ಆ್ಯಪ್ನಗರ

ಹಾಲು ಒಕ್ಕೂಟಕ್ಕೆ ಕೆಶಿನ್ಮನೆ ಅವಿರೋಧ ಆಯ್ಕೆ

ಶಿರಸಿ : ಉತ್ತರ ಕನ್ನಡ ಜಿಲ್ಲೆಯೂ ಒಳಗೊಂಡ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಸಹಕಾರಿ, ಯುವ ಮುಂದಾಳು ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

Vijaya Karnataka 22 Apr 2019, 5:00 am
ಶಿರಸಿ : ಉತ್ತರ ಕನ್ನಡ ಜಿಲ್ಲೆಯೂ ಒಳಗೊಂಡ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಸಹಕಾರಿ, ಯುವ ಮುಂದಾಳು ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
Vijaya Karnataka Web keshinmane unanimous choice for milk union
ಹಾಲು ಒಕ್ಕೂಟಕ್ಕೆ ಕೆಶಿನ್ಮನೆ ಅವಿರೋಧ ಆಯ್ಕೆ


ಒಕ್ಕೂಟಕ್ಕೆ ಮಂದಿನ ಐದು ವರ್ಷಗಳ ಅವಧಿಗೆ ನಿರ್ದೇಶಕರ ಆಯ್ಕೆ ಸಂಬಂಧಿಸಿ ಏ.28ರಂದು ಚುನಾವಣೆ ನಡೆಯಲಿತ್ತು. ನಾಮಪತ್ರ ಸಲ್ಲಿಕೆಗೆ ಏ.21 ಕಡೇ ದಿನವಾಗಿತ್ತು. 22ರಂದು ನಾಮಪತ್ರ ಪರಿಶೀಲನೆ ನಡೆದಿದ್ದು, ರವಿವಾರ ಶಿರಸಿ ಕ್ಷೇತ್ರದಿಂದ ಏಕಮೇವ ನಾಮಪತ್ರ ಸಲ್ಲಿಸಿದ್ದ ಕೆಶಿನ್ಮನೆ ಅವರ ಅವಿರೋಧ ಆಯ್ಕೆ ಪ್ರಕಟಿಸಲಾಗಿದೆ.

ನಾಲ್ಕು ಜಿಲ್ಲೆ ಒಳಗೊಂಡ ಧಾರವಾಡ ಹಾಲು ಒಕ್ಕೂಟಕ್ಕೆ 12 ಮಂದಿ ನಿರ್ದೇಶಕರಿರಲಿದ್ದು, ಉತ್ತರ ಕನ್ನಡಕ್ಕೆ ಮೂವರು ನಿರ್ದೇಶಕರ ಸ್ಥಾನದ ಅವಕಾಶವಿದೆ. ಅಗತ್ಯ ಉಳ್ಳವರಿಗೆ ಸೋಮವಾರ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಅಗತ್ಯ ಇದ್ದಲ್ಲಿ ಸಿದ್ದಾಪುರ ಹಾಗೂ ಯಲ್ಲಾಪುರ ಕ್ಷೇತ್ರ ಸೇರಿದಂತೆ ಉಳಿದ ಕ್ಷೇತ್ರಕ್ಕೆ ಏ. 28ರಂದು ಚುನಾವಣೆ ನಡೆಯಲಿದೆ.

ಕಳೆದ ಅವಧಿಯಲ್ಲಿ ಶಿರಸಿ ಹೈನುಗಾರಿಕೆ ಕ್ಷೇತ್ರದಲ್ಲಿ ಅನೇಕ ಹೊಸ ಮಾದರಿಯ ಕಾರ್ಯಯೋಜನೆ ಹಮ್ಮಿಕೊಂಡಿದ್ದ ಕೆಶಿನ್ಮನೆ, ತಾಲೂಕಿನಲ್ಲಿದ್ದ 52 ಹಾಲು ಸಂಘಗಳಿಂದ 87 ಸಂಘಗಳಿಗೆ ಏರಿಸಿ 10 ಸಾವಿರ ಲೀ. ಹಾಲಿನಿಂದ 18 ಸಾವಿರ ಲೀ. ಹಾಲನ್ನು ಪ್ರತಿನಿತ್ಯ ಸಂಗ್ರಹವಾಗುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು. ಹಾಲಿನ ಶೇಖರಣಾ ವ್ಯವಸ್ಥೆಯಲ್ಲಿ ನೂತನ ತಂತ್ರಜ್ಞಾನ, ಹಾಲು ಶೇಖರಣಾ ಕೇಂದ್ರದಲ್ಲಿ ಗುಣ ಮಟ್ಟದ ಪರೀಕ್ಷೆಯಲ್ಲಿ ವೈಜ್ಞಾನಿಕ ಪದ್ಧತಿ, ಹಾಲು ಪರೀಕ್ಷ ಕರ, ಸಂಘದ ಕಾರ್ಯದರ್ಶಿಗಳ ನೋವಿಗೆ ಸ್ಪಂದನೆ ಸೇರಿದಂತೆ ಅನೇಕ ಪ್ರಮುಖ ಸಂಗತಿಗಳಿಗೆ ಬೆಳಕು ಚೆಲ್ಲಿ ಪರಿಹಾರ ಒದಗಿಸಿದ್ದರು ಎಂಬುದು ಉಲ್ಲೇಖನೀಯ.

ಉತ್ತರ ಕನ್ನಡಕ್ಕೆ ಪ್ರತ್ಯೇಕ ಹಾಲು ಒಕ್ಕೂಟ, ಹಾಲಿನ ಗುಣಮಟ್ಟದ ಸೂತ್ರದಲ್ಲಿ (ಎಸ್‌ಎನ್‌ಎಫ್‌) ಬದಲಾವಣೆ, ಹಾಲು ಸಂಘಗಳ ಕಾರ್ಯದರ್ಶಿಗಳಿಗೆ ಕನಿಷ್ಠ ಗೌರವಧನ ಸೌಲಭ್ಯಗಳನ್ನೂ ಒದಗಿಸುವ ಜವಾಬ್ದಾರಿ ನೊಗ ಕೂಡ ಕೆಶಿನ್ಮನೆ ಇನ್ನು ಮುಂದೆ ಹೊರಬೇಕಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ