ಆ್ಯಪ್ನಗರ

ಸಾಹಿತ್ಯದಿಂದ ರಾಷ್ಟ್ರ ನಿರ್ಮಾಣ

ವಿಕ ಸುದ್ದಿಲೋಕ 30 May 2016, 4:05 pm
ಶಿರಸಿ : ಸಾಹಿತ್ಯದಿಂದ ಸುಂದರ ರಾಷ್ಟ್ರ ನಿರ್ಮಾಣ ಸಾಧ್ಯವಿದೆ. ಸಾಹಿತ್ಯವನ್ನು ಸಮಾಜ ಪೋಷಿಸಿದರೆ ಸಮಾಜವನ್ನು ಸಾಹಿತ್ಯ ರಕ್ಷಿಸುತ್ತದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಷ್ಟ್ರೀಯ ಸಂಚಾಲಕ ಋಷಿಕುಮಾರ ಮಿಶ್ರಾ ಅಭಿಪ್ರಾಯಪಟ್ಟರು.
Vijaya Karnataka Web literature in nation building
ಸಾಹಿತ್ಯದಿಂದ ರಾಷ್ಟ್ರ ನಿರ್ಮಾಣ


ತಾಲೂಕಿನ ಯಡಳ್ಳಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಏರ್ಪಡಿಸಿರುವ ಕರ್ನಾಟಕ ಪ್ರಾಂತ ಪ್ರಥಮ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಭಾನುವಾರ ಬಹುಭಾಷಾ ಸಾಹಿತ್ಯ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಾಹಿತ್ಯ ಲೋಕಸೇವೆಯದ್ದೇ ಭಾಗವಾಗಿದ್ದು ಸಾಹಿತ್ಯಕಾರರು ಜನಾಭಿವ್ಯಕ್ತಿ ರೂಪಿಸುವ ಕೆಲಸ ಮಾಡಬೇಕು. ಸಮಾಜದಲ್ಲಿ ವಿಶ್ವಾಸ ಇಡುವ ಕಾರ್ಯ ಆಗಬೇಕು. ದೇಶದಲ್ಲಿ ಪ್ರತಿಪಾದಿಸುವ ವಿಶ್ವಬಂಧುತ್ವ ಸಾಕಾರವಾಗಬೇಕು ಎಂದರು. ಪಾಶ್ಚಿಮಾತ್ಯದ ಗಾಳಿಯ ಹೊಡೆತಕ್ಕೆ ಭಾರತೀಯ ಜೀವನ ಪದ್ಧತಿ ಕ್ಷೀಣಿಸುತ್ತಿದೆ. ಪ್ರತಿಯೊಬ್ಬರು ಇದನ್ನು ಅರ್ಥೆಸಿಕೊಂಡು ಜೀವನ ಪದ್ಧತಿಯ ಬೇರನ್ನು, ಮಣ್ಣಿನ ಗುಣವನ್ನು ಅರಿಯಬೇಕು ಎಂದು ಸಲಹೆ ನೀಡಿದರು.

ಕೊಡವದ ಅದ್ದಡ ಕಾರ್ಯಪ್ಪ ಮಾತನಾಡಿ, ದೇಶಕಾಯುವ ಸಂಸ್ಕೃತಿ ಅರಿವನ್ನು ಹುಟ್ಟು ಮಗುವಿನಲ್ಲೂ ಮೂಡಿಸಬೇಕು ಎಂದು ಪ್ರತಿಪಾದಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ದೊಡ್ಡರಂಗೇಗೌಡ, ತುಳುವಿನ ರೋಹಿಣಾಕ್ಷ ಶಿರ್ಲಾಲ, ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನ ಸಂಯೋಜಕ ರಘುನಂದನ ಭಟ್ಟ, ಜಿಲ್ಲಾ ಸಂಚಾಲಕ ಪ್ರಕಾಶ ಭಾಗವತ ಮುಂತಾದವರು ಪಾಲ್ಗೊಂಡಿದ್ದರು. ವಾಸುದೇವ ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. ಪ್ರಕತಿಯನ್ನು ಸೇರಿಸಿ ಕೌಟುಂಬಿಕ ಕಲ್ಪನೆ ಕಟ್ಟಿಕೊಟ್ಟವರು ಶಿವರಾಮ ಕಾರಂತರಾಗಿದ್ದಾರೆ ಎಂದು ಖ್ಯಾತ ವಿಮರ್ಶಕ ಆರ್.ಡಿ.ಹೆಗಡೆ ಆಲ್ಮನೆ ಹೇಳಿದರು.

ಕಾರಂತರ ಕಾವ್ಯದ ಬೆಳಕು: ಎರಡನೇ ದಿನದ ಗೋಷ್ಠಿಯಲ್ಲಿ ಶಿವರಾಮ ಕಾರಂತ ಹಾಗೂ ಕುವೆಂಪು ಅವರ ಕಾವ್ಯಗಳ ಬಗ್ಗೆ ಬೆಳಕು ಚೆಲ್ಲಿದ್ದು ವಿಶೇಷವಾಗಿತ್ತು. ಅದರಲ್ಲೂ ಅದರಲ್ಲಿನ ಕೌಟುಂಬಿಕ ವೌಲ್ಯಗಳನ್ನು ವಿದ್ವಾಂಸರು ತೆರೆದಿಟ್ಟರು.

ಹಾದಿಗಲ್ಲು ಲಕ್ಷ್ಮೀನಾರಾಯಣ , ಗಂಡ ಹೆಂಡತಿ ನಡುವೆ ಸೋಲುವಿಕೆಯಲ್ಲಿ ಸ್ಪರ್ಧೆ ಇರಬೇಕು. ಇಂತಹ ವೌಲ್ಯಯುತ ಅಂಶಗಳನ್ನು ಕುವೆಂಪು ಸಾಹಿತ್ಯ ಒಳಗೊಂಡಿದೆ ಎಂದರು ಆರ್.ಡಿ.ಹೆಗಡೆ ಆಲ್ಮನೆ ಮಾತನಾಡಿ, ಈವರೆಗೆ ಕಾರಂತರ ಸಾಹಿತ್ಯದ ವಿಮರ್ಶೆ ನಡೆದಿದ್ದರೂ ಯಾರೂ ಅವರ ಬರಹದಲ್ಲಿ ಅಳವಡಿಕೆಯಾದ ಕೌಟುಂಬಿಕ ವೌಲ್ಯ ತೆರೆದಿಡಲಿಲ್ಲ. ಮನುಷ್ಯನ ಬದುಕಿನ ಬಗ್ಗೆ ಗೌರವ ಇರುವ ಕಾರಣದಿಂದಲೇ ಅವರು ಕೌಟುಂಬಿಕ ವೌಲ್ಯಗಳ ಬರವಣಿಗೆಗೆ ಬಹಿರಂಗವಾಗಿ ಮುಂದಾಗಿಲ್ಲ. ಪ್ರಕತಿಯನ್ನು ಸೇರಿಸಿ ಕೌಟುಂಬಿಕ ಕಲ್ಪನೆ ಕಟ್ಟಿಕೊಟ್ಟವರು ಶಿವರಾಮ ಕಾರಂತರು ಎಂದು ಅಭಿಪ್ರಾಯಪಟ್ಟರು.

ಗೋಷ್ಠಿಯ ಅಧ್ಯಕ್ಷತೆಯನ್ನು ಸಿದ್ದಾಪುರದ ಪ್ರೊ.ಕೆ.ಎ.ಭಟ್ಟ ವಹಿಸಿದ್ದರು. ಸಮ್ಮೇಳನದ ಸವಾಧ್ಯಕ್ಷ ಪ್ರೋ.ದೊಡ್ಡರಂಗೇಗೌಡ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ