ಆ್ಯಪ್ನಗರ

ನೀತಿಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಿ

ಯಲ್ಲಾಪುರ : ಲೋಕಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸುವ ಸಲುವಾಗಿ ಯಲ್ಲಾಪುರ, ಶಿರಸಿ, ಮುಂಡಗೋಡು ಭಾಗದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಸಭೆಯು ಪಟ್ಟಣದ ತಾಪಂ ಆವಾರದಲ್ಲಿ ಬುಧವಾರ ನಡೆಯಿತು.

Vijaya Karnataka 21 Mar 2019, 5:00 am
ಯಲ್ಲಾಪುರ : ಲೋಕಸಭಾ ಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸುವ ಸಲುವಾಗಿ ಯಲ್ಲಾಪುರ, ಶಿರಸಿ, ಮುಂಡಗೋಡು ಭಾಗದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳ ಹಾಗೂ ಸಿಬ್ಬಂದಿಯ ಸಭೆಯು ಪಟ್ಟಣದ ತಾಪಂ ಆವಾರದಲ್ಲಿ ಬುಧವಾರ ನಡೆಯಿತು.
Vijaya Karnataka Web KWR-20 YLP 2


ಸಭೆಯ ಅಧ್ಯಕ್ಷ ತೆ ವಹಿಸಿದ್ದ ಸಹಾಯಕ ಚುನಾವಣಾ ಅಧಿಕಾರಿ ರುದ್ರೇಶ್‌ ಮಾತನಾಡಿ, ನ್ಯಾಯ ಸಮ್ಮತ ಚುನಾವಣೆ ನಡೆಸುವ ಸಲುವಾಗಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಿವಿಧ ಸೂಚನೆ ನೀಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾ ವಹಿಸಬೇಕು. ಅಕಸ್ಮಾತ್‌ ಉಲ್ಲಂಘನೆಯಾದದ್ದು ಕಂಡುಬಂದರೆ ತಕ್ಷ ಣ ಕ್ರಮ ಕೈಗೊಳ್ಳಬೇಕು. ವಿವಿಧ ರಾಜಕೀಯ ಪಕ್ಷ ಗಳ ಚುನಾವಣೆ ಕಚೇರಿಗಳ ಸ್ಥಾಪನೆಗೆ ಅನುಮತಿ, ವಾಹನಗಳಿಗೆ ಅನುಮತಿ ನೀಡುವುದು ಸೇರಿದಂತೆ ವಿವಿಧ ಕಾರ್ಯಗಳನ್ನು ಜಾಗರೂಕರಾಗಿ ಮಾಡಬೇಕು. ರಾಜಕೀಯ ಪಕ್ಷ ಗಳ ಸಭೆಗಳತ್ತ ಲಕ್ಷ ್ಯ ವಹಿಸಬೇಕು. ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜನೆಗೊಂಡ ಸಿಬ್ಬಂದಿ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಅಕ್ರಮ ಹಣ ಅಥವಾ ಆಮಿಷಕ್ಕಾಗಿ ವಸ್ತುಗಳನ್ನು ಕೊಂಡೊಯ್ಯುತ್ತಿರುವುದು ಕಂಡುಬಂದರೆ ತಕ್ಷ ಣ ದೂರು ದಾಖಲಿಸಬೇಕು ಎಂದರು.

ಪಟ್ಟಣ ವ್ಯಾಪ್ತಿಯಲ್ಲಿ ಎರಡು ವಿಶೇಷ ಮತಗಟ್ಟೆಗಳನ್ನು 'ಸಖಿ' ಎಂಬ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿದೆ. ತಾಲೂಕಿನ ಉಮ್ಮಚಗಿ ಅಥವಾ ಬಿಳಕಿಯಲ್ಲಿ ಬುಡಕಟ್ಟು ಜನರಿಗಾಗಿ ಟ್ರೈಬಲ್‌ ಮತ ಕೇಂದ್ರವೊಂದನ್ನು ತೆರೆಯಲು ಆಲೋಚಿಸಲಾಗಿದೆ ಎಂದರು. ಚುನಾವಣಾ ಕರ್ತವ್ಯಕ್ಕೆ ತೆರಳುವ ವಾಹನಗಳ ಜಿಪಿಎಸ್‌ ಕಾಲಕಾಲಕ್ಕೆ ಅಪ್‌ಲೋಡ್‌ ಮಾಡಬೇಕು ಎಂದರು. ಕೆಲವು ಮತಗಟ್ಟೆಗಳನ್ನು ಹೊಂದಿರುವ ಶಾಲೆಗಳ ಕೋಣೆಗಳು ಅಥವಾ ಛಾವಣಿ ಹಾಳಾಗಿದ್ದರೆ ಕೂಡಲೇ ರಿಪೇರಿ ಮಾಡಬೇಕು. ಮತಗಟ್ಟೆಗಳಲ್ಲಿ ಸರಿಯಾದ ನಾಮಫಲಕ, ಭೂತ್‌ ನಂಬರ್‌ ಹಾಗೂ ಗೆಜೆಟ್ಟಿನಲ್ಲಿ ಉಲ್ಲೇಖಿಸಲಾದ ವಿವರಗಳನ್ನು ಹಾಕಬೇಕು ಎಂದು ಕ್ಷೇತ್ರಶಿಕ್ಷ ಣಾಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಈ ಕೆಲಸಕ್ಕೆ 1.20ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಅವಶ್ಯಕತೆ ಇರುವ ಮತಗಟ್ಟೆ ಕೊಠಡಿಗಳನ್ನು ರಿಪೇರಿ ಮಾಡಲಾಗುತ್ತಿದೆ ಎಂದು ಬಿಇಓ ಎನ್‌.ಆರ್‌.ಹೆಗಡೆ ಹೇಳಿದರು.

ತಹಸೀಲ್ದಾರ್‌ ಶಂಕರ್‌ ಜಿ.ಎಸ್‌.ಮಾತನಾಡಿ, ಸಾರ್ವಜನಿಕರನ್ನು ಮತದಾನ ಮಾಡಲು ಪ್ರೇರೇಪಿಸುವ ಜತೆ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳೂ ಕಡ್ಡಾಯವಾಗಿ ಮತದಾನ ಮಾಡಬೇಕು. ಎಲ್ಲ ಕಚೇರಿಗಳ ನೌಕರರೂ ಮತದಾನ ಮಾಡಬೇಕು ಎಂದರು. ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವ ಅಧಿಕಾರಿಗಳು ಓಟಿಂಗ್‌ ಮಶೀನಿನ ವಿ.ವಿ.ಫ್ಯಾಟ್‌ ಗಳನ್ನು ಬಿಸಿಲಿನಲ್ಲಿ ಅಥವಾ ಬೆಳಕಿನಲ್ಲಿ ಇಡದೇ ನೆರಳಿರುವ ಪ್ರದೇಶದಲ್ಲಿ ಇಡಬೇಕು ಎಂದು ಸೂಚಿಸಿದರು.

ಈ ಸಭೆಯಲ್ಲಿ ಮುಂಡಗೋಡ ತಹಸೀಲ್ದಾರ್‌ ಶಂಕರ ಗಾವಡಿ, ಯಲ್ಲಾಪುರ ತಾಪಂ ಇಓ ಇಟ್ಟಲ್‌ ನಾಟೇಕರ, ಅಧಿಕಾರಿಗಳಾದ ಪ್ರಶಾಂತ್‌ ಪಿಕೆಎಮ್‌, ಕೃಷ್ಣಕಾಂತ್‌ ನಾಯಕ, ಸಂಗನಬಸವ, ಬಸವರಾಜಪ್ಪ ಮುಂತಾದವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ