ಆ್ಯಪ್ನಗರ

ಕಿಸಾನ್‌ ಸಮ್ಮಾನ್‌: ಇನ್ನೂ ಶೇ.50 ಬಾಕಿ

ಶಿರಸಿ : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಘಟ್ಟದ ಮೇಲಿನ ತಾಲೂಕುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ರೈತರ ನೋಂದಣಿ ಆಗಬೇಕಿದೆ. ಬಹುತೇಕ ರೈತರು ಈ ಯೋಜನೆ ವ್ಯಾಪ್ತಿಯಲ್ಲಿ ಬರುವುದರಿಂದ ನಿಗದಿತ ದಿನಾಂಕದೊಳಗೆ ನೋಂದಣಿ ಮಾಡಿಕೊಳ್ಳಬೇಕಾದ ಸವಾಲಿದೆ.

Vijaya Karnataka 23 Jun 2019, 5:00 am
ಶಿರಸಿ : ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಕಿಸಾನ್‌ ಸಮ್ಮಾನ್‌ ಯೋಜನೆಗೆ ಘಟ್ಟದ ಮೇಲಿನ ತಾಲೂಕುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ರೈತರ ನೋಂದಣಿ ಆಗಬೇಕಿದೆ. ಬಹುತೇಕ ರೈತರು ಈ ಯೋಜನೆ ವ್ಯಾಪ್ತಿಯಲ್ಲಿ ಬರುವುದರಿಂದ ನಿಗದಿತ ದಿನಾಂಕದೊಳಗೆ ನೋಂದಣಿ ಮಾಡಿಕೊಳ್ಳಬೇಕಾದ ಸವಾಲಿದೆ.
Vijaya Karnataka Web kisan samman still 50 outstanding
ಕಿಸಾನ್‌ ಸಮ್ಮಾನ್‌: ಇನ್ನೂ ಶೇ.50 ಬಾಕಿ


ಕಿಸಾನ್‌ ಸಮ್ಮಾನ್‌ ಕಳೆದ ಲೋಕಸಭಾ ಚುನಾವಣೆಯ ಮೊದಲೇ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡುವ ಯೋಜನೆಯಿದು. ಈ ಯೋಜನೆಯ ಆರಂಭದಲ್ಲಿ ಐದು ಎಕರೆ ಕೃಷಿ ಭೂಮಿ ಹೊಂದಿದ ರೈತರು ಒಳಪಡುತ್ತಿದ್ದರು. ಆ ಸಂದರ್ಭದಲ್ಲಿ ಒಂದಷ್ಟು ರೈತರು ಯೋಜನೆಯ ಸೌಲಭ್ಯ ಪಡೆಯುವುದಕ್ಕೆ ನೋಂದಣಿ ಮಾಡಿಕೊಂಡಿದ್ದರು. ಆದರೆ ಚುನಾವಣೆ ವೇಳೆಯಲ್ಲಿ ನೀತಿ ಸಂಹಿತೆ ಕಾರಣದಿಂದ ನೋಂದಣಿ ಬಂದ್‌ ಆಗಿತ್ತು.

ಮೂರು ಕಂತುಗಳಲ್ಲಿ ಹಣ ನೀಡುವ ಈ ಯೋಜನೆಯಲ್ಲಿ ಒಂದಷ್ಟು ರೈತರಿಗೆ ಮೊದಲ ಕಂತಿನ ಹಣ ಜಮಾ ಸಹ ಆಗಿತ್ತು. ಇದೀಗ ಈ ಯೋಜನೆಯನ್ನು ಬಹುತೇಕ ಎಲ್ಲ ರೈತರಿಗೆ ವಿಸ್ತರಿಸಿ ಮುಂದುವರೆಸಲಾಗಿದೆ. ಇದರಿಂದ ನೋಂದಣಿ ಮಾಡಿಕೊಳ್ಳಬೇಕಾದ ರೈತರ ಸಂಖ್ಯೆ ಅರ್ಧಕ್ಕಿಂತ ಹೆಚ್ಚಿದೆ. ನೋಂದಣಿಗೆ ಜೂನ್‌ 30ನ್ನು ನಿಗದಿ ಪಡಿಸಿದ್ದು, ಜಿಲ್ಲಾಡಳಿತ ಈ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕಾರ್ಯವನ್ನು ವ್ಯಾಪಕವಾಗಿ ಕೈಗೊಂಡಿದೆ. ಇನ್ನೆಂಟು ದಿನಗಳ ಅವಧಿಯಲ್ಲಿ ಘಟ್ಟದ ಮೇಲಿನ ತಾಲೂಕುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನ ರೈತರ ನೋಂದಣಿ ಆಗಬೇಕಿದೆ.

ವಿವಿಧೆಡೆ ಅರ್ಜಿ ಸಲ್ಲಿಕೆ : ಹಿಂದೆ ಐದು ಎಕರೆ ಒಳಗಿನ ರೈತರಿಗೆ ನೋಂದಣಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಮಾತ್ರ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಆಗ ರೈತರ ಸರದಿ ಸಾಲು ಕಂಡು ಬರುತ್ತಿತ್ತು. ಇದೀಗ ರೈತ ಸಂಪರ್ಕ ಕೇಂದ್ರವಲ್ಲದೇ ಗ್ರಾಮ ಪಂಚಾಯಿತಿ, ಗ್ರಾಮ ಲೆಕ್ಕಾಧಿಕಾರಿಗಳಲ್ಲಿ, ಕೃಷಿ ಇಲಾಖೆಗಳಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಪಹಣಿ ಪತ್ರಿಕೆ, ಆಧಾರ್‌ ಕಾರ್ಡ್‌ ಪ್ರತಿ, ಫೋಟೊ, ಬ್ಯಾಂಕ್‌ ಪಾಸ್‌ಬುಕ್‌ಗಳ ಪ್ರತಿಯನ್ನು ಸಲ್ಲಿಸಬೇಕು. ರೈತರು ಮುದ್ರಿತ ಅರ್ಜಿಯನ್ನು ಭರಣ ಮಾಡಿ ಸಲ್ಲಿಸಿದರೆ ಆಯಾ ಕೇಂದ್ರದಲ್ಲಿ ಕಂಪ್ಯೂಟರ್‌ ಬಳಸಿ ದಾಖಲಿಸುತ್ತಾರೆ. ಇದಕ್ಕೆಂದೇ ಪ್ರತ್ಯೇಕ ಪಿಎಂ ಕಿಸಾನ್‌ ಎಂಬ ವೆಬ್‌ ಸೈಟ್‌ ಕೂಡ ಕಾರ್ಯ ಮಾಡುತ್ತಿದೆ. ದೊಡ್ಡ ಸಂಖ್ಯೆಯಲ್ಲಿ ರೈತರ ನೋಂದಣಿಯಾಗಬೇಕಿದೆ. ಆದರೆ ವಿವಿಧೆಡೆ ನೋಂದಣಿಗೆ ಅವಕಾಶ ಇರುವುದರಿಂದ ಅಷ್ಟೊಂದು ಒತ್ತಡ ಆಗಲಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಶಿರಸಿಯಲ್ಲೇ ಜಾಸ್ತಿ : ಅಂಕಿ ಸಂಖ್ಯೆ ಅವಲೋಕಿಸಿದರೆ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ನೋಂದಣಿ ಕಾರ್ಯ ಶಿರಸಿ ತಾಲೂಕಿನಲ್ಲಿ ಹೆಚ್ಚಾಗಿದೆ. ಶಿರಸಿಯಲ್ಲಿ 17,000 ರೈತರಿದ್ದು, ಈ ಪೈಕಿ 8737 ಮಂದಿ ನೋಂದಣಿ ಮಾಡಿದ್ದಾರೆ. ಸಿದ್ದಾಪುರದಲ್ಲಿ 17,971ರಲ್ಲಿ 6058 ರೈತರು, ಯಲ್ಲಾಪುರದಲ್ಲಿ 8787ರಲ್ಲಿ 3421 ಮಂದಿ, ಮುಂಡಗೋಡದಲ್ಲಿ 11,073ರಲ್ಲಿ 6201, ಹಳಿಯಾಳದಲ್ಲಿ 11, 550ರಲ್ಲಿ 4432, ಜೋಯಿಡಾದಲ್ಲಿ 5,596 ರೈತಲ್ಲಿ 1908 ರೈತರ ನೋಂದಣಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಲ್ಲೆಲ್ಲಿ ಎಷ್ಟೆಷ್ಟು ನೋಂದಣಿ

ತಾಲೂಕು ಸಲ್ಲಿಸಿದ ಅರ್ಜಿಗಳು

ಶಿರಸಿ 8737

ಸಿದ್ದಾಪುರ 6058

ಯಲ್ಲಾಪುರ 8787

ಮುಂಡಗೋಡ 6201

ಹಳಿಯಾಳ 4432

ಜೋಯಿಡಾ 1908

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ