ಆ್ಯಪ್ನಗರ

ಬಾಂಡಿಸಿಟ್ಟಾ ರಸ್ತೆಯಲ್ಲಿ ಮೊಣಕಾಲುದ್ದ ನೀರು

ಕಾರವಾರ : ಕಳೆದ ಐದು ದಿನಗಳಿಂದ ಗ್ರಾಮೀಣ ಭಾಗದ ಜನರನ್ನು ಬೀದಿಪಾಲು ಮಾಡಿದ ಜಲ ಪ್ರವಾಹ ಶುಕ್ರವಾರ ನಗರ ಪ್ರದೇಶದಲ್ಲಿ ಆವರಿಸಿಕೊಂಡಿದೆ. ನಗರದ ಬಾಂಡಿಸಿಟ್ಟಾ ರಸ್ತೆಯಲ್ಲಿ ಮೊಣಕಾಲಿನಷ್ಟು ನೀರು ತುಂಬಿಕೊಂಡಿದ್ದು, ಜನರನ್ನು ಆತಂಕಕ್ಕೆ ಎಡೆ ಮಾಡಿದೆ.

Vijaya Karnataka 10 Aug 2019, 5:00 am
ಕಾರವಾರ : ಕಳೆದ ಐದು ದಿನಗಳಿಂದ ಗ್ರಾಮೀಣ ಭಾಗದ ಜನರನ್ನು ಬೀದಿಪಾಲು ಮಾಡಿದ ಜಲ ಪ್ರವಾಹ ಶುಕ್ರವಾರ ನಗರ ಪ್ರದೇಶದಲ್ಲಿ ಆವರಿಸಿಕೊಂಡಿದೆ. ನಗರದ ಬಾಂಡಿಸಿಟ್ಟಾ ರಸ್ತೆಯಲ್ಲಿ ಮೊಣಕಾಲಿನಷ್ಟು ನೀರು ತುಂಬಿಕೊಂಡಿದ್ದು, ಜನರನ್ನು ಆತಂಕಕ್ಕೆ ಎಡೆ ಮಾಡಿದೆ.
Vijaya Karnataka Web kneeling water on bandisitta road
ಬಾಂಡಿಸಿಟ್ಟಾ ರಸ್ತೆಯಲ್ಲಿ ಮೊಣಕಾಲುದ್ದ ನೀರು


ಕದ್ರಾ ಜಲಾಶಯದಿಂದ ಸತತ ಹೊರ ಬಿಡುತ್ತಿರುವ ನೀರಿನಿಂದಾಗಿ ಕಾಳಿ ನದಿ ಉಕ್ಕಿ ಹರಿದು ತೀರದ ಪ್ರದೇಶ ಜಲಾವೃತಗೊಂಡಿವೆ. ಕಳೆದ ಐದು ದಿನಗಳಿಂದ ತಾಲೂಕಿನ ಗ್ರಾಮೀಣ ಪ್ರದೇಶದ ಜನರು ನೆರೆಯಿಂದಾಗಿ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ನಗರಭಾಗದಲ್ಲಿ ಪ್ರವಾಹದ ಯಾವುದೇ ಪರಿಣಾಮ ಬೀರಲಿಲ್ಲ ಎಂದು ನಿಟ್ಟುಸಿರು ಬಿಟ್ಟ ನಗರದ ಜನರಿಗೆ ದುಗುಡ ಶುರುವಾಗಿದೆ.

ನಗರದ ತಗ್ಗು ಪ್ರದೇಶವಾಗಿರುವ ಬಾಂಡಿಸಿಟ್ಟಾದಲ್ಲಿ ನೀರು ಆವರಿಸುತ್ತಿದ್ದು, ಶುಕ್ರವಾರ ಸಂಜೆಗೆ ಬಾಂಡಿಸಿಟ್ಟಾ ರಸ್ತೆಯಿಂದ ದ್ವಿಚಕ್ರ ಮತ್ತು ಲಘು ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಯಿತು. ಪೊಲೀಸರು ಸ್ಥಕ್ಕೆ ಆಗಮಿಸಿ ಈ ರಸ್ತೆಯಿಂದ ಸಂಚಾರವನ್ನು ಸ್ಥಗಿತಗೊಳಿಸಿದರಲ್ಲದೇ ರಸ್ತೆ ಪಕ್ಕದ ಅಂಗಡಿಗಳಗೆ ಆದಷ್ಟು ಬೇಗನೆ ಅಂಗಡಿಯ ವಸ್ತುಗಳನ್ನು ನೆಲದಿಂದ ಸ್ವಲ್ಪ ಎತ್ತರದಲ್ಲಿಡುವಂತೆ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ