ಆ್ಯಪ್ನಗರ

ರಂಜಿಸಿದ ಕೃಷ್ಣಾರ್ಜುನ ತಾಳಮದ್ದಲೆ

ಹೊನ್ನಾವರ : ತಾಲೂಕಿನ ಹಡಿನಬಾಳದಲ್ಲಿ ಹಿರಿಯ ಯಕ್ಷ ಗಾನ ಕಲಾವಿದ ದಿ. ಸತ್ಯ ಹೆಗಡೆ ಸತ್ಯಸ್ಮರಣೆ ಅಂಗವಾಗಿ ಕೃಷ್ಣಾರ್ಜುನ ತಾಳಮದ್ದಲೆ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು. ತಾಳಮದ್ದಳೆಯಲ್ಲಿ ಅರ್ಜುನನಾಗಿ ನೀಲ್ಕೋಡು ವಿಷ್ಣು ಭಟ್‌ ಮತ್ತು ಶ್ರೀಪಾದ ಹೆಗಡೆ, ಸುಭದ್ರೆಯಾಗಿ ಮುಡಾರೆ ಎಸ್‌.ಎಂ.ಹೆಗಡೆ, ಕೃಷ್ಣನಾಗಿ ಡಾ.ಜಿ.ಕೆ.ಹೆಗಡೆ, ನಾರದನಾಗಿ ಗಪ್ಪು ಭಟ್‌, ಭೀಮನಾಗಿ ಶ್ರೀಪಾದ ಭಟ್‌, ರುಕ್ಮಿಣಯಾಗಿ ಗೋವಿಂದ ಭಟ್‌, ಅಭಿಮನ್ಯುವಾಗಿ ಶ್ರೀಶ ಹೆಗಡೆ ಪಾತ್ರದ ಅರ್ಥಧಾರಿಗಳಾಗಿ ಪುರಾಣ ಕಥೆಯ ಭಾವಲೋಕವನ್ನು ಸೃಷ್ಠಿಸಿದರು.

Vijaya Karnataka 5 Mar 2019, 5:00 am
ಹೊನ್ನಾವರ : ತಾಲೂಕಿನ ಹಡಿನಬಾಳದಲ್ಲಿ ಹಿರಿಯ ಯಕ್ಷ ಗಾನ ಕಲಾವಿದ ದಿ. ಸತ್ಯ ಹೆಗಡೆ ಸತ್ಯಸ್ಮರಣೆ ಅಂಗವಾಗಿ ಕೃಷ್ಣಾರ್ಜುನ ತಾಳಮದ್ದಲೆ ಮತ್ತು ಸಂಗೀತ ಕಾರ್ಯಕ್ರಮ ನಡೆಯಿತು. ತಾಳಮದ್ದಳೆಯಲ್ಲಿ ಅರ್ಜುನನಾಗಿ ನೀಲ್ಕೋಡು ವಿಷ್ಣು ಭಟ್‌ ಮತ್ತು ಶ್ರೀಪಾದ ಹೆಗಡೆ, ಸುಭದ್ರೆಯಾಗಿ ಮುಡಾರೆ ಎಸ್‌.ಎಂ.ಹೆಗಡೆ, ಕೃಷ್ಣನಾಗಿ ಡಾ.ಜಿ.ಕೆ.ಹೆಗಡೆ, ನಾರದನಾಗಿ ಗಪ್ಪು ಭಟ್‌, ಭೀಮನಾಗಿ ಶ್ರೀಪಾದ ಭಟ್‌, ರುಕ್ಮಿಣಯಾಗಿ ಗೋವಿಂದ ಭಟ್‌, ಅಭಿಮನ್ಯುವಾಗಿ ಶ್ರೀಶ ಹೆಗಡೆ ಪಾತ್ರದ ಅರ್ಥಧಾರಿಗಳಾಗಿ ಪುರಾಣ ಕಥೆಯ ಭಾವಲೋಕವನ್ನು ಸೃಷ್ಠಿಸಿದರು.
Vijaya Karnataka Web KWR-4 HNR 3
ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ ಯಕ್ಷ ಗಾನ ಕಲಾವಿದ ಸತ್ಯ ಹೆಗಡೆ ಸಂಸ್ಮರಣೆ ಅಂಗವಾಗಿ ತಾಳಮದ್ದಳೆ ನಡೆಯಿತು.


ಹಿಮ್ಮೇಳದಲ್ಲಿ ಕಪ್ಪೆಕೆರೆ ಸುಬ್ರಾಯ ಭಾಗವತ, ಬಾಳೆಗದ್ದೆ ಶ್ರೀಪಾದ ಹೆಗಡೆ, ಕಂಚಿಮನೆ ಮಂಜುನಾಥ ಹೆಗಡೆ ಪಾಲ್ಗೊಂಡಿದ್ದರು. ನಂತರ ನಡೆದ ಸಂಗೀತ ಸಂಜೆಯಲ್ಲಿ ಮೈಸೂರಿನ ಗುರುದತ್‌ ಎ.ಕೆ. ಅವರ ಗಾಯನ ಶ್ರೋತೃಗಳ ಮೆಚ್ಚುಗೆಗೆ ಪಾತ್ರವಾಯಿತು. ಎರಡುವರೆ ತಾಸುಗಳ ಸಂಗೀತದಲ್ಲಿ ರಾಗ ಯಮನ್‌, ದೇಸ್‌ ಹಾಗೂ ಅಭಂಗಗಳನ್ನು ಹಾಡಿದರು. ತಬಲಾದಲ್ಲಿ ಕಪ್ಪೆಕೆರೆ ವಿದ್ವಾನ್‌ ಎನ್‌.ಜಿ.ಹೆಗಡೆ ಹಾಗೂ ಹಾರ್ಮೋನಿಯಂನಲ್ಲಿ ಹರಿಶ್ಚಂದ್ರ ನಾಯ್ಕ ಸಾಥ್‌ ನೀಡಿದರು.

ಗೌರೀಶ ಹೆಗಡೆ ಸ್ವಾಗತಿಸಿದರು. ಸುಬ್ರಹ್ಮಣ್ಯ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಡಾ.ಜಿ.ಎಸ್‌.ಹೆಗಡೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ