ಆ್ಯಪ್ನಗರ

ಉರ್ದು ನಾಮಫಲಕ ತೆರವು: ಭಟ್ಕಳ ಭಾಷಾ ವಿವಾದಕ್ಕೆ ತೆರೆ ಎಳೆದ ಜಿಲ್ಲಾಧಿಕಾರಿ

ಭಟ್ಕಳದಲ್ಲಿ ಕೆಲ ದಿನ ದಿನಗಳ ಹಿಂದೆ ಪುರಸಭೆ ಕಚೇರಿಯ ನಾಮಫಲಕವನ್ನ ಕನ್ನಡ, ಇಂಗ್ಲಿಷ್ ಹಾಗೂ ಉರ್ದುವಿನಲ್ಲಿ ಅಳವಡಿಸಲು ಮುಂದಾಗಲಾಗಿತ್ತು. ಇದಕ್ಕೆ ಕನ್ನಡ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.

Lipi 30 Jun 2022, 9:49 pm
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಪುರಸಭೆಗೆ ಉರ್ದು ನಾಮಫಲಕ ಅಳವಡಿಸಿದ್ದಕ್ಕೆ ಸಂಬAಧಿಸಿದAತೆ ಕೆಲ ದಿನಗಳಿಂದ ಎದ್ದಿದ್ದ ಭಾಷಾ ವಿವಾದಕ್ಕೆ ಅಂತೂ ಜಿಲ್ಲಾಧಿಕಾರಿಗಳ ಮಧ್ಯಪ್ರವೇಶದಿಂದ ತೆರೆ ಬಿದ್ದಿದೆ. ಕನ್ನಡ- ಇಂಗ್ಲಿಷ್ ಬಿಟ್ಟು ಬೇರಾವ ಭಾಷೆಗಳನ್ನೂ ಸರಕಾರಿ ಕಚೇರಿಗಳ ಮೇಲೆ ಬಳಸದಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚಿಸಿದ್ದಾರೆ.
Vijaya Karnataka Web language problem in bhatkal dc solve the issue
ಉರ್ದು ನಾಮಫಲಕ ತೆರವು: ಭಟ್ಕಳ ಭಾಷಾ ವಿವಾದಕ್ಕೆ ತೆರೆ ಎಳೆದ ಜಿಲ್ಲಾಧಿಕಾರಿ


ಭಟ್ಕಳದಲ್ಲಿ ಕೆಲ ದಿನ ದಿನಗಳ ಹಿಂದೆ ಪುರಸಭೆ ಕಚೇರಿಯ ನಾಮಫಲಕವನ್ನ ಕನ್ನಡ, ಇಂಗ್ಲಿಷ್ ಹಾಗೂ ಉರ್ದುವಿನಲ್ಲಿ ಅಳವಡಿಸಲು ಮುಂದಾಗಲಾಗಿತ್ತು. ಇದನ್ನ ವಿರೋಧಿಸಿ ಭುವನೇಶ್ವರಿ ಕನ್ನಡ ಸಂಘ ಹಾಗೂ ಇತರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪುರಸಭೆಯ ಎದುರು ಸೇರಿ ಪ್ರತಿಭಟಿಸಿ, ಉರ್ದು ಫಲಕವನ್ನ ತೆಗೆಯಲು ಪಟ್ಟು ಹಿಡಿದಿದ್ದರು. ಇದಾದ ಮಾರನೇ ದಿನ ಮುಸ್ಲಿಂ ಸಂಘಟನೆಗಳಿAದ ಪ್ರತಿಭಟಿಸಿ, ಉರ್ದು ಬೋರ್ಡ್ ಇರಲೇಬೇಕೆಂದು ಆಗ್ರಹಿಸಿದ್ದರು.

ಕಾರವಾರದ ವಾರ್ಡ್‌ ಹೆಸರುಗಳು ಇನ್ಮುಂದೆ ಕನ್ನಡದ ಜೊತೆ ಕೊಂಕಣಿಯಲ್ಲೂ ಇರಲಿವೆ! ನಗರಸಭೆಯಲ್ಲಿ ಠರಾವು

ಇದೆಲ್ಲದರ ನಡುವೆ ಜಿಲ್ಲಾಧಿಕಾರಿ ಮುಲ್ಲೆöÊ ಮುಗಿಲನ್ ¨ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಇಂದು ಬೆಳ್ಳಂಬೆಳಿಗ್ಗೆ ಭಟ್ಕಳಕ್ಕೆ ತೆರಳಿ ಸಂಬAಧಪಟ್ಟವರೊAದಿಗೆ ಸಭೆ ನಡೆಸಿದರು. ಸಾಕಷ್ಟು ಚರ್ಚೆ, ಪರ- ವಿರೋಧ ಅಭಿಪ್ರಾಯಗಳನ್ನಆಲಿಸಿದ ಜಿಲ್ಲಾಧಿಕಾರಿ, ಅಂತಿಮವಾಗಿ ಪುರಸಭೆಗೆ ಆದೇಶವೊಂದನ್ನು ನೀಡಿದ್ದಾರೆ. ಕನ್ನಡ- ಇಂಗ್ಲಿಷ್ ಹೊರತುಪಡಿಸಿ ಬೇರಾವ ಭಾಷೆಯ ನಾಮಫಲಕಗಳನ್ನು ಅಳವಡಿಸುವಂತಿಲ್ಲ. ಹಾಗೇನಾದರೂ ಅವಶ್ಯವಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ, ಅಲ್ಲಿಂದ ಅಭಿಪ್ರಾಯ ಪಡೆದು ಅಳವಡಿಸಿ ಎಂಬ ಸೂಚನೆ ನೀಡಿದ್ದು, ಇದಕ್ಕೆ ಸರ್ವರೂ ಸಮ್ಮತಿ ಸೂಚಿಸಿದ್ದಾರೆ.

ಇನ್ನು ಈ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಪುರಸಭೆಗೆ ಅಳವಡಿಸಲಾಗಿದ್ದ ಉರ್ದು ನಾಮಫಲಕವನ್ನ ತೆರವು ಮಾಡಲಾಗಿದೆ. ಸದ್ಯ ಕನ್ನಡ ಹಾಗೂ ಇಂಗ್ಲಿಷ್ ಬರಹಗಳನ್ನ ಮಾತ್ರ ಉಳಿಸಲಾಗಿದೆ. ಬಗ್ಗೆ ಸಭೆಯ ಬಳಿಕ ಪ್ರತಿಕ್ರಿಯೆ ನೀಡಿರುವ ಪುರಸಭೆಯ ಅಧ್ಯಕ್ಷ ಫರ್ವೇಜ್ ಕಾಶಿಂಜಿ, ಜಿಲ್ಲಾಧಿಕಾರಿಯವರ ಆದೇಶಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೇ ಈ ಬಗ್ಗೆ ಇಂದು ಸಂಜೆ ನಡೆಯುವ ತುರ್ತು ಸಾಮಾನ್ಯ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದ್ದಾರೆ.

ಕಾಮಗಾರಿಗಳ ಟೆಂಡರ್ ವಿವಾದ: ಕಾರವಾರ ನಗರಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ನಡುವೆ ವಾಕ್ಸಮರ

ಒಂದ್ಕಡೆ ಈವರೆಗೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಭಟ್ಕಳದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಂಡು ಭಾಷಾ ವಿವಾದಕ್ಕೆ ಜಿಲ್ಲಾಡಳಿತ ತೆರೆಯೇನೋ ಎಳೆದಿದೆ. ಆದರೂ ಮತ್ತೊಂದು ಕಡೆ ಈ ವಿವಾದ ಇಲ್ಲಿ ಬೂದಿಮುಚ್ಚಿದ ಕೆಂಡದAತೆ ಕಾಣಿಸುತ್ತಿದೆ. ಹೀಗಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಉರ್ದು ಬೋರ್ಡ್ ತೆಗೆಯಿಸಿದ್ದಕ್ಕೆ ಅಸಮಾಧಾನಗೊಂಡಿರುವ ಮುಸ್ಲಿಮರು ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡುತ್ತಿದ್ದು, ಪುರಸಭೆಯ ತುರ್ತು ಸಾಮಾನ್ಯ ಸಭೆಯ ಬಳಿಕ ಮುಂದೇನಾಗಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ