ಆ್ಯಪ್ನಗರ

ಜಾನುವಾರು ಚಿಕಿತ್ಸಾ ಶಿಬಿರ

ಹಳಿಯಾಳ : ಇಲ್ಲಿಯ ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟ್‌ ಸಂಸ್ಥೆ, ತುಳಜಾ ಭವಾನಿ ಧರ್ಮಾರ್ಥ, ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಪಶು ಸಂಗೋಪನೆ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಜತಗಾ ಗೌಳಿವಾಡಾ ಗ್ರಾಮದಲ್ಲಿಜಾನುವಾರುಗಳಿಗೆ ಉಚಿತ ಚಿಕಿತ್ಸಾ ಶಿಬಿರವನ್ನು ಬುಧವಾರ ನಡೆಸಲಾಯಿತು.

Vijaya Karnataka 17 Oct 2019, 5:00 am
ಹಳಿಯಾಳ : ಇಲ್ಲಿಯ ಕೆನರಾ ಬ್ಯಾಂಕ್‌ ದೇಶಪಾಂಡೆ ಆರ್‌ಸೆಟ್‌ ಸಂಸ್ಥೆ, ತುಳಜಾ ಭವಾನಿ ಧರ್ಮಾರ್ಥ, ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಪಶು ಸಂಗೋಪನೆ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಜತಗಾ ಗೌಳಿವಾಡಾ ಗ್ರಾಮದಲ್ಲಿಜಾನುವಾರುಗಳಿಗೆ ಉಚಿತ ಚಿಕಿತ್ಸಾ ಶಿಬಿರವನ್ನು ಬುಧವಾರ ನಡೆಸಲಾಯಿತು.
Vijaya Karnataka Web 16 HLY 1_24


ಶಿಬಿರದಲ್ಲಿ200ಕ್ಕೂ ಅಧಿಕ ಜಾನುವಾರುಗಳಿಗೆ ಉಚಿತವಾಗಿ ಕಾಲು ಮತ್ತು ಬಾಯಿ ಬೇನೆ ಚುಚ್ಚುಮದ್ದು, ಪೌಷ್ಟಿಕ ಆಹಾರ ಹಾಗೂ ಔಷಧಿಗಳನ್ನು ವಿತರಿಸಲಾಯಿತು.

ಪಶು ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿ ಎಂ.ಬಿ.ಹಿರೇಮಠ ಮಾತನಾಡಿ, ಜಾನುವಾರುಗಳು ರೈತರ ಬೆನ್ನಲುಬು. ಅವು ಆರೋಗ್ಯಯುತ ಹಾಗೂ ಸದೃಢವಾಗಿದ್ದರೆ ಮಾತ್ರ ರೈತರು ಚೆನ್ನಾಗಿ ಬಾಳಲು ಸಾಧ್ಯ. ಆದ್ದರಿಂದ ಹೆಚ್ಚಿನ ರೈತಾಪಿ ಜನರು ತಮ್ಮ ಜಾನುವಾರುಗಳೊಂದಿಗೆ ಉಚಿತ ಚಿಕಿತ್ಸಾ ಶಿಬಿರದಲ್ಲಿಭಾಗವಹಿಸಿ ಇದರ ಪ್ರಯೋಜನ ಪಡೆಯಬೇಕೆಂದು ಮನವಿ ಮಾಡಿದರು.

ಪಶು ಸಂಗೋಪನೆ ಇಲಾಖೆಯ ವೈದ್ಯಾಧಿಕಾರಿ ಕೆ.ಎಂ.ನದಾಫ, ಗ್ರಾ.ಪಂ. ಸದಸ್ಯ ವಿಠ್ಠು ಏಡಗೆ, ಸಿಬ್ಬಂದಿ ಎಸ್‌.ಡಿ.ಬಿರ್ಜೆ, ಹನುಮಂತ ಹರಿಜನ, ಕ್ಷೇತ್ರ ಮೇಲ್ವಿಚಾರಕ ಉಳವಯ್ಯಾ ಬೆಂಡಿಗೇರಿ ಮತ್ತಿತರರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ