ಆ್ಯಪ್ನಗರ

ಲಯನ್ಸ್‌ ಕ್ಲಬ್‌ ಕಾರ‍್ಯಕ್ರಮ

ಸಿದ್ದಾಪುರ : ಆರೋಗ್ಯ ನಮ್ಮ ಬದುಕಿನ ಅಮೂಲ್ಯ ಸಂಪತ್ತಾಗಿದ್ದು ವಿದ್ಯಾರ್ಥಿಗಳು ದುಷ್ಟ ಚಟಗಳಿಂದ ದೂರವಿದ್ದಲ್ಲಿತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂದು ಲಯನ್ಸ್‌ ಮಾಜಿ ಜಿಲ್ಲಾಗವರ್ನರ್‌ ಡಾ.ರವಿ ಹೆಗಡೆ ಹೂವಿನಮನೆ ಹೇಳಿದರು.

Vijaya Karnataka 1 Oct 2019, 5:00 am
ಸಿದ್ದಾಪುರ : ಆರೋಗ್ಯ ನಮ್ಮ ಬದುಕಿನ ಅಮೂಲ್ಯ ಸಂಪತ್ತಾಗಿದ್ದು ವಿದ್ಯಾರ್ಥಿಗಳು ದುಷ್ಟ ಚಟಗಳಿಂದ ದೂರವಿದ್ದಲ್ಲಿತಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ಸಾಧ್ಯ ಎಂದು ಲಯನ್ಸ್‌ ಮಾಜಿ ಜಿಲ್ಲಾಗವರ್ನರ್‌ ಡಾ.ರವಿ ಹೆಗಡೆ ಹೂವಿನಮನೆ ಹೇಳಿದರು.
Vijaya Karnataka Web lions club program
ಲಯನ್ಸ್‌ ಕ್ಲಬ್‌ ಕಾರ‍್ಯಕ್ರಮ


ತಾಲೂಕಿನ ಕೋಲಸಿರ್ಸಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿಜ್ಞಾನ ಸಂಘದ ಆಶ್ರಯದಲ್ಲಿ ಲಯನ್ಸ್‌ ಕ್ಲಬ್‌ ಆಯೋಜಿಸಿದ್ದ ದಂತ ಆರೋಗ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಆರೋಗ್ಯದ ಮಹತ್ವ ತಿಳಿಸಬೇಕು. ಇದು ಅವರ ಭವಿಷ್ಯಕ್ಕೆ ಹೆಚ್ಚು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳಿಗೆ ಹಲ್ಲುಗಳ ಕುರಿತು ಮಾರ್ಗದರ್ಶನ ಅಗತ್ಯ ತಜ್ಞ ವೈದ್ಯರಿಂದ ಹಲ್ಲುಗಳ ರಕ್ಷಣೆ ಮತ್ತು ಮಹತ್ವದ ಕುರಿತು ಕಾಲಕಾಲಕ್ಕೆ ಮಾಹಿತಿ ನೀಡಬೇಕು ಎಂದರು. ಲಯನ್ಸ್‌ ಜಿಲ್ಲಾಛೇರ್ಮನ್‌ ಜಿ.ಜಿ. ಹೆಗಡೆ ಬಾಳಗೋಡ ಮಾತನಾಡಿ, ವಿದ್ಯಾರ್ಥಿಗಳಲ್ಲಿಆರೋಗ್ಯ ಜಾಗೃತಿ ಇರುವುದು ಅತ್ಯಂತ ಅಗತ್ಯ ಜೊತೆಯಲ್ಲಿಸಾಹಿತ್ಯ, ಸಂಸ್ಕೃತಿ, ಲಲಿತಕಲೆಗಳ ಕುರಿತು ಹೆಚ್ಚು ಜ್ಞಾನವನ್ನು ನೀಡುವುದು ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಯ ದೃಷ್ಟಿಯಿಂದ ಹೆಚ್ಚು ಪೂರಕ ಎಂದು ಹೇಳಿದರು. ಲಯನ್ಸ್‌ ಅಧ್ಯಕ್ಷ ಸಿ.ಎಸ್‌. ಗೌಡರ್‌ ಹೆಗ್ಗೋಡ್ಮನೆ ಅಧ್ಯಕ್ಷತೆವಹಿಸಿದ್ದರು.

ಇದೇ ಸಂದರ್ಭದಲ್ಲಿ ಕಲಾಶ್ರೀ ಪುರಸ್ಕಾರ ಪಡೆದ ಚರಣಾ ಅವಳಿಗೆ ಲಯನ್ಸ್‌ ಕ್ಲಬ್‌ನಿಂದ ಬಹುಮಾನ ವಿತರಿಸಲಾಯಿತು. ಎಸ್‌ಡಿಎಂಸಿ ಅಧ್ಯಕ್ಷ ಆನಂದ ಹೆಚ್‌. ನಾಯ್ಕ ಹಾಗೂ ದಂತವೈದ್ಯರಾದ ಡಾ.ರಾಜು ಭಟ್‌, ಡಾ. ನಿಷಾ ಕಲಾದಗಿ ಲಯನ್ಸ್‌ ಕಾರ್ಯದರ್ಶಿ ಬಿ.ಜಿ. ಜೋಶಿ ಮಾತನಾಡಿದರು. ಮುಖ್ಯಾಧ್ಯಾಪಕ ಆರ್‌.ಎಚ್‌. ಗೌಡ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಭಾಗ್ಯಶ್ರೀ ಹೆಚ್‌.ಆರ್‌. ನಿರೂಪಿಸಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ