ಆ್ಯಪ್ನಗರ

ವಿದ್ಯಾರ್ಥಿಗಳು ಪ್ರಯೋಗಶೀಲರಾಗಲಿ

ಅಂಕೋಲಾ : ವೈಜ್ಞಾನಿಕ ಮನೋಭಾವ, ನಿರಂತರ ಅಧ್ಯಯನ, ಪ್ರಯೋಗಾತ್ಮಕ ಯಶಸ್ವಿನ ಮೂಲಕ ವಿಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಪ್ರಯೋಗಶೀಲರಾಗಬೇಕು ಎಂದು ಶಿಕ್ಷ ಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಪಿ. ನಾಯ್ಕ ಹೇಳಿದರು.

Vijaya Karnataka 31 Jan 2019, 5:00 am
ಅಂಕೋಲಾ : ವೈಜ್ಞಾನಿಕ ಮನೋಭಾವ, ನಿರಂತರ ಅಧ್ಯಯನ, ಪ್ರಯೋಗಾತ್ಮಕ ಯಶಸ್ವಿನ ಮೂಲಕ ವಿಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಪ್ರಯೋಗಶೀಲರಾಗಬೇಕು ಎಂದು ಶಿಕ್ಷ ಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ರಾಘವೇಂದ್ರ ಪಿ. ನಾಯ್ಕ ಹೇಳಿದರು.
Vijaya Karnataka Web KWR-30ANK4


ಶಿಕ್ಷ ಣ ಇಲಾಖೆ ಅಂಕೋಲಾ, ಅಗಸ್ಥ್ಯ ಪೌಂಡೇಶನ್‌, ಅಂಕೋಲಾ ಹಾಗೂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಖಾರ್ವಿವಾಡೆ, ಬೇಲೆಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾಬಿವೃದ್ಧಿ ಸಮಿತಿಯ ಅಧ್ಯಕ್ಷ ಸಂತೋಷ ಓಮು ಬಾನಾವಳಿಕರ ಅಧ್ಯಕ್ಷ ತೆವಹಿಸಿದ್ದರು.

ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ಅಧ್ಯಕ್ಷ ವಿಜಯ ಆರ್‌. ನಾಯಕ ಮಾತನಾಡಿ, ಎಲ್ಲಿ ಕ್ರೀಯಾಶೀಲತೆ ಇರುತ್ತದೆಯೋ ಇಲ್ಲಿ ಚಟುವಟಿಕೆ ಪುಟಿದೇಳುತ್ತದೆ. ಈ ನಿಟ್ಟಿನಲ್ಲಿ ಇಲ್ಲಿಯ ಶಿಕ್ಷ ಕರ ಬಳಗದ ಕ್ರೀಯಾಶೀಲರಾಗಿ ತಾಲೂಕಿನಲ್ಲಿ ಮಾದರಿ ಶಾಲೆಯಾಗಿ ಹೊರ ಹೊಮ್ಮಿರುವದು ಮಾದರಿ ಎಂದರು.

ಅಗಸ್ಥ್ಯ ಪೌಂಡೇಶನನ ಪ್ರಮುಖ ರಮೇಶ ನಾಯ್ಕ, ಬೇಲೆಕೇರಿ ಸರಕಾರಿ ಪ್ರೌಡ ಶಾಲೆಯ ಮುಖ್ಯಾಧ್ಯಾಪಕಿ ಕಲ್ಪನಾ ಎಸ್‌. ನಾಯಕ, ಭಾವಿಕೇರಿ ಸೆಕೆಂಡರಿ ಪ್ರೌಡ ಶಾಲೆಯ ಶಿಕ್ಷ ಕ ಗಣಪತಿ ನಾಯಕ, ಶಿಕ್ಷ ಣ ಸಂಯೋಜಕ ಗಣಪತಿ ಆಗೇರ, ಬೇಲೆಕೇರಿ ಗ್ರಾಪಂನ ಮಾಜಿ ಉಪಾಧ್ಯಕ್ಷ ನಿತ್ಯಾನಂದ ಗಾಂವಕರ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.

ಬೇಲೆಕೇರಿ ವಲಯದ ಸಿಆರ್‌ಪಿ ಶೋಭಾ ನಾಯ್ಕ, ಭಾವಿಕೇರಿ ನಂ. 2 ಶಾಲೆಯ ಮುಖ್ಯಾಧ್ಯಾಪಕ ಅಶೋಕ ಬಲೆಗಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯಾಧ್ಯಾಪಕ ಮಹೇಶ ಬಂಟ ಸ್ವಾಗತಿಸಿದರು. ವಿಜ್ಞಾನ ಶಿಕ್ಷ ಕರು ಹಾಗೂ ಉಕ ಜಿಲ್ಲಾ ಶಿಕ್ಷ ಕರ ಸಂಘದ ಉಪಾಧ್ಯಕ್ಷ ರು ಆದ ಚಂದ್ರಕಲಾ ನಾಯಕ ನಿರೂಪಿಸಿದರು. ಶಿಕ್ಷ ಕಿ ಪ್ರೇಮಾ ಆರ್‌. ಗಾಂವಕರ ವಂದಿಸಿದರು.

ಶಿಕ್ಷ ಕರಾದ ಜಯಲಕ್ಷ್ಮೀ ಎಚ್‌.ನಯಕ, ಪುಷ್ಪಾ ಜಿ. ನಾಯಕ, ರೇಖಾ ಎಸ್‌. ನಾಯ್ಕ, ಮಾಲತಿ ನಾಯಕ, ಶ್ಯಾಮಲಾ ಎಸ್‌. ನಾಯ್ಕ, ದೈಹಿಕ ಶಿಕ್ಷ ಕ ವೆಂಕಟರಮಣ ನಾಯಕ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ