ಆ್ಯಪ್ನಗರ

ದೇಶ ಮೊದಲು ಎಂಬ ಭಾವ ಎಲ್ಲರಲ್ಲಿ ಮೂಡಲಿ

ಹೊನ್ನಾವರ: ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಸಂಸ್ಥಾಪನಾ ದಿನಾಚರಣೆ, ವೃಕ್ಷಾರೋಪಣ, ರಕ್ಷಾಬಂಧನ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

Vijaya Karnataka 20 Aug 2019, 5:00 am
ಹೊನ್ನಾವರ: ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಸಂಸ್ಥಾಪನಾ ದಿನಾಚರಣೆ, ವೃಕ್ಷಾರೋಪಣ, ರಕ್ಷಾಬಂಧನ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
Vijaya Karnataka Web KWR-19 HNR 1


ಭಾರತ ಸೇವಕ ಸಮಾಜದ ಅಧ್ಯಕ್ಷ ಹಾಗೂ ವೈದ್ಯ ಹಳಕಾರದ ಡಾ. ಅಶೋಕ ಭಟ್ಟ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿ, ಬಿಸಿಗಾಳಿ ಮತ್ತು ಹಿಮ ಕರಗುವಿಕೆ ಇವು ಪರಿಸರ ನಾಶದ ಪರಿಣಾಮಗಳಾಗಿವೆ. ಗಿಡ ಬೆಳೆಸಿ ಪರಿಸರ ಕಾಪಾಡಬೇಕು ಎಂದರು. ಅಧ್ಯಕ್ಷ ತೆ ವಹಿಸಿದ್ದ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಸುಬ್ರಾಯ ಭಟ್ಟ ಮಾತನಾಡಿ, ದೇಶ ಮೊದಲು ನಂತರ ನಾವೆಲ್ಲ ಎಂಬ ಭಾವ ನಮ್ಮನ್ನು ಉತ್ಕೃಷ್ಟತೆಯತ್ತ ಕೊಂಡೊಯ್ಯುತ್ತದೆ ಎಂದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕೆ.ಎಸ್‌ ಭಟ್ಟ ಸೇತುಬಂಧ ಟ್ರಸ್ಟ್‌ನ ಉದ್ದೇಶಗಳ ಕುರಿತು ಮಾತನಾಡಿದರು.

ಕುಮಟಾ ರೋಟರಿ ಅಧ್ಯಕ್ಷ ಸುರೇಶ ಭಟ್ಟ ಮಾತನಾಡಿ, ಹಿರಿಯರು ಸಮಾಜಕ್ಕೆ ಆದರ್ಶರಾಗಿರಬೇಕು ಎಂದರು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷ ಕ, ರೋಟರಿಯನ್‌ ಎಸ್‌.ಎಸ್‌.ಭಟ್ಟ ಲೊಕೇಶ್ವರ ಹಾಗೂ ಊರಿನ ಹಿರಿಯ ಗಜಾನನ ಭಟ್ಟ ಇವರನ್ನು ಸನ್ಮಾನಿಸಲಾಯಿತು. ಶಿಕ್ಷ ಕ ಸುಬ್ರಹ್ಮಣ್ಯ ಭಟ್ಟ ಅಭಿನಂದಿಸಿ, ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತ ಎಸ್‌.ಎಸ್‌. ಭಟ್ಟ ಮಾತನಾಡಿ, ಶಿಕ್ಷ ಣ ಕ್ಷೇತ್ರದಲ್ಲಿ ಶಿಕ್ಷ ಕರ ಪಾತ್ರದ ಮಹತ್ತರವಾಗಿದೆ. ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಬೇಕು ಎಂದರು.

ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಗೆ ರಂಗೋಲಿ, ಚಿತ್ರಕಲಾ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು.

ಶಾಲೆಯ ಪ್ರತಿಭಾವಂತ ವಿದ್ಯಾರ್ಥಿ ಅಮಿತ ಪೈ ಮತ್ತು ಕಳೆದ ವರ್ಷ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಪಾಲ್ಗೊಂಡ ಪ್ರಶಾಂತ ಗೌಡ ಇವರಿಗೆ ಬಹುಮಾನ ನೀಡಲಾಯಿತು. ವೃಕ್ಷ ಸಂರಕ್ಷ ಕ ಪುರಸ್ಕಾರವನ್ನು ಸ್ಕೌಟ್‌ ವಿದ್ಯಾರ್ಥಿ ಅರುಣ ನಾಯ್ಕ ಈತನಿಗೆ ಪ್ರಧಾನ ಮಾಡಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಸಂಜು ಶೇಟ ಕಾರ್ಯಕ್ರಮ ನಡೆಸಿಕೊಟ್ಟರು.

ಮುಖ್ಯಾಧ್ಯಾಪಕ ಎಲ್‌.ಎಮ್‌ ಹೆಗಡೆ ಸ್ವಾಗತಿಸಿದರು. ಶಿಕ್ಷ ಕ ಜಿ.ಕೆ.ಭಟ್ಟ ವಂದಿಸಿದರು. ನಿವೃತ್ತ ಉಪನ್ಯಾಸಕ ಜಿ.ಹೆಚ್‌ ನಾಯ್ಕ, ಶಾಂತಾರಾಮ ಭಟ್ಟ, ಎಸ್‌.ಆರ್‌.ಹೆಗಡೆ, ಹರಿಕೇಶ ಭಾಗವತ, ಎಂ. ಕೆ. ಭಟ್ಟ ಸೂರಿ ಮತ್ತಿತರರು ಉಪಸ್ಥತರಿದ್ದರು. ಮುಕ್ತಾ ನಾಯ್ಕ ಮತ್ತು ಸೀಮಾ ಭಟ್ಟ ಕಾರ್ಯಕ್ರಮ ನಿರೂಪಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ