ ಕಾರ್ಮಿಕರು ಮೀನಿನ ಬಾಯಿಗೆ ಬೀಡಿ ಇರಿಸಿ ವಿಕೃತಿ ಮೆರೆದಿದ್ದಾರೆ. ಪ್ರಾಣ ಉಳಿಸಿಕೊಳ್ಳಲು ಮೀನು ಬಾಯಿ ತೆಗೆದ್ರೆ ಅದಕ್ಕೆ ಕೆಲ ಕಾರ್ಮಿಕರು ಬೀಡಿ ಇರಿಸಿ ಸೇದುವಂತೆ ಮಾಡಿ ವಿಕೃತಿ ಮೆರೆದಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕಾರವಾರದ ಬೈತಕೋಲ ಮೀನುಗಾರಿಕೆ ಬಂದರಿನಲ್ಲಿ ನಡೆದಿದೆ ಎನ್ನಲಾಗಿದೆ.
Vijaya Karnataka Web karwar fish


ವಿಡಿಯೋದಲ್ಲಿ ಏನಿದೆ?
ಕೆಲ ಕಾರ್ಮಿಕರು(ಅಲ್ಲಿನ ಕಾರ್ಮಿಕರಾಗಿರುವ ಸಾಧ್ಯತೆ) ಹಿಂದಿ ಮಾತನಾಡುತ್ತಿರುವುದು ವೀಡಿಯೋದಲ್ಲಿ ಗಮನಿಸಬಹುದಾಗಿದೆ. ಸಮುದ್ರದಿಂದ ತಂದಿರುವ ಮೀನನ್ನು ಮೇಜಿನ ಮೇಲೆ ನೇರವಾಗಿ ಇಡುತ್ತಾರೆ. ಈ ವೇಳೆ ಸಾವು-ಬದುಕಿನ ನಡುವೆ ಮೀನು ಹೋರಾಡುತ್ತಿರುತ್ತದೆ. ನೀರು ಹಾಗೂ ಉಸಿರಾಟಕ್ಕಾಗಿ ಮೀನು ಬಾಯಿ ತೆಗೆಯುತ್ತಿರುತ್ತದೆ.

ಮೀನಿನ ಬಾಯಿಗೆ ಬೀಡಿ ಇಟ್ಟು ಹೇಗೆ ವಿಕೃತಿ ಮೆರೆದಿದ್ದಾರೆ? ಇಲ್ಲಿದೆ ವಿಡಿಯೋ!

ಈ ವೇಳೆ ಓರ್ವ ಮೀನಿನ ಬಾಯಿಗೆ ಬೀಡಿ ಇಟ್ಟು ಬೆಂಕಿ ಹಚ್ಚುತ್ತಾನೆ. ಮೀನು ಊಸಿರಾಡುವಾಗ ಅದು ಬೀಡಿ ಸೇದುವಂತೆ ಕಾಣುತ್ತದೆ. ಸದ್ಯ ಯುವಕರ ಈ ಕುಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಜೀವ ಉಳಿಸದಿದ್ದರು ಪರವಾಗಿಲ್ಲ ಈ ರೀತಿಯ ಕುಕೃತ್ಯ ಮಾತ್ರ ಎಸಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರಕಾರದ ತಪ್ಪು ನೀತಿಗಳಿಂದ ಅವಾಂತರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ