ಆ್ಯಪ್ನಗರ

ಅಂಕೋಲಾದಲ್ಲಿ ಗ್ರಂಥಪಾಲಕರ ದಿನಾಚರಣೆ

ಕಾರವಾರ: ಭಾರತೀಯ ಗ್ರಂಥಾಲಯದ ಪಿತಾಮಹರಾದ ಡಾ.ಎಸ್‌.ಆರ್‌. ರಂಗನಾಥನ್‌ ಅವರ 127ನೇ ಜಯಂತಿಯ ಅಂಗವಾಗಿ ಅಂಕೋಲಾದ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ 'ಗ್ರಂಥಪಾಲಕರ ದಿನ'ಆಚರಿಸಲಾಯಿತು.

Vijaya Karnataka 21 Aug 2019, 5:00 am
ಕಾರವಾರ: ಭಾರತೀಯ ಗ್ರಂಥಾಲಯದ ಪಿತಾಮಹರಾದ ಡಾ.ಎಸ್‌.ಆರ್‌. ರಂಗನಾಥನ್‌ ಅವರ 127ನೇ ಜಯಂತಿಯ ಅಂಗವಾಗಿ ಅಂಕೋಲಾದ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ 'ಗ್ರಂಥಪಾಲಕರ ದಿನ'ಆಚರಿಸಲಾಯಿತು.
Vijaya Karnataka Web librarians day in angola
ಅಂಕೋಲಾದಲ್ಲಿ ಗ್ರಂಥಪಾಲಕರ ದಿನಾಚರಣೆ


ಕಾರ್ಯಕ್ರಮದ ಅಂಗವಾಗಿ ಪದವಿ ವಿದ್ಯಾರ್ಥಿಗಳಿಗೆ 'ನನ್ನ ಮೆಚ್ಚಿನ ಸಾಹಿತ್ಯ, ಸಾಹಿತಿ' ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು. ಹತ್ತಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ವಿಭಿನ್ನ ಸಾಹಿತ್ಯ ಹಾಗೂ ಸಾಹಿತಿಗಳ ಕುರಿತಾಗಿ ಭಾಷಣಗಳನ್ನು ಮಂಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಚಾರ್ಯ ಡಾ.ರಾಮಕೃಷ್ಣ ಗುಂದಿಯವರು ಮಾತನಾಡಿ, ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಮಹತ್ವವನ್ನು ತಿಳಿಸಿದರು.

ಅಧ್ಯಕ್ಷ ತೆ ವಹಿಸಿದ್ದ ಜಿ.ಸಿ.ಕಾಲೇಜಿನ ಪ್ರಾಚಾರ್ಯ ಡಾ.ಬಿ.ವಿ. ಶೆಟ್ಟಿಗಾರ್‌ ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಮುಂಬರುವ ದಿನಗಳಲ್ಲಿ ಇನ್ನಷ್ಟು ಇಂತಹ ಸ್ಪರ್ಧೆಗಳು ನಡೆಯಲಿ ಎಂದು ಹಾರೈಸಿದರು.

ಗ್ರಂಥಪಾಲಕ ಡಾ.ನಂಜುಡಯ್ಯ ಇವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಡಾ.ರಂಗನಾಥನ್‌ ಅವರ ಕುರಿತು ಸಮಗ್ರ ಮಾಹಿತಿ ನೀಡಿದರು. ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಗ್ರಂಥಾಲಯ ಸಮಿತಿಯ ಅಧ್ಯಕ್ಷ ರು ಹಾಗೂ ಸಂಸ್ಕೃತ ವಿಭಾಗ ಮುಖ್ಯಸ್ಥರಾದ ಪ್ರೊಫೆಸರ್‌ ಶೈಲಜಾ ಭಟ್‌ ಸಂಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ, ನಿರ್ವಹಿಸಿದರು.

ಸ್ಪರ್ಧೆಯ ನಿರ್ಣಾಯಕರಾಗಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅಶೋಕಕುಮಾರ್‌, ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ.ಎಸ್‌.ವಿ. ವಸ್ತ್ರದ್‌ ಹಾಗೂ ಆಫೀಸ್‌ ಅಧೀಕ್ಷ ಕ ಡಾ.ಸೋಮಶೇಖರ ಸಜ್ಜನ್‌ ಇವರು ಸಹಕರಿಸಿದರು.

ಬಿಎಸ್‌ಸಿ ವಿದ್ಯಾರ್ಥಿನಿಯರಾದ ಕುಮಾರಿ ವೈಷ್ಣವಿ ಹಾಗೂ ಶಾಲಿನಿ ಸರಸ್ವತೀ ಸ್ತುತಿಯನ್ನು ಹಾಡಿದರು. ಬಿ.ಕಾಂ. ವಿದ್ಯಾರ್ಥಿನಿಯರಾದ ಕುಮಾರಿ ಪ್ರಜ್ಞಾ, ಕೀರ್ತಿ ಹಾಗೂ ಪ್ರತೀಕ್ಷಾ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ