ಆ್ಯಪ್ನಗರ

ಯುವಕರು ಸಹಕಾರಿ ಕ್ಷೇತ್ರ ಮುನ್ನಡೆಸಲಿ

ಶಿರಸಿ: ಜಿಲ್ಲೆಯಲ್ಲಿಹಿರಿಯರು ಹಿರಿಯ ಮುಂದಾಳುಗಳು ಕಟ್ಟಿ ಬೆಳೆಸಿದ ಸಹಕಾರಿ ರಂಗವು ಕೃಷಿಕರು, ತೋಟಗಾರರ ಬದುಕಿಗೆ ಆಸರೆಯಾಗಿದೆ. ಇಂಥ ಸಹಕಾರಿ ಕ್ಷೇತ್ರದಲ್ಲಿಈಗಿನ ಯುವಜನರು ತೊಡಗಿಕೊಂಡು ಮುನ್ನಡೆಸುವಂತಾಗಬೇಕು ಎಂದು ಸೋಂದಾ ಸ್ವರ್ಣವಲ್ಲಿಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ನುಡಿದರು.

Vijaya Karnataka 17 Feb 2020, 5:56 pm
ಶಿರಸಿ: ಜಿಲ್ಲೆಯಲ್ಲಿಹಿರಿಯರು ಹಿರಿಯ ಮುಂದಾಳುಗಳು ಕಟ್ಟಿ ಬೆಳೆಸಿದ ಸಹಕಾರಿ ರಂಗವು ಕೃಷಿಕರು, ತೋಟಗಾರರ ಬದುಕಿಗೆ ಆಸರೆಯಾಗಿದೆ. ಇಂಥ ಸಹಕಾರಿ ಕ್ಷೇತ್ರದಲ್ಲಿಈಗಿನ ಯುವಜನರು ತೊಡಗಿಕೊಂಡು ಮುನ್ನಡೆಸುವಂತಾಗಬೇಕು ಎಂದು ಸೋಂದಾ ಸ್ವರ್ಣವಲ್ಲಿಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ನುಡಿದರು.
Vijaya Karnataka Web let the youth lead the cooperative field
ಯುವಕರು ಸಹಕಾರಿ ಕ್ಷೇತ್ರ ಮುನ್ನಡೆಸಲಿ


ಶನಿವಾರ ತಾಲೂಕಿನ ಮುಂಡಗನಮನೆ ಗ್ರೂಪ್‌ ಗ್ರಾಮಗಳ ಸೇವಾ ಸಹಕಾರಿ ಸಂಘದ ವಜ್ರ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.

ಯುವ ಸಹಕಾರಿಗಳು ಹೆಚ್ಚಬೇಕು. ಕೃಷಿ ತೋಟಗಾರಿಕಾ ಕ್ಷೇತ್ರದ ಸಹಕಾರಿ ಸಂಸ್ಥೆಗಳು ನಿರಂತರ ಸಕ್ರಿಯವಾಗಿರಬೇಕು ಎಂದು ಆಶಿಸಿದರು.ಸಹಕಾರಿ ತತ್ವದ ವಿಶೇಷ ಅಭಿವ್ಯಕ್ತಿ ಮತ್ತಿಘಟ್ಟಾದಲ್ಲಿಆಗಿದೆ. ಸಂಸ್ಥೆ ಮತ್ತು ಸದಸ್ಯರ ಪ್ರಗತಿ ಒಟ್ಟೊಟ್ಟಿಗೆ ಆಗಿರುವುದು ಮಹತ್ವದ್ದಾಗಿದೆ ಎಂದರು.

ಶಾಂತಣ್ಣ ಗೆ ಸನ್ಮಾನ
ಈ ಸಂದರ್ಭದಲ್ಲಿಮುಂಡಗನಮನೆ ಸಹಕಾರಿ ಸಂಘ ಕಟ್ಟಿ ಬೆಳೆಸಿದ ಹಿರಿಯ ಸಹಕಾರಿ ಧುರೀಣ ಟಿಎಸ್‌ಎಸ್‌ ಸಹಕಾರಿ ಸಂಸ್ಥೆಯ ಅಧ್ಯಕ್ಷ ಶಾಂತಾರಾಮ ಶೀಗೆಹಳ್ಳಿ ಅವರನ್ನು ಶ್ರೀಗಳು ಗೌರವಿಸಿ ಸನ್ಮಾನಿಸಿದರು.

ಶಾಂತ ಪಥ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದ ಮಾಜಿ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, ಸಹಕಾರಿ ಸಂಸ್ಥೆ ಬೆಳೆಯಲು ರಾಜಕಾರಣ ಇರಬಾರದು. ಬಡವರ, ಕೃಷಿ ತೋಟಗಾರಿಕೆ ನಿರತರ ಅಭಿವೃದ್ಧಿಯೇ ಮುಖ್ಯವಾಗಬೇಕು ಎಂದರು.ಹಿರಿಯ ಸಹಕಾರಿ ಮುಂದಾಳು ಶಾಂತಾರಾಮ ಹೆಗಡೆಯವರಂಥ ಸಜ್ಜನ, ಪ್ರಾಮಾಣಿಕರು ವಿರಳ. ಅವರು ಕಟ್ಟಿದ ಸಂಸ್ಥೆಯಿಂದ ಅಡಕೆ ಬೆಳೆಗಾರರ ಜೀವನಕ್ಕೆ ಭದ್ರತೆ ಸಿಕ್ಕಿದೆ. ಸಮಾಜ ಇಂಥ ಸಜ್ಜನರನ್ಙು ಮರೆಯಬಾರದು ಎಂದರು.

ಪರಿಸರ ಲೇಖಕ ಶಿವಾನಂದ ಕಳವೆ ಅಭಿನಂದನೆ ನುಡಿಗಳನ್ನಾಡಿದರು. ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಪ್ರಾಸ್ತಾವಿಕ ಮಾತನಾಡಿದರು. ನಿಕಟಪೂರ್ವ ಕಾರ್ಯದರ್ಶಿ ವಿ. ಆರ್‌.ಹೆಗಡೆ ಸಂದೇಶ ಓದಿದರು. ಕಾರ್ಯದರ್ಶಿ ನಾಗಪತಿ ಭಟ್ಟ ಸ್ವಾಗತಿಸಿದರು. ಶ್ರೀನಿವಾಸ ಭಾಗವತ ನಿರೂಪಿಸಿದರು. ಸಂಗೀತ ಕಾರ್ಯಕ್ರಮ, ಸಂಗ್ಯಾ ಬಾಳ್ಯಾ ಮತ್ತು ನಾಟಕ ಪ್ರದರ್ಶನ ಏರ್ಪಾಡಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ