ಆ್ಯಪ್ನಗರ

ಸ್ವಚ್ಛತೆ ಕಂಡ ಗುತ್ತೀಗೇರಿ ದೊಡ್ಡ ಕೆರೆ

ಹಳಿಯಾಳ : ಇಲ್ಲಿಯ ಕರ್ನಾಟಕ ರಕ್ಷ ಣಾ ವೇದಿಕೆಯ ಪದಾಧಿಕಾರಿಗಳು ವಿವಿಧ ಸಂಘ -ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವದಲ್ಲಿ ಒಂದು ತಿಂಗಳಿನಿಂದ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿದ್ದು, ಭಾನುವಾರ ನಸುಕಿನ ಜಾವ ಪಟ್ಟಣದ ಹೊರಗಿನ ಗುತ್ತೀಗೇರಿಯ ದೊಡ್ಡ ಕೆರೆಯಲ್ಲಿ ಶ್ರಮದಾನ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.

Vijaya Karnataka 17 Jun 2019, 5:00 am
ಹಳಿಯಾಳ : ಇಲ್ಲಿಯ ಕರ್ನಾಟಕ ರಕ್ಷ ಣಾ ವೇದಿಕೆಯ ಪದಾಧಿಕಾರಿಗಳು ವಿವಿಧ ಸಂಘ -ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಕಾರ ಹಾಗೂ ಸಹಭಾಗಿತ್ವದಲ್ಲಿ ಒಂದು ತಿಂಗಳಿನಿಂದ ಸ್ವಚ್ಛತಾ ಅಭಿಯಾನವನ್ನು ಆರಂಭಿಸಿದ್ದು, ಭಾನುವಾರ ನಸುಕಿನ ಜಾವ ಪಟ್ಟಣದ ಹೊರಗಿನ ಗುತ್ತೀಗೇರಿಯ ದೊಡ್ಡ ಕೆರೆಯಲ್ಲಿ ಶ್ರಮದಾನ ಮೂಲಕ ಸ್ವಚ್ಛತಾ ಕಾರ್ಯ ನಡೆಸಿದರು.
Vijaya Karnataka Web large lake of leasing
ಸ್ವಚ್ಛತೆ ಕಂಡ ಗುತ್ತೀಗೇರಿ ದೊಡ್ಡ ಕೆರೆ


ಮುಂಜಾನೆ ಕೆರೆಯ ಆವರಣಕ್ಕೆ ಆಗಮಿಸಿ ಕೆರೆಯಲ್ಲಿ ಹಾಕಿದ್ದ ತ್ಯಾಜ್ಯ, ಬಿಯರ್‌ ಬಾಟಲ್‌, ಪ್ಲಾಸ್ಟಿಕ್‌, ಪೂಜಾ ಸಾಮಗ್ರಿಗಳು, ಪೂಜೆ ಮಾಡಿದ ತೆಂಗಿನಕಾಯಿ, ಮಿನರಲ್‌ ವಾಟರ್‌ ಬಾಟಲ್‌, ಚಿಫ್ಸ್‌ ಪ್ಯಾಕೆಟ್ಸ್‌ ಮತ್ತು ಬಟ್ಟೆಗಳು ಸೇರಿದಂತೆ ಕೆರೆಯ ಆವರಣದ ಸುತ್ತಲೂ ಬೆಳೆದು ನಿಂತ ಪಾರ್ಥೇನಿಯಂ ಸಸಿಗಳನ್ನು ತೆಗೆದು ಸಾಗಿಸಿದರು. ಕೆರೆಯ ಸುತ್ತಲೂ ಇರುವ ವಾಕಿಂಗ್‌ ಪಾಥ್‌ನಲ್ಲಿಯ ಕಸವನ್ನು ಗುಡಿಸಿ ಸ್ವಚ್ಛಗೊಳಿಸಿ ನೈರ್ಮಲ್ಯ ಕಾಪಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.

ಕರವೇ ತಾಲೂಕಾಧ್ಯಕ್ಷ ಬಸವರಾಜ್‌ ಬೆಂಡಿಗೇರಿಮಠ, ವಿನೋದ ದೊಡಮನಿ, ಈರಯ್ಯಾ ಹಿರೇಮಠ, ಸುಧಾಕರ ಕುಂಬಾರ, ಚಂದ್ರಕಾಂತ ದುರ್ವೆ, ಮಹೇಶ ಆನೇಗುಂದಿ, ನಾಗೇಶ ಹೆಗಡೆ, ಶ್ರೀಶೈಲ್‌ ಮಠದೇವರು, ವಿಜಯ ಪಡ್ನೀಸ್‌, ಸಿಪಿಐ ಬಿ.ಎಸ್‌.ಲೋಕಾಪೂರ, ನ್ಯಾಯವಾದಿ ಮಂಜುನಾಥ್‌ ಮಾದರ, ಲಾಯಿನ್ಸ್‌ ಕ್ಲಬ್‌ ಅಧ್ಯಕ್ಷ ಮಹಾಂತೇಶ ಹಿರೇಮಠ, ತಹಶೀಲದಾರ ಕಚೇರಿಯ ಪರಶುರಾಮ ಶಿಂಧೆ, ಪತ್ರಕರ್ತ ಯೋಗರಾಜ್‌ ಕರಾಂಡೆ, ಪತಂಜಲಿಯ ಕಮಲ್‌ ಸಿಕ್ವೇರಾ ಮತ್ತೀತರರು ಶ್ರಮದಾನದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ