ಆ್ಯಪ್ನಗರ

ಕೂಡು ರಸ್ತೆ ಸಂಚಾರ ಸಂಕಟ

ಶಿರಸಿ : ತಾಲೂಕಿನ ಬನವಾಸಿ-ಭಾಶಿ ಮಾರ್ಗದಿಂದ ಒಳ ರಸ್ತೆಗಳಿಗೆ ಸಾಗುವಾಗ ಫಜೀತಿ ಪಡುವ ಸಂದರ್ಭವಿದೆ. ಕೆಲವು ಕಡೆಗಳಲ್ಲಿ ಮುಖ್ಯ ರಸ್ತೆಯಿಂದ ಒಳ ರಸ್ತೆಗಳಿಗೆ ತೆರಳುವುದಕ್ಕೆ ಸರಿಯಾದ ವ್ಯವಸ್ಥೆಯಿಲ್ಲದೇ ಸಂಚಾರ ಸಂಕಟ ಪಡುವಂತಾಗಿದೆ.

Vijaya Karnataka 9 Dec 2018, 5:00 am
ಶಿರಸಿ : ತಾಲೂಕಿನ ಬನವಾಸಿ-ಭಾಶಿ ಮಾರ್ಗದಿಂದ ಒಳ ರಸ್ತೆಗಳಿಗೆ ಸಾಗುವಾಗ ಫಜೀತಿ ಪಡುವ ಸಂದರ್ಭವಿದೆ. ಕೆಲವು ಕಡೆಗಳಲ್ಲಿ ಮುಖ್ಯ ರಸ್ತೆಯಿಂದ ಒಳ ರಸ್ತೆಗಳಿಗೆ ತೆರಳುವುದಕ್ಕೆ ಸರಿಯಾದ ವ್ಯವಸ್ಥೆಯಿಲ್ಲದೇ ಸಂಚಾರ ಸಂಕಟ ಪಡುವಂತಾಗಿದೆ.
Vijaya Karnataka Web SRS-8SIRSI14B


ಬನವಾಸಿ-ಭಾಶಿ ರಸ್ತೆಯ ಸುಧಾರಣೆಯನ್ನು ಲೋಕೋಪಯೋಗಿ ಇಲಾಖೆ ಮಾಡುತ್ತಿದೆ. ಆದರೆ ಈ ಮಾಗದಿಂದ ಜನಾತಾ ಕಾಲೊನಿಗೆ, ಚರ್ಚ್‌ ರಸ್ತೆ ಮೂಲಕ ಶಿರಸಿ-ದಾಸನಕೊಪ್ಪ ತೆರಳುವ ಕೂಡು ರಸ್ತೆಗಳಲ್ಲಿ ಸರಿಯಾದ ಸಿ.ಡಿ. ವ್ಯವಸ್ಥೆ ಇಲ್ಲದೇ ಒಳ ಭಾಗದ ಊರುಗಳಿಗೆ ತೆರಳುವವರು ತೊಂದರೆ ಎದುರಿಸುವಂತಾಗಿದೆ.

ಹೀಗೆ ಮುಖ್ಯ ರಸ್ತೆಯಿಂದ ಕೂಡು ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಜಾಗದಲ್ಲಿ ಚಪ್ಪಡಿ ಕಲ್ಲುಗಳನ್ನು ಜೋಡಿಸಿ ಲಿಂಕ್‌ ಮಾಡಲಾಗಿದೆ. ಆದರೆ ಇದು ಅಸಮರ್ಪಕವಾಗಿದ್ದು ಯಾವಾಗ ಕಿತ್ತು ಬೀಳುತ್ತವೆಯೋ ಎಂಬ ಆತಂಕದಲ್ಲಿಯೇ ಓಡಾಡಬೇಕಾದ ಸ್ಥಿತಿಯಿದೆ. ಶಾಲಾ ಮಕ್ಕಳು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜನ, ವಾಹನ ಸಾಗುವ ರಸ್ತೆ ಜೋಡಿಸಲು ಸಿ.ಡಿ ಅಥವಾ ಪೈಪ್‌ ಹಾಕುವಂತೆ ಸ್ಥಳೀಯರು ಆಗ್ರಹಿಸುತ್ತಾ ಬಂದಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಜನಪ್ರತಿನಿಧಿಗಳ ಗಮನಸೆಳೆಯುತ್ತಿದ್ದೇವೆ. ಇದೀಗ ಮುಖ್ಯ ರಸ್ತೆಯನ್ನು ಲೋಕೋಪಯೋಗಿ ಇಲಾಖೆಯವರು ಸುಧಾರಣೆ ಮಾಡುತ್ತಿದ್ದು ಇದೇ ಸಂದರ್ಭದಲ್ಲಿ ಸಿ.ಡಿ. ಅಥವಾ ಪೈಪ್‌ ಹಾಕಿಕೊಡುವ ಕಾರ್ಯ ಮಾಡಬೇಕು ಎಂದು ಸ್ಥಳೀಯ ಎಲ್ಲೋಜಿ ಬಂಡೇರ ಅವರು ಆಗ್ರಹಿಸಿದ್ದಾರೆ.

ಹೀಗೆ ಅವ್ಯವಸ್ಥೆಯಿಂದ ಕೂಡಿರುವ ಕೂಡು ರಸ್ತೆಗಳನ್ನು ಸಮರ್ಪಕಗೊಳಿಸದೇ ಇದ್ದರೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಒಳ ರಸ್ತೆಯಿಂದ ಮುಖ್ಯ ರಸ್ತೆಗೆ ಸಾಗುವ ಜಾಗ ತೀರಾ ತಗ್ಗು ಸ್ಥಳವಾಗುವುದರಿಂದ ಸ್ವಲ್ಪ ಯಾಮಾರಿದರೂ ಅಪಾಯ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಲಕ್ಷ ್ಯ ವಹಿಸಿ ಸಮಸ್ಯೆಗೆ ಪರಿಹಾರ ದೊರಕಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ