ಆ್ಯಪ್ನಗರ

ಸಾಲ ಮರುಪಾವತಿ ಸಂಕಷ್ಟ

ಮುಂಡಗೋಡ : ರಾಜ್ಯ ಸರಕಾರ ಜೂನ್‌.30 ರ ವರೆಗೆ ರೈತರು ಶೂನ್ಯ ಬಡ್ಡಿದರದ ಸಾಲವನ್ನು ಮರುಪಾವತಿ ಮಾಡಲು ಆದೇಶಿಸಿದೆ. ಆದರೆ ನಬಾರ್ಡ ಬ್ಯಾಂಕ್‌ನವರು ಮೇ 30 ರ ಒಳಗೆ ರೈತರು ಸಾಲ ಮರುಪಾವತಿ ಮಾಡಲು ಸಹಕಾರಿ ಸಂಘಗಳಿಗೆ ಆದೇಶ ಮಾಡಿದೆ. ಈ ಗೊಂದಲದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೆರಡು ದಿವಸಗಳಲ್ಲಿರೈತರು ಸಾಲ ಮರುಪಾವತಿ ಮಾಡದೇ ಇದ್ದರೆ ಶೇ.5 ರಷ್ಟು ಬಡ್ಡಿ ತುಂಬಬೇಕಿದೆ.

Vijaya Karnataka 29 May 2020, 5:00 am
ಮುಂಡಗೋಡ : ರಾಜ್ಯ ಸರಕಾರ ಜೂನ್‌.30 ರ ವರೆಗೆ ರೈತರು ಶೂನ್ಯ ಬಡ್ಡಿದರದ ಸಾಲವನ್ನು ಮರುಪಾವತಿ ಮಾಡಲು ಆದೇಶಿಸಿದೆ. ಆದರೆ ನಬಾರ್ಡ ಬ್ಯಾಂಕ್‌ನವರು ಮೇ 30 ರ ಒಳಗೆ ರೈತರು ಸಾಲ ಮರುಪಾವತಿ ಮಾಡಲು ಸಹಕಾರಿ ಸಂಘಗಳಿಗೆ ಆದೇಶ ಮಾಡಿದೆ. ಈ ಗೊಂದಲದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೆರಡು ದಿವಸಗಳಲ್ಲಿರೈತರು ಸಾಲ ಮರುಪಾವತಿ ಮಾಡದೇ ಇದ್ದರೆ ಶೇ.5 ರಷ್ಟು ಬಡ್ಡಿ ತುಂಬಬೇಕಿದೆ.
Vijaya Karnataka Web loan repayment hardship
ಸಾಲ ಮರುಪಾವತಿ ಸಂಕಷ್ಟ


ಜಿಲ್ಲಾಮಧ್ಯವರ್ತಿ ಬ್ಯಾಂಕ್‌ ರೈತರ ನೆರವಿಗೆ ಬಂದು ಮುಂಗಡ ಸಾಲ ಮಂಜೂರಿ ಮಾಡಿ ಮರುಪಾವತಿಗೆ ಅವಕಾಶ ಕಲ್ಪಿಸದಿದ್ದರೆ ಖಾಸಗಿ ಲೇವಾದೇವಿದಾರರು ಇದರ ಲಾಭ ಪಡೆಯುತ್ತಾರೆ. ರೈತರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ.ತಾಲೂಕಿನ 13 ಸಹಕಾರಿ ಸಂಘಗಳಿಂದ ಸುಮಾರು 11 ಸಾವಿರ ರೈತರು ಅಂದಾಜು ರೂ 78 ಕೋಟಿ ಶೂನ್ಯ ಬಡ್ಡಿದರದ ಸಾಲವನ್ನು ಪ್ರತಿ ವರ್ಷ ಮೇ 5 ರಂದು ಪಡೆದು ಎಪ್ರಿಲ್‌ 15 ರ ಒಳಗೆ ತುಂಬುತ್ತಿದ್ದರು. ಆದರೆ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿಮಾರ್ಚ 24 ರಿಂದ ಸರಕಾರ ಲಾಕ್‌ಡೌನ್‌ ಮಾಡಿದ್ದರ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಬೆಳೆದ ಬೆಳೆ ಮಾರಲಾಗದೆ ಹಾನಿ ಅನುಭವಿಸಿದ್ದ ಇವರು ಸಾಲ ತುಂಬುವುದಿರಲಿ ಕುಟುಂಬ ಸದಸ್ಯರ ಹೊಟ್ಟೆ ತುಂಬಿಸಲು ಪರದಾಡಿದ್ದರು. ಈ ಹಿನ್ನೆಲೆಯಲ್ಲಿಸರಕಾರ ಜೂನ 30 ರ ವರೆಗೆ ಸಾಲ ಮರುಪಾವತಿ ಮಾಡಲು ರೈತರಿಗೆ ಅವಕಾಶ ಕಲ್ಪಿಸಿತ್ತು. ಇದನ್ನು ನಂಬಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದರು.

ಖಾಸಗಿ ಲೇವಾದಾರರ ಮೊರೆ : ಆದರೆ ಈಗ ನಬಾರ್ಡ ಬ್ಯಾಂಕ್‌ನವರು ಮೇ 30 ರ ಒಳಗೆ ತುಂಬಿದರೆ ಮಾತ್ರ ಶೂನ್ಯ ಬಡ್ಡಿದರದ ಲಾಭ ರೈತರಿಗೆ ಸಿಗುತ್ತದೆ ಇಲ್ಲವಾದರೆ ಬಡ್ಡಿಯನ್ನು ರೈತರೆ ತುಂಬಬೇಕು ಎಂದು ಆದೇಶ ಮಾಡಿದ್ದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಹಕಾರಿ ಸಂಘಗಳಿಗೆ ಸಾಲ ತುಂಬಲು ಆಗದೆ ಇರುವ ಕಾರಣ ಬಹುತೇಕ ರೈತರು ಖಾಸಗಿ ಲೇವಾದೇವಿದಾರರ ಮೊರೆ ಹೋಗಿದ್ದಾರೆ. ಅವರು ಶೇ 3 ರಿಂದ 5 ರಂತೆ ಬಡ್ಡಿಯನ್ನು ರೈತರಿಂದ ಪಡೆದು ಸಾಲ ತುಂಬಿ ಮರಳಿ ಪಡೆಯುತ್ತಾರೆ. ಶೂನ್ಯ ಬಡ್ಡಿಯ ಲಾಭದಿಂದ ರೈತರು ವಂಚಿತರಾಗುತ್ತಾರೆ.

15 ದಿನ ಹಿಂದೆ ಉಸ್ತುವಾರಿ ಮಂತ್ರಿ ಶಿವರಾಮ ಹೆಬ್ಬಾರ ಅವರಿಗೆ ಮುಂಡಗೋಡ ಸಹಕಾರಿ ಸಂಘಗಳ ಪರವಾಗಿ ಚಿಗಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಎಲ್‌.ಟಿ.ಪಾಟೀಲ ಮತ್ತು ಮುಂಡಗೋಡ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಬಿಜಾಪುರ ಮನವಿ ಸಲ್ಲಿಸಿ ಸರಕಾರದ ಆದೇಶದಂತೆ ಜೂನ 30 ವರೆಗೆ ಶೂನ್ಯ ಬಡ್ಡಿದರದ ಸಾಲ ತುಂಬಲು ರೈತರಿಗೆ ಅವಕಾಶ ಕೊಡುವಂತೆ ಒತ್ತಾಯಿಸಿದ್ದರು. ಸಚಿವರು ಮಂಗಳವಾರ ಈ ಕುರಿತು ಮುಂಡಗೋಡಿನ ಟಿಎಪಿಸಿಎಮ್‌ಎಸ್‌ ನಲ್ಲಿಎಲ್ಲಸಹಕಾರಿ ಸಂಘಗಳ ಪ್ರತಿನಿಧಿಗಳೂಂದಿಗೆ ಸಭೆ ನಡೆಸಿ ನಬಾರ್ಡ ಆದೇಶದಂತೆ ಮೇ 30 ರ ಒಳಗೆ ರೈತರು ಸಾಲ ಮರುಪಾವತಿ ಮಾಡಿ ಶೂನ್ಯ ಬಡ್ಡಿದರದ ಲಾಭ ಪಡೆಯಲು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ