ಆ್ಯಪ್ನಗರ

ಪತ್ರಕರ್ತ ಗುಣಮಟ್ಟದ ಸುದ್ದಿ ನೀಡಲಿ

ಭಟ್ಕಳ : ಸಾಮಾಜಿಕ ಮಾಧ್ಯಮಗಳು ಇತ್ತೀಚಿನ ದಿನಗಳಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಶಾಸಕ ಸುನೀಲ ನಾಯ್ಕ ವಿಷಾದ ವ್ಯಕ್ತಪಡಿಸಿದರು.

Vijaya Karnataka 8 Jul 2019, 5:00 am
ಭಟ್ಕಳ : ಸಾಮಾಜಿಕ ಮಾಧ್ಯಮಗಳು ಇತ್ತೀಚಿನ ದಿನಗಳಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ ಎಂದು ಶಾಸಕ ಸುನೀಲ ನಾಯ್ಕ ವಿಷಾದ ವ್ಯಕ್ತಪಡಿಸಿದರು.
Vijaya Karnataka Web let the journalist deliver quality news
ಪತ್ರಕರ್ತ ಗುಣಮಟ್ಟದ ಸುದ್ದಿ ನೀಡಲಿ


ಮಾಧ್ಯಮ ಕ್ಷೇತ್ರ ಒಂದು ಸಾಮಾಜಿಕ ಶಕ್ತಿಯಾಗಿದ್ದು, ಪತ್ರಕರ್ತ ಮಾತ್ರ ತನ್ನ ಗುಣಮಟ್ಟದ ಸುದ್ದಿಯ ಮೂಲಕ ನೈಜ ಸುದ್ದಿಯನ್ನು ಕೊಡಬಲ್ಲರು. ಸಾಮಾಜಿಕ ಮಾಧ್ಯಮಕ್ಕೆ ಇದು ಅಸಾಧ್ಯ ಎಂದರು.

ಅವರು ಮುರುಡೇಶ್ವರದ ಆರ್‌.ಎನ್‌.ಎಸ್‌.ಸಭಾಂಗಣದಲ್ಲಿ ಉತ್ತರ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರು ಸಂಘ ಹಾಗೂ ತಾಲೂಕು ಪತ್ರಕರ್ತರ ಸಂಘ ಇವರ ಸಹಯೋಗದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಜಿ.ಪಂ. ಅಧ್ಯಕ್ಷತೆ ಜಯಶ್ರೀ ಮೊಗೇರ್‌, ಹಿರಿಯ ಪತ್ರಕರ್ತ ಜಿ.ಯು.ಭಟ್‌, ಸುಬ್ರಾಯ ಭಟ್‌ ಬಕ್ಕಳ, ನರಸಿಂಹ ಸಾತೊಡ್ಡಿ, ಡಾ.ಅಮಿನುದ್ದೀನ್‌ ಗೌಡಾ ಮಾತನಾಡಿದರು.

ಸಂಘದ ಅಧ್ಯಕ್ಷ ಭಾಸ್ಕರ್‌ ನಾಯ್ಕ ವೇದಿಕೆಯಲ್ಲಿದ್ದರು. ನರಸಿಂಹ ಅಡಿ ಸ್ವಾಗತಿಸಿದರು. ಕೃಷ್ಣಮೂರ್ತಿ ಹೆಬ್ಬಾರ್‌ ನಿರೂಪಿಸಿದರು. ಕಾರ್ಯದರ್ಶಿ ಮೋಹನ ನಾಯಕ ವಂದಿಸಿದರು. ಪತ್ರಿಕೆ ಏಜೆಂಟ್‌ ಮಧು ಕಾಯ್ಕಿಣಿ, ಆನಂದ ಭಟ್‌ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ರಾಧಾಕೃಷ್ಣ ವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ