ಭಟ್ಕಳ : ತಾಲೂಕಿನಲ್ಲಿಯಲ್ವಡಿಕವೂರು ಗ್ರಾಮ ಪಂಚಾಯಿತಿ ಪಕ್ಕದಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜು ಆರಂಭವಾಗಿ ದಶಕ ಕಳೆದರೂ, ಕಾಲೇಜು ಇನ್ನೂ ಆಧುನಿಕತೆಗೆ ಒಗ್ಗಿಕೊಂಡಿಲ್ಲ. ಗ್ರಾಮ ಪಂಚಾಯಿತಿ ಕಟ್ಟಡ ಬದಲಾಗಿ ಹೊಸ ಕಟ್ಟಡ ಇದೆ ಎನ್ನುವುದು ಬಿಟ್ಟರೆ ದೊಡ್ಡ ಮಟ್ಟದ ಪ್ರಗತಿಯೇನೂ ಕಂಡು ಬಂದಿಲ್ಲ.
2007-08ನೇ ಸಾಲಿನಲ್ಲಿಕಾಲೇಜು ಆರಂಭವಾದಾಗ ಇದ್ದಿದ್ದು 106 ವಿದ್ಯಾರ್ಥಿಗಳು. ಖಾಸಗಿ ಕಾಲೇಜುಗಳ ಪ್ರವೇಶ ಶುಲ್ಕದಿಂದ ಬೇಸತ್ತಿದ್ದ ವಿದ್ಯಾರ್ಥಿಗಳು, ಪಾಲಕರಿಗೆ ಸರಕಾರಿ ಕಾಲೇಜು ವರವಾಗಿ ಪರಿಣಮಿಸಿತ್ತು. ಕಲಾ, ವಿಜ್ಞಾನ, ವಾಣಿಜ್ಯ ಎಲ್ಲವಿಭಾಗಗಳೂ ಇಲ್ಲಿಆರಂಭವಾಗಿದ್ದವು. ಆಗ ಇದ್ದಿದ್ದು ಕೇವಲ 3 ಸಿಬ್ಬಂದಿ. ಕಾಲೇಜಿಗೆ ಎಲ್ಲಮೂಲ ಸೌಲಭ್ಯ ಕಲ್ಪಿಸಿ, ಅಭಿವೃದ್ಧಿ ಪಡಿಸಬೇಕೆಂದು ಜನರು ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದರು.
ಕೊನೆಗೆ 2016-17ರಲ್ಲಿಅಂದಿನ ಶಾಸಕ ಮಂಕಾಳು ವೈದ್ಯರ ನೆರವಿನೊಂದಿಗೆ ಹೊಸ ಕಾಲೇಜು ಕಟ್ಟಡ ಉದ್ಘಾಟನೆಯಾಯಿತು. ಈಗಲೂ ಕಾಲೇಜಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಬರುತ್ತಲೇ ಇದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ 100ರ ಆಸುಪಾಸಿನಲ್ಲಿಇದೆ. 7 ಉಪನ್ಯಾಸಕರಿದ್ದಾರೆ.
ಕಾಲೇಜಿನಲ್ಲಿಕ್ಲರ್ಕ್, ಅಟೆಂಡರ್ ಯಾರೂ ಇಲ್ಲ. ಉಪನ್ಯಾಸಕರಿಗೆ ಪ್ರತ್ಯೇಕ ಸ್ಟಾಫ್ರೂಮ್ ಇಲ್ಲ. ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಪ್ರಯೋಗಾಲಯ ಇದ್ದರೂ, ಆಧುನಿಕ ಜಗತ್ತಿಗೆ ತೆರೆದುಕೊಂಡಿಲ್ಲ. ಕಾಲೇಜಿಗೆ ಸುಸಜ್ಜಿತವಾದ ಕ್ರೀಡಾಂಗಣವೂ ಇಲ್ಲ. ಅಷ್ಟೇ ಅಲ್ಲ, ಕುಡಿಯುವ ನೀರಿನ ಬಾವಿಯೂ ಇಲ್ಲದಾಗಿದೆ. ಎಲ್ಲಇಲ್ಲಗಳ ನಡುವೆ ಗುಣಮಟ್ಟದ ಶಿಕ್ಷಣ ನೀಡಲು ಉಪನ್ಯಾಸಕರು ಪ್ರಯತ್ನಿಸುತ್ತಲೇ ಇದ್ದಾರೆ.
ಪಟ್ಟಣದಿಂದ 5 ಕಿಮೀ ದೂರ : ಖಾಸಗಿ ಶಿಕ್ಷಣ ದುಬಾರಿಯಾಗಿದ್ದ ಸಂದರ್ಭದಲ್ಲಿಯೇ ಅಂದಿನ ಸಚಿವ ಶಿವಾನಂದ ನಾಯ್ಕ ಪ್ರಯತ್ನದಲ್ಲಿತಾಲೂಕಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಆಗುತ್ತಿದ್ದಂತೆಯೇ ಇಲ್ಲಿನ ಜನರು ಅತೀವ ಸಂತೋಷ ಪಟ್ಟಿದ್ದರು. ಆದರೆ ಭಟ್ಕಳ ಶಹರದಿಂದ 5 ಕಿ.ಮೀ. ದೂರ ಇರುವ ಯಲ್ವಡಿಕವೂರಿನಲ್ಲಿಕಾಲೇಜು ಆರಂಭವಾಯಿತು. ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಈ ಕಾಲೇಜಿಗೆ ತೆರಳಲು ಬಹು ದೊಡ್ಡ ಸಮಸ್ಯೆ ಎದುರಾದೆ.
ಈಗಲೂ ಕುಂದಾಪುರ, ಬೈಂದೂರು ಕಡೆ ಸಾಗುವ ಬಸ್ಸುಗಳ ಮೂಲಕವೇ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಈ ಕಾಲೇಜಿಗೆ ಬರಲು ವಿಶೇಷ ಬಸ್ ಸೌಕರ್ಯವೇನೂ ಇಲ್ಲ.
ಭಟ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಉತ್ತಮ ಶಿಕ್ಷಣ ನೀಡಲು ಎಲ್ಲರೀತಿಯಿಂದಲೂ ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಕಾಲೇಜಿಗೆ ಬರುತ್ತಿದ್ದಾರೆ. ಕಾಲೇಜು ಇನ್ನೂ ಅಭಿವೃದ್ಧಿ ಹೊಂದಬೇಕಾಗಿದ್ದು, ಎಲ್ಲರ ಸಹಕಾರದ ಅಗತ್ಯ ಇದೆ.
2007-08ನೇ ಸಾಲಿನಲ್ಲಿಕಾಲೇಜು ಆರಂಭವಾದಾಗ ಇದ್ದಿದ್ದು 106 ವಿದ್ಯಾರ್ಥಿಗಳು. ಖಾಸಗಿ ಕಾಲೇಜುಗಳ ಪ್ರವೇಶ ಶುಲ್ಕದಿಂದ ಬೇಸತ್ತಿದ್ದ ವಿದ್ಯಾರ್ಥಿಗಳು, ಪಾಲಕರಿಗೆ ಸರಕಾರಿ ಕಾಲೇಜು ವರವಾಗಿ ಪರಿಣಮಿಸಿತ್ತು. ಕಲಾ, ವಿಜ್ಞಾನ, ವಾಣಿಜ್ಯ ಎಲ್ಲವಿಭಾಗಗಳೂ ಇಲ್ಲಿಆರಂಭವಾಗಿದ್ದವು. ಆಗ ಇದ್ದಿದ್ದು ಕೇವಲ 3 ಸಿಬ್ಬಂದಿ. ಕಾಲೇಜಿಗೆ ಎಲ್ಲಮೂಲ ಸೌಲಭ್ಯ ಕಲ್ಪಿಸಿ, ಅಭಿವೃದ್ಧಿ ಪಡಿಸಬೇಕೆಂದು ಜನರು ಜನಪ್ರತಿನಿಧಿಗಳಿಗೆ ದುಂಬಾಲು ಬಿದ್ದರು.
ಕೊನೆಗೆ 2016-17ರಲ್ಲಿಅಂದಿನ ಶಾಸಕ ಮಂಕಾಳು ವೈದ್ಯರ ನೆರವಿನೊಂದಿಗೆ ಹೊಸ ಕಾಲೇಜು ಕಟ್ಟಡ ಉದ್ಘಾಟನೆಯಾಯಿತು. ಈಗಲೂ ಕಾಲೇಜಿಗೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಬರುತ್ತಲೇ ಇದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ 100ರ ಆಸುಪಾಸಿನಲ್ಲಿಇದೆ. 7 ಉಪನ್ಯಾಸಕರಿದ್ದಾರೆ.
ಕಾಲೇಜಿನಲ್ಲಿಕ್ಲರ್ಕ್, ಅಟೆಂಡರ್ ಯಾರೂ ಇಲ್ಲ. ಉಪನ್ಯಾಸಕರಿಗೆ ಪ್ರತ್ಯೇಕ ಸ್ಟಾಫ್ರೂಮ್ ಇಲ್ಲ. ವಿಜ್ಞಾನ ವಿದ್ಯಾರ್ಥಿಗಳಿಗಾಗಿ ಪ್ರಯೋಗಾಲಯ ಇದ್ದರೂ, ಆಧುನಿಕ ಜಗತ್ತಿಗೆ ತೆರೆದುಕೊಂಡಿಲ್ಲ. ಕಾಲೇಜಿಗೆ ಸುಸಜ್ಜಿತವಾದ ಕ್ರೀಡಾಂಗಣವೂ ಇಲ್ಲ. ಅಷ್ಟೇ ಅಲ್ಲ, ಕುಡಿಯುವ ನೀರಿನ ಬಾವಿಯೂ ಇಲ್ಲದಾಗಿದೆ. ಎಲ್ಲಇಲ್ಲಗಳ ನಡುವೆ ಗುಣಮಟ್ಟದ ಶಿಕ್ಷಣ ನೀಡಲು ಉಪನ್ಯಾಸಕರು ಪ್ರಯತ್ನಿಸುತ್ತಲೇ ಇದ್ದಾರೆ.
ಪಟ್ಟಣದಿಂದ 5 ಕಿಮೀ ದೂರ : ಖಾಸಗಿ ಶಿಕ್ಷಣ ದುಬಾರಿಯಾಗಿದ್ದ ಸಂದರ್ಭದಲ್ಲಿಯೇ ಅಂದಿನ ಸಚಿವ ಶಿವಾನಂದ ನಾಯ್ಕ ಪ್ರಯತ್ನದಲ್ಲಿತಾಲೂಕಿಗೆ ಸರಕಾರಿ ಪದವಿ ಪೂರ್ವ ಕಾಲೇಜು ಮಂಜೂರು ಆಗುತ್ತಿದ್ದಂತೆಯೇ ಇಲ್ಲಿನ ಜನರು ಅತೀವ ಸಂತೋಷ ಪಟ್ಟಿದ್ದರು. ಆದರೆ ಭಟ್ಕಳ ಶಹರದಿಂದ 5 ಕಿ.ಮೀ. ದೂರ ಇರುವ ಯಲ್ವಡಿಕವೂರಿನಲ್ಲಿಕಾಲೇಜು ಆರಂಭವಾಯಿತು. ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳು ಈ ಕಾಲೇಜಿಗೆ ತೆರಳಲು ಬಹು ದೊಡ್ಡ ಸಮಸ್ಯೆ ಎದುರಾದೆ.
ಈಗಲೂ ಕುಂದಾಪುರ, ಬೈಂದೂರು ಕಡೆ ಸಾಗುವ ಬಸ್ಸುಗಳ ಮೂಲಕವೇ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದಾರೆ. ಈ ಕಾಲೇಜಿಗೆ ಬರಲು ವಿಶೇಷ ಬಸ್ ಸೌಕರ್ಯವೇನೂ ಇಲ್ಲ.
ಭಟ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಉತ್ತಮ ಶಿಕ್ಷಣ ನೀಡಲು ಎಲ್ಲರೀತಿಯಿಂದಲೂ ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿಕಾಲೇಜಿಗೆ ಬರುತ್ತಿದ್ದಾರೆ. ಕಾಲೇಜು ಇನ್ನೂ ಅಭಿವೃದ್ಧಿ ಹೊಂದಬೇಕಾಗಿದ್ದು, ಎಲ್ಲರ ಸಹಕಾರದ ಅಗತ್ಯ ಇದೆ.