ಆ್ಯಪ್ನಗರ

ಅನಂತಕುಮಾರ ಹಗಲುಗನಸು ಕಾಣುವುದನ್ನು ಬಿಡಲಿ

ಅಂಕೋಲಾ : ಅನಂತ ಕುಮಾರ ಗೆಲ್ಲುತ್ತೇನೆಂದು ಹಗಲುಗನಸು ಕಾಣುವುದನ್ನು ಬಿಟ್ಟು ದೇವರಲ್ಲಿ ಮಾಡಿಕೊಂಡಿರುವ ಹರಕೆಗಳನ್ನು ತೀರಿಸಿ ಇನ್ನೂ ಮುಂದಾದರೂ ಜನರ ಮಧ್ಯೆ ಇರಲಿ ಎಂದು ಉ.ಕ. ಲೋಕಸಭಾ ಕ್ಷೇತ್ರದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷ ದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಹೇಳಿದರು.

Vijaya Karnataka 10 May 2019, 5:00 am
ಅಂಕೋಲಾ : ಅನಂತ ಕುಮಾರ ಗೆಲ್ಲುತ್ತೇನೆಂದು ಹಗಲುಗನಸು ಕಾಣುವುದನ್ನು ಬಿಟ್ಟು ದೇವರಲ್ಲಿ ಮಾಡಿಕೊಂಡಿರುವ ಹರಕೆಗಳನ್ನು ತೀರಿಸಿ ಇನ್ನೂ ಮುಂದಾದರೂ ಜನರ ಮಧ್ಯೆ ಇರಲಿ ಎಂದು ಉ.ಕ. ಲೋಕಸಭಾ ಕ್ಷೇತ್ರದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷ ದ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಹೇಳಿದರು.
Vijaya Karnataka Web lets see what ananthakumara daydream looks like
ಅನಂತಕುಮಾರ ಹಗಲುಗನಸು ಕಾಣುವುದನ್ನು ಬಿಡಲಿ


ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇವೇಗೌಡರ ಅಣತಿಯಂತೆ ದೇಶದ ಗದ್ದುಗೆಯನ್ನು ಹಿಡಿಯುವವರು ನಿರ್ಧಾರವಾಗುತ್ತಾರೆ. ಮೋದಿ ಮತ್ತೊಮ್ಮೆ ಪ್ರಧಾನಿ ಪಟ್ಟ ಏರಲು ಸಾಧ್ಯವಿಲ್ಲ. ದೇಶದ ಜನ ಈ ಸರಕಾರವನ್ನು ಕಿತ್ತೊಗೆದು ಮೈತ್ರಿ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಾರೆ.

ರಾಜ್ಯದಲ್ಲಿಯೂ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಐದು ವರ್ಷ ಪೂರ್ಣಗೊಳಿಸಲಿದೆ. ಈ ಸರಕಾರಕ್ಕೆ ಯಾವುದೇ ಗಂಡಾಂತರವಿಲ್ಲ. ಇದು ಸುಭದ್ರವಾಗಿದೆ. ಉತ್ತರ ಕನ್ನಡ ಜನತೆ ನನಗೆ ಸಂಪೂರ್ಣ ಬೆಂಬಲ ನೀಡಿದರೆ ಈ ಭಾಗದ ಜ್ವಲಂತ ಸಮಸ್ಯೆಗಳ ಪಟ್ಟಿ ನನ್ನಲ್ಲಿದೆ. ನಾನು ಸಂಸದನಾಗಿ ಆಯ್ಕೆಯಾದ ಬಳಿಕ ಆ ಸಮಸ್ಯೆಗಳನ್ನು ಕೇಂದ್ರದಲ್ಲಿ ಪ್ರಧಾನಿಯವರ ಎದುರು ನಿಂತು ಹೋರಾಟ ಮಾಡಿ ಬಗೆಹರಿಸುತ್ತೇನೆ ಎಂದರು.

ಜೆಡಿಎಸ್‌ ಪ್ರಮುಖರಾದ ಮೋಹಿನಿ ನಾಯ್ಕ, ರವಿ ನಾಯ್ಕ, ಸಂದೀಪ ಬಂಟ, ಗುರುದಾಸ ಬಾನಾವಾಳಿಕರ, ಗಣಪತಿ ಬಾನಾವಾಳಿಕರ, ಆರ್‌.ಜಿ.ನಾಯ್ಕ, ಎಂ.ಎಚ್‌.ಗೌಡ, ಉಪೇಂದ್ರ ನಾಯ್ಕ ಉಪಸ್ಥಿತರಿದ್ದರು.

ಅನಂತ ಕುಮಾರ ಹೆಗಡೆ ಅವರ 25 ವರ್ಷದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಈ ಜಿಲ್ಲೆಯ ಜನ ನಮ್ಮ ಕೈಹಿಡಿದು ಗೆಲ್ಲಿಸಲು ಶ್ರಮ ಪಟ್ಟಿದ್ದಾರೆ. ಮೋದಿ ಹೆಸರಿನಲ್ಲಿ ಮತ ಯಾಚಿಸಿದ ಇವರಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ. ಕೊನೆಯ ಪಕ್ಷ ನಾವು ಒಂದು ಮತದಿಂದಾದರೂ ಗೆದ್ದೇ ಗೆಲ್ಲುತ್ತೇವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ