ಆ್ಯಪ್ನಗರ

ಬುದ್ಧಿಶಕ್ತಿ ಬೆಳೆದಂತೆ ಭಾವನೆಗಳು ಬೆಳೆಯಲಿ

ಶಿರಸಿ : ಶಿಕ್ಷ ಣದಿಂದ ಜೀವನ ವಿಕಾಸವಾಗಬೇಕೇ ಹೊರತು ವಿನಾಶಕ್ಕೆ ಕಾರಣವಾಗಬಾರದು. ಬುದ್ಧಿಶಕ್ತಿ ಬೆಳೆದಂತೆ ಭಾವನೆಗಳು ಬೆಳೆಯಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ನುಡಿದರು.

Vijaya Karnataka 12 Jul 2019, 5:00 am
ಶಿರಸಿ : ಶಿಕ್ಷ ಣದಿಂದ ಜೀವನ ವಿಕಾಸವಾಗಬೇಕೇ ಹೊರತು ವಿನಾಶಕ್ಕೆ ಕಾರಣವಾಗಬಾರದು. ಬುದ್ಧಿಶಕ್ತಿ ಬೆಳೆದಂತೆ ಭಾವನೆಗಳು ಬೆಳೆಯಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ನುಡಿದರು.
Vijaya Karnataka Web let the emotions grow as the intellect grows
ಬುದ್ಧಿಶಕ್ತಿ ಬೆಳೆದಂತೆ ಭಾವನೆಗಳು ಬೆಳೆಯಲಿ


ಇಲ್ಲಿನ ವೇದ ಆರೋಗ್ಯ ಕೇಂದ್ರದಲ್ಲಿ ಗುರುವಾರ ಡಾ.ವೆಂಕಟ್ರಮಣ ಹೆಗಡೆ ರಚಿತ 'ಆಹಾರ ಆರೋಗ್ಯ' ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ''ಆರೋಗ್ಯ ಪೂರ್ಣ ಸಮಾಜಕ್ಕೆ ಶಿಕ್ಷ ಣ, ಆರೋಗ್ಯ ಹಾಗೂ ಆಧ್ಯಾತ್ಮ ಬೇಕು. ಇಂದು ಮನುಷ್ಯನ ಬುದ್ಧಿಶಕ್ತಿಗೆ ತಕ್ಕಂತೆ ಭಾವನೆಗಳು ಬೆಳೆಯುತ್ತಿಲ್ಲ. ಹೀಗಾಗಿಯೇ ದುರಂತಗಳು ಹೆಚ್ಚಿವೆ'' ಎಂದರು.

''ಗಿಡಮೂಲಿಕೆ, ವನಸ್ಪತಿಗಳು ಅದ್ಭುತ ಶಕ್ತಿ ಹೊಂದಿವೆ. ಎಷ್ಟೋ ಗಿಡಮೂಲಿಕೆ ಬಗ್ಗೆ ಗೊತ್ತಿದ್ದರೂ ಅದರ ತಿಳಿವಳಿಕೆ ಇಲ್ಲದೇ ಉಪಯೋಗಿಸುತ್ತಿಲ್ಲ. ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆಗಳಿಂದ ಆರೋಗ್ಯ ಕಾಪಾಡಿಕೊಳ್ಳಬೇಕು'' ಎಂದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸೋಂದಾ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ''ಪ್ರಕೃತಿಗೆ ಸಹಜವಾಗಿಯೇ ರೋಗ ನಿರೋಧಕ ಶಕ್ತಿಯಿದೆ. ಕೆಲವೊಮ್ಮೆ ಔಷಧಿಗಳ ಮೂಲಕ ರೋಗ ನಿರೋಧಕ ಶಕ್ತಿ ಜಾಗೃತಿ ಮಾಡಬೇಕಿದೆ. ಆಹಾರ, ನಿದ್ರೆ ಮತ್ತು ಚಟುವಟಿಕೆ ಆರೋಗ್ಯದ ಮೂಲ ಕಾರಣ. ಯುಕ್ತವಾದ ಆಹಾರ, ನಿದ್ರೆ ಮತ್ತು ಚಟುವಟಿಕೆಗಳು ಯೋಗದ ಸಾಧನವಾಗಿದೆ'' ಎಂದರು.

ಕಾರ್ಯಕ್ರಮದಲ್ಲಿ ವಿವಿಧೆಡೆಯ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಡಾ.ವೆಂಕಟ್ರಮಣ ಹೆಗಡೆ ಸ್ವಾಗತಿಸಿದರು. ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾನಸಾ ಹೆಗಡೆ ನಿರೂಪಿಸಿದರು.


ಯತಿಗಳು ಒಂದಾಗಬೇಕು : ಹಿಂದೂ ಯತಿಗಳ ಸಂಖ್ಯೆ ಹೆಚ್ಚಿದ್ದರೂ ಒಂದಾಗುವ ಸಂಖ್ಯೆ ಕಡಿಮೆಯಿದೆ. ಆದರೆ ಹಿಂದೂಸ್ತಾನದಲ್ಲಿ ಯತಿಗಳೆಲ್ಲರೂ ಒಂದಾಗಬೇಕಿದೆ. ಇದರಿಂದ ಧರ್ಮ ರಕ್ಷ ಣೆ ಆಗುತ್ತದೆ. ಜತೆಗೆ ದೇಶದ ರಕ್ಷ ಣೆಯೂ ಆಗುತ್ತದೆ ಎಂದು ಸೋಂದಾ ಸ್ವರ್ಣವಲ್ಲೀ ಸ್ವಾಮೀಜಿ ನುಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ