ಆ್ಯಪ್ನಗರ

ಬೆಳೆಗಾರರಿಗೆ ಉತ್ತಮ ಧಾರಣೆ ಸಿಗುವಂತಾಗಲಿ

ಭಟ್ಕಳ: ಕಷ್ಟಪಟ್ಟು ಬೆಳೆದ ರೈತರಿಗೆ ದಲ್ಲಾಳಿಗಳ ಹಾವಳಿ ತಪ್ಪಿಸಿ,ಬೆಳೆಗೆ ಉತ್ತಮ ಧಾರಣೆ ಸಿಗುವಂತೆ ಕ್ಯಾಂಪ್ಕೋ ಅಡಕೆ ಖರೀದಿ ಕೇಂದ್ರ ಕಾರ್ಯ ನಿರ್ವಹಿಸಬೇಕು ಎಂದು ಹೊನ್ನಾವರ ಎಪಿಎಂಸಿ ಅಧ್ಯಕ್ಷ ಗೋಪಾಲ.ಎಮ್‌.ನಾಯ್ಕ ಹೇಳಿದರು.

Vijaya Karnataka 18 Feb 2020, 5:00 am
ಭಟ್ಕಳ: ಕಷ್ಟಪಟ್ಟು ಬೆಳೆದ ರೈತರಿಗೆ ದಲ್ಲಾಳಿಗಳ ಹಾವಳಿ ತಪ್ಪಿಸಿ,ಬೆಳೆಗೆ ಉತ್ತಮ ಧಾರಣೆ ಸಿಗುವಂತೆ ಕ್ಯಾಂಪ್ಕೋ ಅಡಕೆ ಖರೀದಿ ಕೇಂದ್ರ ಕಾರ್ಯ ನಿರ್ವಹಿಸಬೇಕು ಎಂದು ಹೊನ್ನಾವರ ಎಪಿಎಂಸಿ ಅಧ್ಯಕ್ಷ ಗೋಪಾಲ.ಎಮ್‌.ನಾಯ್ಕ ಹೇಳಿದರು.
Vijaya Karnataka Web let the growers get the best price
ಬೆಳೆಗಾರರಿಗೆ ಉತ್ತಮ ಧಾರಣೆ ಸಿಗುವಂತಾಗಲಿ


ಅವರು ಸೋಮವಾರ ಮಂಗಳೂರಿನ ಕ್ಯಾಂಪ್ಕೋ ನಿಯಮಿತ ವತಿಯಿಂದ ಭಟ್ಕಳ ಶಿರಾಲಿಯಲ್ಲಿನ ಎಪಿಎಂಸಿ ಉಪ ಮಾರುಕಟ್ಟೆಯಲ್ಲಿನೂತನ ಅಡಕೆ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡುತ್ತಿದ್ದರು.

ಶಿರಾಲಿ ಎಪಿಎಂಸಿ ವ್ಯಾಪ್ತಿಯಲ್ಲಿನ ಗೋದಾಮು ಖಾಲಿಯಿದ್ದು, ಇದರ ಸದ್ಬಳಕೆಗೆ ಯೋಚಿಸುತ್ತಿರುವ ವೇಳೆ ಕ್ಯಾಂಪ್ಕೋ ನಿಯಮಿತ ಮಂಗಳೂರಿನ ನಿರ್ದೇಶಕರು ಬಂದು ಶಿರಾಲಿಯಲ್ಲಿಕ್ಯಾಂಪ್ಕೋ ನಿಯಮಿತದಿಂದ ಅಡಕೆ ಖರೀದಿ ಕೇಂದ್ರ ಸ್ಥಾಪಿಸುವ ಬಗ್ಗೆ ಪ್ರಸ್ತಾವನೆ ನೀಡಿದರು. ಇದಾದ ನಂತರ ಶಿರಾಲಿಯಲ್ಲಿಗೋದಾಮನ್ನು ಕ್ಯಾಂಪ್ಕೋ ಅವರಿಗೆ ಬಾಡಿಗೆ ಬದಲು ರೈತರ ಬೆಳೆಗೆ ಧಾರಣೆ ಉತ್ತಮ ನೀಡಿ ಎಂದು ಅವರಿಗೆ ಅಡಕೆ ಕೇಂದ್ರ ಮಾಡಲು ನೀಡಿದ್ದೇವೆ. ಈಗ ಶಿರಾಲಿಯಲ್ಲಿಕ್ಯಾಂಪ್ಕೋ ಘಟಕವಾಗಿರುವುದು ರೈತರಿಗೆ ದಲ್ಲಾಳಿಗಳ ಹಾವಳಿಯಿಂದ ಮುಕ್ತಿ ಸಿಕ್ಕಂತಾಗಿದೆ. ಅವಶ್ಯಕತೆ ಬಿದ್ದಲ್ಲಿಇನ್ನು ಒಂದು ಗೋದಾಮು ಕ್ಯಾಂಪ್ಕೋ ಅವರಿಗೆ ನೀಡಲು ಎಪಿಎಂಸಿ ಸಿದ್ಧವಿದೆ ಎಂದರು. ಮುಂದಿನ ದಿನದಲ್ಲಿರೈತರಿಗೆ ಮೆಸೇಜ್‌ ಮೂಲಕ ಅಡಕೆ ಧಾರಣಿ ತಲುಪಿಸುವ ಕೆಲಸ ಮಾಡಬೇಕೆಂದು ಹೇಳಿದರು.

ಬಹುಬೆಳೆಯತ್ತ ಗಮನಹರಿಸಿ
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ಕ್ಯಾಂಪ್ಕೋ ನಿಯಮಿತ ಉಪಾಧ್ಯಕ್ಷ ಶಂಕರ ನಾರಾಯಣ ಭಟ್‌ ಖಂಡಿಗೆ 'ಸಂಸ್ಥೆಯ ಆರಂಭದ ದಿನದಲ್ಲಿಯೇ ಭಟ್ಕಳದಲ್ಲಿಅಡಿಕೆ ರಾಶಿಯ ಚೀಲಗಳು ಗೋದಾಮು ತುಂಬಿರುವುದು ಸಂತಸವಾಗಿದೆ. ಒಂದೇ ಬೆಳೆಗೆ ರೈತರು ಸೀಮಿತವಾಗದೇ ಬಹುಬೆಳೆಯತ್ತ ಶ್ರಮಿಸಬೇಕು. ಸಂಸ್ಥೆಗೆ ಗುಣಮಟ್ಟದ ಬೆಳೆ ತಲುಪಿಸಿದರೆ ಉತ್ತಮ ಧಾರಣೆ ನೀಡುತ್ತೇವೆ ಎಂದರು.

ಕ್ಯಾಂಪ್ಕೋ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಸುರೇಶ ಭಂಡಾರಿ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಖರೀದಿ ಕೇಂದ್ರಕ್ಕೆ ಅಡಕೆ ನೀಡಿದ ರೈತರಿಗೆ ಚೆಕ್‌ ವಿತರಿಸಲಾಯಿತು.

ತಾಲೂಕಾ ಪಂಚಾಯಿತಿ ಸದಸ್ಯ ವಿಷ್ಣು ದೇವಾಡಿಗ, ಕ್ಯಾಂಪ್ಕೋದ ಉಪ ಜನರಲ್‌ ಮ್ಯಾನೇಜರ್‌ ಪ್ರಮೋದ ಕುಮಾರ, ಕ್ಯಾಂಪ್ಕೋ ನಿಯಮಿತ ಹಿರಿಯ ನಿರ್ದೇಶಕ ಶಂಭುಲಿಂಗ ಜಿ.ಹೆಗಡೆ ನಡಗೋಡ, ಶಿರಸಿ ಕ್ಯಾಂಪ್ಕೋ ರೀಜನಲ್‌ ಮ್ಯಾನೇಜರ ಭರತ್‌ ಭಟ್‌ ಉಪಸ್ಥಿತರಿದ್ದರು. ಸುಬ್ರಾಯ ಭಟ್‌ ಪ್ರಾರ್ಥಿಸಿದರು. ಕ್ಯಾಂಪ್ಕೋ ನಿಯಮಿತ ಹಿರಿಯ ನಿರ್ದೇಶಕ ಶಂಭುಲಿಂಗ ಜಿ.ಹೆಗಡೆ ನಡಗೋಡ ಸ್ವಾಗತಿಸಿದರು. ಚಂದ್ರಕಾಂತ ನಿರ್ವಹಿಸಿದರು. ಭರತ್‌ ಭಟ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ